<p>ಹಣಕಾಸು ಕಂಪನಿಗಳು ಒದಗಿಸುವ ಸೇವೆಗಳಲ್ಲಿ ಲೋಪಗಳು ಇದ್ದರೆ, ಅದರ ಬಗ್ಗೆ ದೂರು ದಾಖಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಡಿಯಲ್ಲಿ ಒಂಬುಡ್ಸ್ಮನ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ವ್ಯವಸ್ಥೆಯಲ್ಲಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಿಂದ ಬಾಕಿ ಇರುವ ದೂರುಗಳನ್ನು ಇತ್ಯರ್ಥಪಡಿಸಲು ಆರ್ಬಿಐ ಅಭಿಯಾನವೊಂದನ್ನು ಜನವರಿಯಿಂದ ಆರಂಭಿಸಲಿದೆ. ಎರಡು ತಿಂಗಳು ಈ ಅಭಿಯಾನ ನಡೆಯಲಿದೆ.</p><p>ಈ ಹೊತ್ತಿನಲ್ಲಿ ಒಂಬುಡ್ಸ್ಮನ್ ವ್ಯವಸ್ಥೆ ಅಂದರೆ ಏನು, ಅದು ಯಾವ ಬಗೆಯ ದೂರುಗಳನ್ನು ಇತ್ಯರ್ಥಪಡಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತವಾಗಬಹುದು.</p><p>ಆರ್ಬಿಐ ನೋಂದಾಯಿತ ಹಣಕಾಸಿನ ಕಂಪನಿಗಳ ‘ಸೇವೆಗಳಲ್ಲಿ ಲೋಪ’ಗಳ ವಿಚಾರವಾಗಿ ಒಂಬುಡ್ಸ್ಮನ್ ವ್ಯವಸ್ಥೆಗೆ ದೂರು ಸಲ್ಲಿಸಬಹುದು. ‘ನೋಂದಾಯಿತ ಕಂಪನಿಯು ಒದಗಿಸಬೇಕಿರುವ ಯಾವುದೇ ಹಣಕಾಸಿನ ಸೇವೆಯಲ್ಲಿನ ಕೊರತೆ ಅಥವಾ ಅಸಮರ್ಪಕ ಸೇವೆಯು ದೂರು ನೀಡುವುದಕ್ಕೆ ಅರ್ಹವಾಗುತ್ತದೆ’ ಎಂದು ಆರ್ಬಿಐ ವ್ಯಾಖ್ಯಾನಿಸಿದೆ.</p><p>ಆದರೆ, ಸೇವೆಯು ಸಮರ್ಪಕವಾಗಿ ದೊರೆತಿಲ್ಲ ಎಂದಾದರೆ ಅದರ ಕುರಿತ ದೂರನ್ನು ಮೊದಲ ಹಂತದಲ್ಲೇ ಒಂಬುಡ್ಸ್ಮನ್ಗೆ ಸಲ್ಲಿಸಬಾರದು ಎಂದು ಕೂಡ ಆರ್ಬಿಐ ಹೇಳಿದೆ.</p><p>ಸೇವೆಗಳು ಸರಿಯಾಗಿ ಸಿಕ್ಕಿಲ್ಲ ಎಂದಾದರೆ ವ್ಯಕ್ತಿಯು ಮೊದಲಿಗೆ ದೂರನ್ನು ಸಂಬಂಧಪಟ್ಟ ಹಣಕಾಸಿನ ಕಂಪನಿಗೆ ಸಲ್ಲಿಸಬೇಕು. ದೂರನ್ನು ಸ್ವೀಕರಿಸಿದ ಆ ಕಂಪನಿಯು 30 ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ, ಕಂಪನಿಯು ಆ ದೂರನ್ನು ಪೂರ್ತಿಯಾಗಿ ಅಥವಾ ದೂರಿನ ಒಂದಿಷ್ಟು ಅಂಶಗಳನ್ನು ತಿರಸ್ಕರಿಸಿದರೆ, ಕಂಪನಿಯು ತೆಗೆದುಕೊಂಡ ಪರಿಹಾರ ಕ್ರಮವು ದೂರುದಾರ ವ್ಯಕ್ತಿಗೆ ಸಮಾಧಾನ ನೀಡದೆ ಇದ್ದರೆ ಒಂಬುಡ್ಸ್ಮನ್ಗೆ ದೂರು ದಾಖಲಿಸಬಹುದು.</p><p>ದೂರನ್ನು ಮೊದಲು ಸಂಬಂಧಪಟ್ಟ ಹಣಕಾಸಿನ ಕಂಪನಿಗೆ ಸಲ್ಲಿಸದೆ ಅಥವಾ ಹಣಕಾಸು ಕಂಪನಿಗೆ ದೂರು ಸಲ್ಲಿಸಿದ 30 ದಿನಗಳು ಕಳೆಯುವ ಮೊದಲೇ ಒಂಬುಡ್ಸ್ಮನ್ಗೆ ದೂರು ಸಲ್ಲಿಸಿದರೆ ಅದು ಪರಿಗಣನೆಗೆ ಯೋಗ್ಯವಾಗುವುದಿಲ್ಲ.</p><p><strong>ದೂರು ಸಲ್ಲಿಸುವುದು ಹೇಗೆ?: </strong>ಅಂಚೆಯ ಮೂಲಕವೂ ದೂರನ್ನು ಸಲ್ಲಿಸಬಹುದು. ಆದರೆ ಆನ್ಲೈನ್ ಮೂಲಕ ದೂರು ಸಲ್ಲಿಸುವಿಕೆ ಸುಲಭ ಎಂಬುದು ಹಲವರ ಅಭಿಪ್ರಾಯ. ದೂರು ಸ್ವೀಕರಿಸಲಿಕ್ಕೆಂದು cms.rbi.org.in ವಿಳಾಸದ ಪೋರ್ಟಲ್ ರೂಪಿಸಲಾಗಿದೆ.</p><p>ದೂರು ಸಲ್ಲಿಸುವ ವ್ಯಕ್ತಿಯು ಕೆಲವು ವಿವರಗಳನ್ನು ಅಗತ್ಯವಾಗಿ ಒದಗಿಸಬೇಕು. ಹೆಸರು, ಲಿಂಗ ಮತ್ತು ವಯಸ್ಸು ನಮೂದಿಸಬೇಕು. ದೂರುದಾರನ ಪೂರ್ಣ ಅಂಚೆ ವಿಳಾಸ, ಇ–ಮೇಲ್ ವಿಳಾಸ, ಮೊಬೈಲ್ ದೂರವಾಣಿ ಸಂಖ್ಯೆ ನೀಡಬೇಕು.</p><p>ಯಾವ ಕಂಪನಿಯ ವಿರುದ್ಧ ದೂರು ನೀಡಲಾಗುತ್ತಿದೆಯೋ ಆ ಕಂಪನಿಯ ಹೆಸರು ಮತ್ತು ಶಾಖೆಯ ವಿಳಾಸ, ದೂರು ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದುದರ ಸಂಪೂರ್ಣ ವಿವರ, ವಹಿವಾಟಿನ ವಿವರಗಳು, ದೂರುದಾರ ವ್ಯಕ್ತಿಯ ಖಾತೆ ಸಂಖ್ಯೆ, ದೂರಿಗೆ ಅಗತ್ಯವಿದ್ದಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಒದಗಿಸಬೇಕು.</p><p>ಹಣಕಾಸಿನ ಕಂಪನಿಗೆ ಮೊದಲು ಸಲ್ಲಿಸಿದ್ದ ದೂರಿನ ವಿವರಗಳನ್ನು ನೀಡಬೇಕು, ಅಲ್ಲಿಂದ ದೊರೆತ ಪ್ರತಿಕ್ರಿಯೆಯ ಬಗ್ಗೆಯೂ ಉಲ್ಲೇಖಿಸಬೇಕು. ದೂರು ದಾಖಲಿಸಿದ ನಂತರದಲ್ಲಿ ಅದರ ಸ್ಥಿತಿಗತಿಯ ಬಗ್ಗೆ ಪೋರ್ಟಲ್ ಮೂಲಕವೇ ವಿವರ ಪಡೆದುಕೊಳ್ಳಬಹುದು.</p><p><strong>(ಆಧಾರ: ಆರ್ಬಿಐ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಣಕಾಸು ಕಂಪನಿಗಳು ಒದಗಿಸುವ ಸೇವೆಗಳಲ್ಲಿ ಲೋಪಗಳು ಇದ್ದರೆ, ಅದರ ಬಗ್ಗೆ ದೂರು ದಾಖಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಡಿಯಲ್ಲಿ ಒಂಬುಡ್ಸ್ಮನ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ವ್ಯವಸ್ಥೆಯಲ್ಲಿ ಒಂದು ತಿಂಗಳಿಗಿಂತ ಹೆಚ್ಚಿನ ಅವಧಿಯಿಂದ ಬಾಕಿ ಇರುವ ದೂರುಗಳನ್ನು ಇತ್ಯರ್ಥಪಡಿಸಲು ಆರ್ಬಿಐ ಅಭಿಯಾನವೊಂದನ್ನು ಜನವರಿಯಿಂದ ಆರಂಭಿಸಲಿದೆ. ಎರಡು ತಿಂಗಳು ಈ ಅಭಿಯಾನ ನಡೆಯಲಿದೆ.</p><p>ಈ ಹೊತ್ತಿನಲ್ಲಿ ಒಂಬುಡ್ಸ್ಮನ್ ವ್ಯವಸ್ಥೆ ಅಂದರೆ ಏನು, ಅದು ಯಾವ ಬಗೆಯ ದೂರುಗಳನ್ನು ಇತ್ಯರ್ಥಪಡಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತವಾಗಬಹುದು.</p><p>ಆರ್ಬಿಐ ನೋಂದಾಯಿತ ಹಣಕಾಸಿನ ಕಂಪನಿಗಳ ‘ಸೇವೆಗಳಲ್ಲಿ ಲೋಪ’ಗಳ ವಿಚಾರವಾಗಿ ಒಂಬುಡ್ಸ್ಮನ್ ವ್ಯವಸ್ಥೆಗೆ ದೂರು ಸಲ್ಲಿಸಬಹುದು. ‘ನೋಂದಾಯಿತ ಕಂಪನಿಯು ಒದಗಿಸಬೇಕಿರುವ ಯಾವುದೇ ಹಣಕಾಸಿನ ಸೇವೆಯಲ್ಲಿನ ಕೊರತೆ ಅಥವಾ ಅಸಮರ್ಪಕ ಸೇವೆಯು ದೂರು ನೀಡುವುದಕ್ಕೆ ಅರ್ಹವಾಗುತ್ತದೆ’ ಎಂದು ಆರ್ಬಿಐ ವ್ಯಾಖ್ಯಾನಿಸಿದೆ.</p><p>ಆದರೆ, ಸೇವೆಯು ಸಮರ್ಪಕವಾಗಿ ದೊರೆತಿಲ್ಲ ಎಂದಾದರೆ ಅದರ ಕುರಿತ ದೂರನ್ನು ಮೊದಲ ಹಂತದಲ್ಲೇ ಒಂಬುಡ್ಸ್ಮನ್ಗೆ ಸಲ್ಲಿಸಬಾರದು ಎಂದು ಕೂಡ ಆರ್ಬಿಐ ಹೇಳಿದೆ.</p><p>ಸೇವೆಗಳು ಸರಿಯಾಗಿ ಸಿಕ್ಕಿಲ್ಲ ಎಂದಾದರೆ ವ್ಯಕ್ತಿಯು ಮೊದಲಿಗೆ ದೂರನ್ನು ಸಂಬಂಧಪಟ್ಟ ಹಣಕಾಸಿನ ಕಂಪನಿಗೆ ಸಲ್ಲಿಸಬೇಕು. ದೂರನ್ನು ಸ್ವೀಕರಿಸಿದ ಆ ಕಂಪನಿಯು 30 ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ, ಕಂಪನಿಯು ಆ ದೂರನ್ನು ಪೂರ್ತಿಯಾಗಿ ಅಥವಾ ದೂರಿನ ಒಂದಿಷ್ಟು ಅಂಶಗಳನ್ನು ತಿರಸ್ಕರಿಸಿದರೆ, ಕಂಪನಿಯು ತೆಗೆದುಕೊಂಡ ಪರಿಹಾರ ಕ್ರಮವು ದೂರುದಾರ ವ್ಯಕ್ತಿಗೆ ಸಮಾಧಾನ ನೀಡದೆ ಇದ್ದರೆ ಒಂಬುಡ್ಸ್ಮನ್ಗೆ ದೂರು ದಾಖಲಿಸಬಹುದು.</p><p>ದೂರನ್ನು ಮೊದಲು ಸಂಬಂಧಪಟ್ಟ ಹಣಕಾಸಿನ ಕಂಪನಿಗೆ ಸಲ್ಲಿಸದೆ ಅಥವಾ ಹಣಕಾಸು ಕಂಪನಿಗೆ ದೂರು ಸಲ್ಲಿಸಿದ 30 ದಿನಗಳು ಕಳೆಯುವ ಮೊದಲೇ ಒಂಬುಡ್ಸ್ಮನ್ಗೆ ದೂರು ಸಲ್ಲಿಸಿದರೆ ಅದು ಪರಿಗಣನೆಗೆ ಯೋಗ್ಯವಾಗುವುದಿಲ್ಲ.</p><p><strong>ದೂರು ಸಲ್ಲಿಸುವುದು ಹೇಗೆ?: </strong>ಅಂಚೆಯ ಮೂಲಕವೂ ದೂರನ್ನು ಸಲ್ಲಿಸಬಹುದು. ಆದರೆ ಆನ್ಲೈನ್ ಮೂಲಕ ದೂರು ಸಲ್ಲಿಸುವಿಕೆ ಸುಲಭ ಎಂಬುದು ಹಲವರ ಅಭಿಪ್ರಾಯ. ದೂರು ಸ್ವೀಕರಿಸಲಿಕ್ಕೆಂದು cms.rbi.org.in ವಿಳಾಸದ ಪೋರ್ಟಲ್ ರೂಪಿಸಲಾಗಿದೆ.</p><p>ದೂರು ಸಲ್ಲಿಸುವ ವ್ಯಕ್ತಿಯು ಕೆಲವು ವಿವರಗಳನ್ನು ಅಗತ್ಯವಾಗಿ ಒದಗಿಸಬೇಕು. ಹೆಸರು, ಲಿಂಗ ಮತ್ತು ವಯಸ್ಸು ನಮೂದಿಸಬೇಕು. ದೂರುದಾರನ ಪೂರ್ಣ ಅಂಚೆ ವಿಳಾಸ, ಇ–ಮೇಲ್ ವಿಳಾಸ, ಮೊಬೈಲ್ ದೂರವಾಣಿ ಸಂಖ್ಯೆ ನೀಡಬೇಕು.</p><p>ಯಾವ ಕಂಪನಿಯ ವಿರುದ್ಧ ದೂರು ನೀಡಲಾಗುತ್ತಿದೆಯೋ ಆ ಕಂಪನಿಯ ಹೆಸರು ಮತ್ತು ಶಾಖೆಯ ವಿಳಾಸ, ದೂರು ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದುದರ ಸಂಪೂರ್ಣ ವಿವರ, ವಹಿವಾಟಿನ ವಿವರಗಳು, ದೂರುದಾರ ವ್ಯಕ್ತಿಯ ಖಾತೆ ಸಂಖ್ಯೆ, ದೂರಿಗೆ ಅಗತ್ಯವಿದ್ದಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಒದಗಿಸಬೇಕು.</p><p>ಹಣಕಾಸಿನ ಕಂಪನಿಗೆ ಮೊದಲು ಸಲ್ಲಿಸಿದ್ದ ದೂರಿನ ವಿವರಗಳನ್ನು ನೀಡಬೇಕು, ಅಲ್ಲಿಂದ ದೊರೆತ ಪ್ರತಿಕ್ರಿಯೆಯ ಬಗ್ಗೆಯೂ ಉಲ್ಲೇಖಿಸಬೇಕು. ದೂರು ದಾಖಲಿಸಿದ ನಂತರದಲ್ಲಿ ಅದರ ಸ್ಥಿತಿಗತಿಯ ಬಗ್ಗೆ ಪೋರ್ಟಲ್ ಮೂಲಕವೇ ವಿವರ ಪಡೆದುಕೊಳ್ಳಬಹುದು.</p><p><strong>(ಆಧಾರ: ಆರ್ಬಿಐ)</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>