<p><strong>ಬೆಂಗಳೂರು:</strong> ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ತನ್ನ ಸುವರ್ಣ ಮಹೋತ್ಸವದ ಪ್ರಯುಕ್ತ ವಿಶೇಷ ಅಂಚೆ ಚೀಟಿಯನ್ನು, ಭಾರತೀಯ ಅಂಚೆ ಇಲಾಖೆ ಜೊತೆಗೂಡಿ ಬುಧವಾರ ಬಿಡುಗಡೆ ಮಾಡಿದೆ.</p>.<p>ಅಂಚೆ ಇಲಾಖೆಯು ವಿಶೇಷ ಸಂದರ್ಭಗಳಲ್ಲಿ ಕಂಪನಿಗಳಿಗೆ, ಸಂಸ್ಥೆಗಳಿಗೆ ವಿಶೇಷ ಅಂಚೆ ಚೀಟಿಯನ್ನು ರೂಪಿಸಿಕೊಡುತ್ತದೆ. ಇದಕ್ಕೆ ‘ಮೈ ಸ್ಟ್ಯಾಂಪ್’ ಎಂದು ಹೆಸರು.</p>.<p>‘1975ರಲ್ಲಿ ಸ್ಥಾಪನೆಯಾದ ಕಂಪನಿಯು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಅಂಚೆ ಇಲಾಖೆ ಜೊತೆ ಸೇರಿ ಬಿಡುಗಡೆ ಮಾಡಿರುವ ಅಂಚೆ ಚೀಟಿಯು ಪುರವಂಕರ ಕಂಪನಿಯ ಪಯಣವನ್ನು ಹೇಳುತ್ತದೆ. ಸ್ಟ್ಯಾಂಪ್ನಲ್ಲಿರುವ ನೀಲಿ ಬಣ್ಣವು ಕಠಿಣ ಶ್ರಮದ ಸಂಕೇತ, ದ ಆರ್ಟ್ ಆಫ್ ಡೆವಲಪ್ಮೆಂಟ್ ಶೀರ್ಷಿಕೆ ಸೃಜನಾತ್ಮಕತೆ ಆಗಿದೆ’ ಎಂದು ಕಂಪನಿಯ ದಕ್ಷಿಣ ವಲಯದ ಸಿಇಒ ಮಲ್ಲಣ್ಣ ಸಾಸಲು ಹೇಳಿದರು.</p>.<p>ಕರ್ನಾಟಕ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಮಾತನಾಡಿ, ‘ಅಂಚೆ ಚೀಟಿಗಳು ಸೂಕ್ಷ್ಮ ಕಲಾಕೃತಿಗಳಷ್ಟೇ ಅಲ್ಲ. ಅವು ಇತಿಹಾಸ, ಸಾಧನೆ, ಸಂಸ್ಕೃತಿಯ ಪ್ರತೀಕ. ಮೈ ಸ್ಟ್ಯಾಂಪ್ನಂತಹ ಕ್ರಮಗಳು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಕಂಪನಿಗಳ ಕೊಡುಗೆಯನ್ನು ಸ್ಮರಿಸುತ್ತವೆ’ ಎಂದರು.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ತನ್ನ ಸುವರ್ಣ ಮಹೋತ್ಸವದ ಪ್ರಯುಕ್ತ ವಿಶೇಷ ಅಂಚೆ ಚೀಟಿಯನ್ನು, ಭಾರತೀಯ ಅಂಚೆ ಇಲಾಖೆ ಜೊತೆಗೂಡಿ ಬುಧವಾರ ಬಿಡುಗಡೆ ಮಾಡಿದೆ.</p>.<p>ಅಂಚೆ ಇಲಾಖೆಯು ವಿಶೇಷ ಸಂದರ್ಭಗಳಲ್ಲಿ ಕಂಪನಿಗಳಿಗೆ, ಸಂಸ್ಥೆಗಳಿಗೆ ವಿಶೇಷ ಅಂಚೆ ಚೀಟಿಯನ್ನು ರೂಪಿಸಿಕೊಡುತ್ತದೆ. ಇದಕ್ಕೆ ‘ಮೈ ಸ್ಟ್ಯಾಂಪ್’ ಎಂದು ಹೆಸರು.</p>.<p>‘1975ರಲ್ಲಿ ಸ್ಥಾಪನೆಯಾದ ಕಂಪನಿಯು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಅಂಚೆ ಇಲಾಖೆ ಜೊತೆ ಸೇರಿ ಬಿಡುಗಡೆ ಮಾಡಿರುವ ಅಂಚೆ ಚೀಟಿಯು ಪುರವಂಕರ ಕಂಪನಿಯ ಪಯಣವನ್ನು ಹೇಳುತ್ತದೆ. ಸ್ಟ್ಯಾಂಪ್ನಲ್ಲಿರುವ ನೀಲಿ ಬಣ್ಣವು ಕಠಿಣ ಶ್ರಮದ ಸಂಕೇತ, ದ ಆರ್ಟ್ ಆಫ್ ಡೆವಲಪ್ಮೆಂಟ್ ಶೀರ್ಷಿಕೆ ಸೃಜನಾತ್ಮಕತೆ ಆಗಿದೆ’ ಎಂದು ಕಂಪನಿಯ ದಕ್ಷಿಣ ವಲಯದ ಸಿಇಒ ಮಲ್ಲಣ್ಣ ಸಾಸಲು ಹೇಳಿದರು.</p>.<p>ಕರ್ನಾಟಕ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಮಾತನಾಡಿ, ‘ಅಂಚೆ ಚೀಟಿಗಳು ಸೂಕ್ಷ್ಮ ಕಲಾಕೃತಿಗಳಷ್ಟೇ ಅಲ್ಲ. ಅವು ಇತಿಹಾಸ, ಸಾಧನೆ, ಸಂಸ್ಕೃತಿಯ ಪ್ರತೀಕ. ಮೈ ಸ್ಟ್ಯಾಂಪ್ನಂತಹ ಕ್ರಮಗಳು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಕಂಪನಿಗಳ ಕೊಡುಗೆಯನ್ನು ಸ್ಮರಿಸುತ್ತವೆ’ ಎಂದರು.</p>.<p>Highlights - null</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>