ನಿರ್ಮಲಾ ಅವರು ಲೋಕಸಭೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. ‘ಕೆಲವು ಬ್ಯಾಂಕ್ಗಳು ಸಾಲದ ಮರುಪಾವತಿಯ ವಿಚಾರದಲ್ಲಿ ಅದೆಷ್ಟು ನಿರ್ದಾಕ್ಷಿಣ್ಯವಾಗಿ ವರ್ತಿಸಿವೆ ಎಂಬ ಬಗ್ಗೆ ನಾನು ದೂರುಗಳನ್ನು ಕೇಳಿದ್ದೇನೆ. ಸಾಲ ಮರುಪಾವತಿಗೆ ಸಂಬಂಧಿಸಿದ ವಿಚಾರದಲ್ಲಿ ಬ್ಯಾಂಕ್ಗಳು ಮಾನವೀಯವಾಗಿ, ಸ್ಪಂದನಶೀಲವಾಗಿ ವರ್ತಿಸಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ನಿರ್ಮಲಾ ಅವರು ಹೇಳಿದ್ದಾರೆ.