<p><strong>ನವದೆಹಲಿ:</strong> ಸರಕುಗಳ ಪೂರೈಕೆದಾರ ನೀಡಿದ ಜಿಎಸ್ಟಿ ವಿವರ ಮತ್ತು ಖರೀದಿದಾರ ವರ್ತಕ ನೀಡಿದ ಜಿಎಸ್ಟಿ ವಿವರಗಳ ಮಧ್ಯೆ ಗಮನಾರ್ಹ ವ್ಯತ್ಯಾಸಗಳಿದ್ದರೆ ಅಂಥವರ (ಖರೀದಿದಾರ) ನೋಂದಣಿಯನ್ನು ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಜಿಎಸ್ಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಈ ಸಂಬಂಧ ನೇರ ತೆರಿಗೆ ಮತ್ತು ಕಸ್ಟಮ್ಸ್ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೊಸ ಮಾರ್ಗಸೂಚಿ (ಎಸ್ಒಪಿ) ಹೊರಡಿಸಿದೆ. ತೆರಿಗೆ ವಂಚನೆ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ.</p>.<p>ಎಸ್ಒಪಿ ಪ್ರಕಾರ, ನೋಂದಣಿಯನ್ನು ಅಮಾನತು ಮಾಡಿರುವ ಸೂಚನೆ, ಜಿಎಸ್ಟಿ ಆರ್ಇಜಿ–31 ಫಾರಂನಲ್ಲಿ ನೋಂದಣಿ ರದ್ದುಗೊಳಿಸುವ ಕುರಿತು ನೋಟಿಸ್, ನೋಂದಣಿ ಅಮಾನುಗೊಳಿಸಲು ಕಾರಣಗಳನ್ನು ನಿರ್ದಿಷ್ಟ ತೆರಿಗೆದಾರರ ಇ–ಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.</p>.<p>ಜಾಲತಾಣದಲ್ಲಿ ಆರ್ಇಜಿ–31 ಅರ್ಜಿ ಲಭ್ಯವಾಗುವಂತೆ ಮಾಡುವವರೆಗೂ ತೆರಿಗೆದಾರರು ತಮ್ಮ ನೋಂದಣಿ ರದ್ದುಪಡಿಸಿರುವ ನೋಟಿಸ್ ಅಥವಾ ಸೂಚನೆಯನ್ನು ಅವರ ಡ್ಯಾಷ್ಬೋರ್ಡ್ನಲ್ಲಿ ಜಿಎಸ್ಟಿ ಆರ್ಇಜಿ–17 ಅರ್ಜಿಯಲ್ಲಿ ನೋಡಬಹುದಾಗಿದೆ.</p>.<p>ನೋಂದಣಿ ಅಮಾನತುಗೊಂಡ ನೋಟಿಸ್ ಅಥವಾ ಮಾಹಿತಿ ದೊರೆತ 30 ದಿನಗಳೊಳಗೆ ತೆರಿಗೆದಾರರು ಸ್ಥಳೀಯ ತೆರಿಗೆ ಅಧಿಕಾರಿಗಳಿಗೆ ಜಾತಲಾಣದ ಮೂಲಕ ಆ ಬಗ್ಗೆ ಉತ್ತರ ನೀಡಬೇಕಾಗುತ್ತದೆ. ತಮ್ಮ ನೋಂದಣಿಯನ್ನು ಏಕೆ ರದ್ದುಪಡಿಸಬಾರದು ಎನ್ನುವುದಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ.</p>.<p>ರಿಟರ್ನ್ಸ್ ಸಲ್ಲಿಸದೇ ಇರುವ ಕಾರಣಕ್ಕಾಗಿ ನೊಂದಣಿ ಅಮಾನತುಗೊಳಿಸುವ ಮತ್ತು ನೋಂದಣಿ ರದ್ದತಿಗೆ ನೋಟಿಸ್ ನೀಡಿದ್ದರೆ, ನಿರ್ದಿಷ್ಟ ತೆರಿಗೆದಾರ ಬಾಕಿ ಇರುವ ರಿಟರ್ನ್ಸ್ ಸಲ್ಲಿಸಿ, ಪ್ರತಿಕ್ರಿಯೆ ನೀಡಬಹುದು ಎಂದು ಎಸ್ಒಪಿಯಲ್ಲಿ ವಿವರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸರಕುಗಳ ಪೂರೈಕೆದಾರ ನೀಡಿದ ಜಿಎಸ್ಟಿ ವಿವರ ಮತ್ತು ಖರೀದಿದಾರ ವರ್ತಕ ನೀಡಿದ ಜಿಎಸ್ಟಿ ವಿವರಗಳ ಮಧ್ಯೆ ಗಮನಾರ್ಹ ವ್ಯತ್ಯಾಸಗಳಿದ್ದರೆ ಅಂಥವರ (ಖರೀದಿದಾರ) ನೋಂದಣಿಯನ್ನು ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಜಿಎಸ್ಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಈ ಸಂಬಂಧ ನೇರ ತೆರಿಗೆ ಮತ್ತು ಕಸ್ಟಮ್ಸ್ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೊಸ ಮಾರ್ಗಸೂಚಿ (ಎಸ್ಒಪಿ) ಹೊರಡಿಸಿದೆ. ತೆರಿಗೆ ವಂಚನೆ ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ.</p>.<p>ಎಸ್ಒಪಿ ಪ್ರಕಾರ, ನೋಂದಣಿಯನ್ನು ಅಮಾನತು ಮಾಡಿರುವ ಸೂಚನೆ, ಜಿಎಸ್ಟಿ ಆರ್ಇಜಿ–31 ಫಾರಂನಲ್ಲಿ ನೋಂದಣಿ ರದ್ದುಗೊಳಿಸುವ ಕುರಿತು ನೋಟಿಸ್, ನೋಂದಣಿ ಅಮಾನುಗೊಳಿಸಲು ಕಾರಣಗಳನ್ನು ನಿರ್ದಿಷ್ಟ ತೆರಿಗೆದಾರರ ಇ–ಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.</p>.<p>ಜಾಲತಾಣದಲ್ಲಿ ಆರ್ಇಜಿ–31 ಅರ್ಜಿ ಲಭ್ಯವಾಗುವಂತೆ ಮಾಡುವವರೆಗೂ ತೆರಿಗೆದಾರರು ತಮ್ಮ ನೋಂದಣಿ ರದ್ದುಪಡಿಸಿರುವ ನೋಟಿಸ್ ಅಥವಾ ಸೂಚನೆಯನ್ನು ಅವರ ಡ್ಯಾಷ್ಬೋರ್ಡ್ನಲ್ಲಿ ಜಿಎಸ್ಟಿ ಆರ್ಇಜಿ–17 ಅರ್ಜಿಯಲ್ಲಿ ನೋಡಬಹುದಾಗಿದೆ.</p>.<p>ನೋಂದಣಿ ಅಮಾನತುಗೊಂಡ ನೋಟಿಸ್ ಅಥವಾ ಮಾಹಿತಿ ದೊರೆತ 30 ದಿನಗಳೊಳಗೆ ತೆರಿಗೆದಾರರು ಸ್ಥಳೀಯ ತೆರಿಗೆ ಅಧಿಕಾರಿಗಳಿಗೆ ಜಾತಲಾಣದ ಮೂಲಕ ಆ ಬಗ್ಗೆ ಉತ್ತರ ನೀಡಬೇಕಾಗುತ್ತದೆ. ತಮ್ಮ ನೋಂದಣಿಯನ್ನು ಏಕೆ ರದ್ದುಪಡಿಸಬಾರದು ಎನ್ನುವುದಕ್ಕೆ ಕಾರಣಗಳನ್ನು ನೀಡಬೇಕಾಗುತ್ತದೆ.</p>.<p>ರಿಟರ್ನ್ಸ್ ಸಲ್ಲಿಸದೇ ಇರುವ ಕಾರಣಕ್ಕಾಗಿ ನೊಂದಣಿ ಅಮಾನತುಗೊಳಿಸುವ ಮತ್ತು ನೋಂದಣಿ ರದ್ದತಿಗೆ ನೋಟಿಸ್ ನೀಡಿದ್ದರೆ, ನಿರ್ದಿಷ್ಟ ತೆರಿಗೆದಾರ ಬಾಕಿ ಇರುವ ರಿಟರ್ನ್ಸ್ ಸಲ್ಲಿಸಿ, ಪ್ರತಿಕ್ರಿಯೆ ನೀಡಬಹುದು ಎಂದು ಎಸ್ಒಪಿಯಲ್ಲಿ ವಿವರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>