<p><strong>ನವದೆಹಲಿ:</strong> ಡೆಟ್ ಮ್ಯೂಚುವಲ್ ಫಂಡ್ಗಳಿಂದ ಮೇ ತಿಂಗಳಿನಲ್ಲಿ ₹ 32,722 ಕೋಟಿ ಬಂಡವಾಳ ಹಿಂತೆಗೆತ ಆಗಿದೆ.</p>.<p>ಹಣದುಬ್ಬರವನ್ನು ನಿಯಂತ್ರಿಸಲು ಆರ್ಬಿಐ ಹಣಕಾಸು ನೀತಿ ಬಿಗಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಂಡವಾಳ ಹೊರಹರಿವು ಕಂಡುಬಂದಿದೆ.</p>.<p>ಏಪ್ರಿಲ್ನಲ್ಲಿ ಡೆಟ್ ಮ್ಯೂಚುವಲ್ ಫಂಡ್ಗಳು ₹ 54,656 ಕೋಟಿ ಬಂಡವಾಳ ಆಕರ್ಷಿಸಿದ್ದವು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್ಐ) ಮಾಹಿತಿ ನೀಡಿದೆ.</p>.<p>ಡೆಟ್ ಮ್ಯೂಚುವಲ್ ಫಂಡ್ ಖಾತೆಗಳ ಸಂಖ್ಯೆಯು 73.43 ಲಕ್ಷದಿಂದ 72.87 ಲಕ್ಷಕ್ಕೆ ಇಳಿಕೆ ಆಗಿದೆ. 16 ಡೆಟ್ ಫಂಡ್ ವಿಭಾಗಗಳ ಪೈಕಿ 12 ಫಂಡ್ಗಳಿಂದ ಮೇ ತಿಂಗಳಲ್ಲಿ ಬಂಡವಾಳ ಹೊರಹರಿವು ಆಗಿದೆ.</p>.<p>ಮಾರುಕಟ್ಟೆಯು ಏರಿಳಿತ ಕಾಣುತ್ತಿರುವ ಸಂದರ್ಭದಲ್ಲಿ ಡೆಟ್ ಫಂಡ್ಗಳು ಹೂಡಿಕೆಯ ಸುರಕ್ಷಿತ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಬಡ್ಡಿದರ ಏರಿಕೆ ಆಗುತ್ತಿರುವುದು, ಆರ್ಥಿಕತೆಯಲ್ಲಿನ ಅನಿಶ್ಚಿತ ಸ್ಥಿತಿ ಹಾಗೂ ಗರಿಷ್ಠ ಗಳಿಕೆಯು ಹೂಡಿಕೆದಾರರ ಮೇಲೆ ಪರಿಣಾಮ ಉಂಟುಮಾಡಿರುವ ಸಾಧ್ಯತೆ ಇದೆ ಎಂದು ಮಾರ್ನಿಂಗ್ಸ್ಟಾರ್ ಇಂಡಿಯಾದ ಹಿರಿಯ ವಿಶ್ಲೇಷಕಿ ಕವಿತಾ ಕೃಷ್ಣನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಡೆಟ್ ಮ್ಯೂಚುವಲ್ ಫಂಡ್ಗಳಿಂದ ಮೇ ತಿಂಗಳಿನಲ್ಲಿ ₹ 32,722 ಕೋಟಿ ಬಂಡವಾಳ ಹಿಂತೆಗೆತ ಆಗಿದೆ.</p>.<p>ಹಣದುಬ್ಬರವನ್ನು ನಿಯಂತ್ರಿಸಲು ಆರ್ಬಿಐ ಹಣಕಾಸು ನೀತಿ ಬಿಗಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಂಡವಾಳ ಹೊರಹರಿವು ಕಂಡುಬಂದಿದೆ.</p>.<p>ಏಪ್ರಿಲ್ನಲ್ಲಿ ಡೆಟ್ ಮ್ಯೂಚುವಲ್ ಫಂಡ್ಗಳು ₹ 54,656 ಕೋಟಿ ಬಂಡವಾಳ ಆಕರ್ಷಿಸಿದ್ದವು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್ಐ) ಮಾಹಿತಿ ನೀಡಿದೆ.</p>.<p>ಡೆಟ್ ಮ್ಯೂಚುವಲ್ ಫಂಡ್ ಖಾತೆಗಳ ಸಂಖ್ಯೆಯು 73.43 ಲಕ್ಷದಿಂದ 72.87 ಲಕ್ಷಕ್ಕೆ ಇಳಿಕೆ ಆಗಿದೆ. 16 ಡೆಟ್ ಫಂಡ್ ವಿಭಾಗಗಳ ಪೈಕಿ 12 ಫಂಡ್ಗಳಿಂದ ಮೇ ತಿಂಗಳಲ್ಲಿ ಬಂಡವಾಳ ಹೊರಹರಿವು ಆಗಿದೆ.</p>.<p>ಮಾರುಕಟ್ಟೆಯು ಏರಿಳಿತ ಕಾಣುತ್ತಿರುವ ಸಂದರ್ಭದಲ್ಲಿ ಡೆಟ್ ಫಂಡ್ಗಳು ಹೂಡಿಕೆಯ ಸುರಕ್ಷಿತ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಬಡ್ಡಿದರ ಏರಿಕೆ ಆಗುತ್ತಿರುವುದು, ಆರ್ಥಿಕತೆಯಲ್ಲಿನ ಅನಿಶ್ಚಿತ ಸ್ಥಿತಿ ಹಾಗೂ ಗರಿಷ್ಠ ಗಳಿಕೆಯು ಹೂಡಿಕೆದಾರರ ಮೇಲೆ ಪರಿಣಾಮ ಉಂಟುಮಾಡಿರುವ ಸಾಧ್ಯತೆ ಇದೆ ಎಂದು ಮಾರ್ನಿಂಗ್ಸ್ಟಾರ್ ಇಂಡಿಯಾದ ಹಿರಿಯ ವಿಶ್ಲೇಷಕಿ ಕವಿತಾ ಕೃಷ್ಣನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>