ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ತಿದಾರರ ಸಾಲ ವಸೂಲಿಗೆ ತಡೆ

ದಿವಾಳಿ ಸಂಹಿತೆ ಪ್ರಕ್ರಿಯೆ 1 ವರ್ಷದವರೆಗೆ ರದ್ದು
Last Updated 23 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಸುಸ್ತಿದಾರ ಕಂಪನಿಗಳಿಂದ ಸಾಲ ವಸೂಲಿಗೆ ಜಾರಿಯಲ್ಲಿ ಇರುವ ದಿವಾಳಿ ಸಂಹಿತೆ (ಐಬಿಸಿ) ಪ್ರಕ್ರಿಯೆಯನ್ನು ಒಂದು ವರ್ಷದವರೆಗೆ ರದ್ದುಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೊರೊನಾ ವೈರಾಣು ಪಿಡುಗಿನಿಂದ ತೀವ್ರ ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಕಾರ್ಪೊರೇಟ್‌ ವಲಯದ ಸಾಲಗಾರರಿಗೆ ಇದರಿಂದ ನೆಮ್ಮದಿ ದೊರೆಯಲಿದೆ.

ಸಾಲ ಮರುಪಾವತಿ ಮಾಡದ ಸುಸ್ತಿದಾರರಿಂದ ಸಾಲ ವಸೂಲಾತಿಗೆ ಅವಕಾಶ ಮಾಡಿಕೊಟ್ಟಿದ್ದ ‘ಐಬಿಸಿ’ ಪ್ರಕ್ರಿಯೆಗೆ ಈಗ ಒಂದು ವರ್ಷದವರೆಗೆ ತಡೆ ದೊರೆಯಲಿದೆ.

‘ಐಬಿಸಿ’ಗೆ ತರಲಿರುವ ತಿದ್ದುಪಡಿಯಿಂದ ಬ್ಯಾಂಕ್‌ಗಳು ಸಾಲಗಳನ್ನು ಮರು ಹೊಂದಾಣಿಕೆ ಮಾಡಲೂ ಅವಕಾಶ ದೊರೆಯಲಿದೆ. ಸಾಲ ಮರುಪಾವತಿಸದಿರುವುದು 90 ದಿನಗಳನ್ನು ದಾಟಿದರೆ ಅದನ್ನು ಸುಸ್ತಿ ಸಾಲ ಎಂದು ಪರಿಗಣಿಸಲಾಗುತ್ತಿದೆ.

‘ಐಬಿಸಿ’ಯ ಮೂರು ಸೆಕ್ಷನ್‌ಗಳನ್ನು ಒಂದು ವರ್ಷದವರೆಗೆ ರದ್ದುಪಡಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ. ಸುಗ್ರೀವಾಜ್ಞೆ ಜಾರಿಗೆ ಬರುವ ದಿನದಿಂದ ತಿದ್ದುಪಡಿ ಅನ್ವಯವಾಗಲಿದೆ. ಇದರಿಂದ ಸಾಲ ಮರುಪಾವತಿಸಲು ಕಾರ್ಪೊರೇಟ್‌ ಸಾಲಗಾರರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT