ಬೆಂಗಳೂರು: ತನ್ನ ಒಡೆತನದ ಹೋಟೆಲ್ಗಳಲ್ಲಿ ಪ್ರವಾಸಿಗರಿಗೆ ಅತ್ಯಧಿಕ ಸುರಕ್ಷತೆಯ, ಸ್ವಚ್ಛತೆಯ ಉನ್ನತ ಗುಣಮಟ್ಟದ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಂಡಿಯನ್ ಹೋಟೆಲ್ ಕಂಪನಿ (ಐಎಚ್ಸಿಎಲ್) ತಿಳಿಸಿದೆ.
‘ಲಾಕ್ಡೌನ್ ಸಡಿಲಿಕೆಯಿಂದ ಪ್ರವಾಸ ತೆರಳುವ ಅತಿಥಿಗಳು ಹೋಟೆಲ್ಗಳಲ್ಲಿ ಕಳೆಯುವ ಎಲ್ಲ ಸಂದರ್ಭಗಳಲ್ಲಿ ಸ್ವಚ್ಛತೆ, ಸುರಕ್ಷತೆ ಮತ್ತು ಗುಣಮಟ್ಟದ ನಿರ್ವಹಣೆಗೆ ಒತ್ತು ನೀಡಲಾಗುವುದು’ ಎಂದು ತಾಜ್ ವೆಸ್ಟ್ ಎಂಡ್ ಹೋಟೆಲ್ನ ಕರ್ನಾಟಕ ವಲಯದ ಜನರಲ್ ಮ್ಯಾನೇಜರ್ ಸೋಮನಾಥ ಮುಖರ್ಜಿ ತಿಳಿಸಿದ್ದಾರೆ.