<p><strong>ಹಾಸನ:</strong> ಸಂಕ್ರಾಂತಿ ಹಬ್ಬದಿಂದಾಗಿ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ನಿರೀಕ್ಷಿತ ಇಳುವರಿ ಇಲ್ಲದೆ ಇರುವುದರಿಂದ ತೆಂಗಿನಕಾಯಿ ಹಾಗೂ ಕೊಬ್ಬರಿ ಬೆಲೆಯಲ್ಲಿ ಏರಿಕೆಯಾಗಿದೆ. </p>.<p>ಒಂದು ವರ್ಷದಿಂದ ಕ್ವಿಂಟಲ್ಗೆ ₹8ಸಾವಿರದಿಂದ ₹8,500 ಇದ್ದ ಕೊಬ್ಬರಿ ಬೆಲೆ ಈಗ ₹14,660ರಿಂದ ₹15 ಸಾವಿರಕ್ಕೆ ಮುಟ್ಟಿದೆ. ಕೊಬ್ಬರಿ ಕೆ.ಜಿ.ಗೆ ₹240 ಏರಿಕೆಯಾಗಿದ್ದರೆ, ದೊಡ್ಡಗಾತ್ರದ ತೆಂಗಿನಕಾಯಿಯೊಂದಕ್ಕೆ ₹40 ರಿಂದ ₹45 ದರವಿದೆ. ಒಂದು ಎಳನೀರು ದರ ₹50 ದಾಟಿದೆ.</p>.<p>ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು, ಹಾಸನ ತಾಲ್ಲೂಕಿನ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. 2023-24ರಲ್ಲಿ ಮಳೆ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ.</p>.<p>‘ಕಾಯಿ ಕೀಳಿಸುವ, ಸುಲಿಸುವ ಜಂಜಡವೇ ಬೇಡ ಎಂದು ಬೆಳೆಗಾರರು ಎಳನೀರು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ತೆಂಗಿನಕಾಯಿ ಹಾಗೂ ಕೊಬ್ಬರಿ ಸಿಗುತ್ತಿಲ್ಲ’ ಎನ್ನುತ್ತಾರೆ ವರ್ತಕರು.</p>.<p>ಅರಸೀಕೆರೆಯ ಮಾರುಕಟ್ಟೆಯಿಂದ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಬಿಹಾರ, ಉತ್ತರಾಂಚಲ ಮತ್ತು ಮಹಾರಾಷ್ಟ್ರಕ್ಕೆ ಕೊಬ್ಬರಿ ರವಾನೆಯಾಗುತ್ತದೆ. ಈ ಕೊಬ್ಬರಿಯನ್ನು ಪ್ರಮುಖವಾಗಿ ಸಿಹಿತಿಂಡಿ ಮತ್ತು ಅಡುಗೆಗೆ ಬಳಸುತ್ತಾರೆ. ಉಂಡೆ ಕೊಬ್ಬರಿ ಬೆಲೆಯ ಏರಿಳಿತವು ಉತ್ತರ ಭಾರತದಲ್ಲಿ ನಡೆಯುವ ಹಬ್ಬ, ಮದುವೆ ಋತು ಮತ್ತು ಹವಾಗುಣದ ಮೇಲೆ ಅವಲಂಬಿತವಾಗಿದೆ.</p>.<p>ಬೇಸಿಗೆ ಆರಂಭವಾಗುತ್ತಿದೆ. ಇದರಿಂದ ಮುಂಬೈ ಮಾರುಕಟ್ಟೆಯಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲಿ ಎಳನೀರು ಒಂದಕ್ಕೆ ₹100 ಇದೆ. ಜಿಲ್ಲೆಯಿಂದ ವಾರಕ್ಕೆ 20ರಿಂದ 25 ಲೋಡ್ ಎಳನೀರು ರವಾನೆ ಮಾಡಲಾಗುತ್ತಿದೆ.</p>.<div><blockquote>ಈ ಬಾರಿ ತಮಿಳುನಾಡು ಕೇರಳದಲ್ಲಿಯೂ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಉತ್ತಮ ಬೆಲೆ ಬಂದಿದೆ </blockquote><span class="attribution">ಮಂಗಳಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ</span></div>.<div><blockquote>ಹಬ್ಬಗಳಿರುವುದರಿಂದ ಸದ್ಯಕ್ಕೆ ಬೆಲೆ ಹೆಚ್ಚಳವಾಗಿದೆ. ಸಂಕ್ರಾಂತಿಯ ನಂತರ ಹೆಚ್ಚಿನ ಕೊಬ್ಬರಿ ದಾಸ್ತಾನು ಬಂದರ ಬೆಲೆ ಕಡಿಮೆಯಾಗಬಹುದು </blockquote><span class="attribution">ಸಿದ್ದಲಿಂಗಸ್ವಾಮಿ ಅರಸೀಕೆರೆ ಎಪಿಎಂಸಿ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಸಂಕ್ರಾಂತಿ ಹಬ್ಬದಿಂದಾಗಿ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ನಿರೀಕ್ಷಿತ ಇಳುವರಿ ಇಲ್ಲದೆ ಇರುವುದರಿಂದ ತೆಂಗಿನಕಾಯಿ ಹಾಗೂ ಕೊಬ್ಬರಿ ಬೆಲೆಯಲ್ಲಿ ಏರಿಕೆಯಾಗಿದೆ. </p>.<p>ಒಂದು ವರ್ಷದಿಂದ ಕ್ವಿಂಟಲ್ಗೆ ₹8ಸಾವಿರದಿಂದ ₹8,500 ಇದ್ದ ಕೊಬ್ಬರಿ ಬೆಲೆ ಈಗ ₹14,660ರಿಂದ ₹15 ಸಾವಿರಕ್ಕೆ ಮುಟ್ಟಿದೆ. ಕೊಬ್ಬರಿ ಕೆ.ಜಿ.ಗೆ ₹240 ಏರಿಕೆಯಾಗಿದ್ದರೆ, ದೊಡ್ಡಗಾತ್ರದ ತೆಂಗಿನಕಾಯಿಯೊಂದಕ್ಕೆ ₹40 ರಿಂದ ₹45 ದರವಿದೆ. ಒಂದು ಎಳನೀರು ದರ ₹50 ದಾಟಿದೆ.</p>.<p>ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ, ಬೇಲೂರು, ಹಾಸನ ತಾಲ್ಲೂಕಿನ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. 2023-24ರಲ್ಲಿ ಮಳೆ ಕೊರತೆಯಿಂದಾಗಿ ಇಳುವರಿ ಕಡಿಮೆಯಾಗಿದೆ.</p>.<p>‘ಕಾಯಿ ಕೀಳಿಸುವ, ಸುಲಿಸುವ ಜಂಜಡವೇ ಬೇಡ ಎಂದು ಬೆಳೆಗಾರರು ಎಳನೀರು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ತೆಂಗಿನಕಾಯಿ ಹಾಗೂ ಕೊಬ್ಬರಿ ಸಿಗುತ್ತಿಲ್ಲ’ ಎನ್ನುತ್ತಾರೆ ವರ್ತಕರು.</p>.<p>ಅರಸೀಕೆರೆಯ ಮಾರುಕಟ್ಟೆಯಿಂದ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಬಿಹಾರ, ಉತ್ತರಾಂಚಲ ಮತ್ತು ಮಹಾರಾಷ್ಟ್ರಕ್ಕೆ ಕೊಬ್ಬರಿ ರವಾನೆಯಾಗುತ್ತದೆ. ಈ ಕೊಬ್ಬರಿಯನ್ನು ಪ್ರಮುಖವಾಗಿ ಸಿಹಿತಿಂಡಿ ಮತ್ತು ಅಡುಗೆಗೆ ಬಳಸುತ್ತಾರೆ. ಉಂಡೆ ಕೊಬ್ಬರಿ ಬೆಲೆಯ ಏರಿಳಿತವು ಉತ್ತರ ಭಾರತದಲ್ಲಿ ನಡೆಯುವ ಹಬ್ಬ, ಮದುವೆ ಋತು ಮತ್ತು ಹವಾಗುಣದ ಮೇಲೆ ಅವಲಂಬಿತವಾಗಿದೆ.</p>.<p>ಬೇಸಿಗೆ ಆರಂಭವಾಗುತ್ತಿದೆ. ಇದರಿಂದ ಮುಂಬೈ ಮಾರುಕಟ್ಟೆಯಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲಿ ಎಳನೀರು ಒಂದಕ್ಕೆ ₹100 ಇದೆ. ಜಿಲ್ಲೆಯಿಂದ ವಾರಕ್ಕೆ 20ರಿಂದ 25 ಲೋಡ್ ಎಳನೀರು ರವಾನೆ ಮಾಡಲಾಗುತ್ತಿದೆ.</p>.<div><blockquote>ಈ ಬಾರಿ ತಮಿಳುನಾಡು ಕೇರಳದಲ್ಲಿಯೂ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಉತ್ತಮ ಬೆಲೆ ಬಂದಿದೆ </blockquote><span class="attribution">ಮಂಗಳಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ</span></div>.<div><blockquote>ಹಬ್ಬಗಳಿರುವುದರಿಂದ ಸದ್ಯಕ್ಕೆ ಬೆಲೆ ಹೆಚ್ಚಳವಾಗಿದೆ. ಸಂಕ್ರಾಂತಿಯ ನಂತರ ಹೆಚ್ಚಿನ ಕೊಬ್ಬರಿ ದಾಸ್ತಾನು ಬಂದರ ಬೆಲೆ ಕಡಿಮೆಯಾಗಬಹುದು </blockquote><span class="attribution">ಸಿದ್ದಲಿಂಗಸ್ವಾಮಿ ಅರಸೀಕೆರೆ ಎಪಿಎಂಸಿ ಕಾರ್ಯದರ್ಶಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>