ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕುಗಳಿಗೆ ಕೇಂದ್ರ ಸರ್ಕಾರವು ಮೂರನೆಯ ತ್ರೈಮಾಸಿಕದಲ್ಲಿಯೇ ಹಣಕಾಸಿನ ನೆರವು ಒದಗಿಸುವ ಸಾಧ್ಯತೆ ಇದೆ. ಈ ಉದ್ದೇಶಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯವು ₹ 20 ಸಾವಿರ ಕೋಟಿಯ ನಿಧಿಗೆ ಸಂಸತ್ತಿನ ಒಪ್ಪಿಗೆ ಪಡೆದುಕೊಂಡಿದೆ.
ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ಅಗತ್ಯ ಎದುರಾದರೆ ಶಾಸನಬದ್ಧ ಬಂಡವಾಳ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ನೆರವು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಯಾವ ಬ್ಯಾಂಕಿಗೆ ಶಾಸನಬದ್ಧ ಬಂಡವಾಳದ ಅಗತ್ಯ ಎದುರಾಗಬಹುದು ಎಂಬುದನ್ನು ಬ್ಯಾಂಕುಗಳ ಎರಡನೆಯ ತ್ರೈಮಾಸಿಕದ ಫಲಿತಾಂಶವು ತಿಳಿಸುತ್ತದೆ. ಅದಕ್ಕೆ ಅನುಗುಣವಾಗಿ ಪುನರ್ಧನ ಬಾಂಡ್ಗಳನ್ನು ಬ್ಯಾಂಕುಗಳಿಗೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈಕ್ವಿಟಿ ಮತ್ತು ಬಾಂಡ್ಗಳ ಮೂಲಕ ಬಂಡವಾಳ ಸಂಗ್ರಹಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಷೇರುದಾರರ ಅನುಮತಿ ಸಿಕ್ಕಿದೆ.