ಆತ್ಮನಿರ್ಭರ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ನೀವು ಉಪಭೋಗಿಸುವುದೆಲ್ಲವನ್ನೂ ತಯಾರಿಸಬೇಕು ಎಂದೇನೂ ಇಲ್ಲ. ಆಮದು ಪರ್ಯಾಯವು ಉತ್ತಮ ಯೋಚನೆ ಅಲ್ಲ. ಆತ್ಮನಿರ್ಭರದಿಂದಾಗಿ ಆಮದು ಪರ್ಯಾಯ ನೀತಿ ರೂಪಿಸುವ ಪ್ರಕ್ರಿಯೆಗೆ ವೇಗ ದೊರೆತಿದೆ ಎಂದು ನಾನು ಭಾವಿಸುವುದಿಲ್ಲ. ಆಮದು ಪರವಾನಗಿ ಮತ್ತೆ ಬಂದಿದೆ ಎಂದು ಕೆಲವರು ನನಗೆ ಹೇಳಿದ್ದಾರೆ. ಆದರೆ, ವಾಸ್ತವದಲ್ಲಿ ಆಮದು ಪರವಾನಗಿ ಜಾರಿಯಾಗಿರುವ ಯಾವುದೇ ವರದಿಗಳು ನನಗೆ ಕಂಡಿಲ್ಲ. ಒಂದೊಮ್ಮೆ ಜಾರಿಗೊಳಿಸಿದ್ದೇ ಆದರೆ ವಿಶ್ವ ವ್ಯಾಪಾರ ಸಂಘಟನೆಯೊಂದಿಗೆ (ಡಬ್ಲ್ಯುಟಿಒ) ನಾವು ಮಾಡಿಕೊಂಡಿರುವ ಒಪ್ಪಂದಗಳ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದ್ದಾರೆ.