‘ಕೆಬಿಎಲ್- ಅಮೃತ ಸಮೃದ್ಧಿ’ ಯೋಜನೆಯನ್ನು ಬಿಡುಗಡೆ ಮಾಡಿದ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಅವರು, ‘ಕರ್ಣಾಟಕ ಬ್ಯಾಂಕ್ ದೇಶಭಕ್ತಿಯ ಸಮೃದ್ಧ ಪರಂಪರೆ ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುತ್ತಾ ಅದರ ಪೋಷಣೆಗೆಮುಂಚೂಣಿಯಲ್ಲಿರುತ್ತದೆ. ಸೀಮಿತ ಅವಧಿಗಾಗಿ ಇರುವ ಈ ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಗ್ರಾಹಕರು ಪಡೆಯಬೇಕು’ ಎಂದರು.