<p><strong>ನವದೆಹಲಿ:</strong> ತಮಿಳುನಾಡಿನಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು ₹ 400 ಕೋಟಿ ಬೃಹತ್ ಪ್ರಮಾಣದ ಬಹಿರಂಗಪಡಿಸದ ಆದಾಯ ಮತ್ತು ಕಡಲಾಚೆಯ ವಹಿವಾಟು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಹೇಳಿದೆ.</p>.<p>ದೊಡ್ಡ ಪ್ರಮಾಣದ ಲೆಕ್ಕವಿಲ್ಲದ ಹಣವನ್ನು ವಿದೇಶಿ ಸಂಸ್ಥೆಗಳ ಜೊತೆ ವಹಿವಾಟು ನಡೆಸಿರುವ ವ್ಯಕ್ತಿಗಳ ಮೇಲೆ ದಾಳಿ ಮತ್ತು ಅವರ ಸಂಬಂಧಿತ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದಾಗ ‘ಲೆಕ್ಕವಿಲ್ಲದ’ ₹ 50 ಲಕ್ಷ ನಗದು, 3 ಕೋಟಿ ಮೌಲ್ಯದ ಆಭರಣಗಳು ಮತ್ತು ₹ 12.5 ಕೋಟಿ ಮೌಲ್ಯದ ಒಂಬತ್ತು ಐಷಾರಾಮಿ ವಾಹನಗಳು ಪತ್ತೆಯಾಗಿವೆ" ಎಂದು ಐಟಿ ಇಲಾಖೆ ತಿಳಿಸಿದೆ.</p>.<p>"ಕೃಷಿ ಸರಕುಗಳ ಮಾರಾಟ ಮತ್ತು ಖರೀದಿಯ ಸೋಗಿನಲ್ಲಿ ವಿವಿಧ ಘಟಕಗಳ ಮೂಲಕ ₹ 100 ಕೋಟಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗಿದೆ ಎಂದು ಶೋಧದ ಸಂದರ್ಭದಲ್ಲಿ ಕಂಡುಬಂದ ಸಾಕ್ಷ್ಯಗಳು ಬಹಿರಂಗಪಡಿಸಿವೆ. ಈ ಘಟಕಗಳ ಕೃಷಿ ಸಂಬಂಧಿತ ಯಾವುದೇ ಚಟುವಟಿಕೆಗಳು ಅಸ್ತಿತ್ವದಲ್ಲಿಲ್ಲ ಮತ್ತು ಯಾವುದೇ ಸ್ಟಾಕ್ ಕಂಡುಬಂದಿಲ್ಲ ಎಂದು ಐಟಿ ಇಲಾಖೆ ಹೇಳಿದೆ.</p>.<p>"ನಕಲಿ ಮಾರಾಟ ಮತ್ತು ಖರೀದಿ ಇನ್ವಾಯ್ಸ್ಗಳನ್ನು ಅವರ ಉದ್ಯೋಗಿಗಳೇ ತಯಾರಿಸಿರುವುದು ಕಂಡುಬಂದಿದೆ" ಎಂದು ಸಿಬಿಡಿಟಿ ಹೇಳಿದೆ.</p>.<p>ಬ್ಯಾಂಕ್ ಸಾಲಗಳನ್ನು ಪಡೆಯಲು ವಹಿವಾಟು ತೋರಿಸಲು ಮಾರಾಟ ಮತ್ತು ಸ್ಟಾಕ್ ಕುರಿತಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಅದು ಹೇಳಿದೆ.</p>.<p>"ದಾಳಿ ವೇಳೆ ಕಂಡು ಬಂದ ಈ ಘಟಕಗಳು ಇಲ್ಲಿಯವರೆಗೆ ಯಾವುದೇ ಟ್ಯಾಕ್ಸ್ ರಿಟರ್ನ್ ಸಲ್ಲಿಸಿಲ್ಲ. ವಿದೇಶಿ ಘಟಕದಿಂದ ಡಿಬೆಂಚರ್ ಮೂಲಕ ₹ 150 ಕೋಟಿ ಪಡೆದಿದ್ದಾರೆ, ಶೋಧದ ಸಮಯದಲ್ಲಿ ಕಂಡುಬಂದ ಸಾಕ್ಷ್ಯಗಳು ಇದೊಂದು ಶಾಮ್ ವಹಿವಾಟು ಮತ್ತು ಎಲ್ಲ ಹಣ ಆ ವ್ಯಕ್ತಿಗಳ ವೈಯಕ್ತಿಕ ಖಾತೆಗಳಿಗೆ ಹೋಗಿದೆ " ಎಂದು ಸಿಬಿಡಿಟಿ ಹೇಳಿದೆ.</p>.<p>ಇದರ ಜೊತೆಗೆ ಈ ಘಟಕಗಳು ಮಸಾಲೆ ಪದಾರ್ಥಗಳನ್ನು ಸಹ ಆಮದು ಮಾಡಿಕೊಂಡಿವೆ, ಅದರ ಆಮದು ವೆಚ್ಚ ಸುಮಾರು ₹ 25 ಕೋಟಿ ಎಂದು ಇಲಾಖೆ ತಿಳಿಸಿದೆ.<br /><br />"ಈ ಮೂಲಕ, ಹಣವನ್ನು ಭಾರತದಿಂದ ಹೊರಗೆ ಕಳುಹಿಸಲಾಗಿದ್ದು, ಇತರ ದೇಶಗಳಲ್ಲಿನ ಅವರ ವೈಯಕ್ತಿಕ ಖಾತೆಗಳಿಗೆ ಜಮಾ ಮಾಡಲಾಗಿದೆ.</p>.<p>ದಾಳೆ ವೇಳೆ, ಚೆನ್ನೈನ ಪ್ರಮುಖ ಸ್ಥಳಗಳು ಮತ್ತು ತಮಿಳುನಾಡಿನ ಇತರ ಪಟ್ಟಣಗಳಲ್ಲಿ ಕಳೆದ 3-4 ವರ್ಷಗಳಲ್ಲಿ ಹಲವಾರು ಸ್ಥಿರಾಸ್ತಿಗಳನ್ನು ಸರ್ಕಲ್ ದರಗಳಿಗಿಂತ ಕಡಿಮೆ ಮೌಲ್ಯದಲ್ಲಿ ಖರೀದಿಸಲಾಗಿರುವುದು ಕಂಡು ಬಂದಿದೆ. ಈ ಹಲವು ಆಸ್ತಿಗಳನ್ನು ಟ್ಯಾಕ್ಸ್ ರಿಟರ್ನ್ಸ್ನಲ್ಲಿ ಬಹಿರಂಗಪಡಿಸಲಾಗಿಲ್ಲ.</p>.<p>"ಶೋಧದ ಸಮಯದಲ್ಲಿ 25 ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಅವುಗಳಲ್ಲಿ ಹಲವು ಲೆಕ್ಕದಲ್ಲಿಲ್ಲ. ಬಹಿರಂಗಪಡಿಸದ ವಿದೇಶಿ ಬ್ಯಾಂಕ್ ಖಾತೆಗಳು, ವಿದೇಶಿ ಕ್ರೆಡಿಟ್ ಕಾರ್ಡ್ಗಳು ಮತ್ತು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆಗಳ ಬಗ್ಗೆ ಪುರಾವೆಗಳು ಕಂಡುಬಂದಿವೆ" ಎಂದು ಹೇಳಿಕೆ ತಿಳಿಸಿದೆ.</p>.<p>ಶೋಧದಲ್ಲಿ ಈವರೆಗೆ ಸುಮಾರು ₹ 400 ಕೋಟಿ ಬಹಿರಂಗಪಡಿಸದ ಆದಾಯ ಪತ್ತೆಮಾಡಲಾಗಿದೆ. ಕಪ್ಪು ಹಣ ವಿರೋಧಿ ಕಾಯ್ದೆಯಡಿ ತನಿಖೆ ನಡೆಸಲಾಗುವುದು ಎಂದು ಅದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ತಮಿಳುನಾಡಿನಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು ₹ 400 ಕೋಟಿ ಬೃಹತ್ ಪ್ರಮಾಣದ ಬಹಿರಂಗಪಡಿಸದ ಆದಾಯ ಮತ್ತು ಕಡಲಾಚೆಯ ವಹಿವಾಟು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಹೇಳಿದೆ.</p>.<p>ದೊಡ್ಡ ಪ್ರಮಾಣದ ಲೆಕ್ಕವಿಲ್ಲದ ಹಣವನ್ನು ವಿದೇಶಿ ಸಂಸ್ಥೆಗಳ ಜೊತೆ ವಹಿವಾಟು ನಡೆಸಿರುವ ವ್ಯಕ್ತಿಗಳ ಮೇಲೆ ದಾಳಿ ಮತ್ತು ಅವರ ಸಂಬಂಧಿತ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದಾಗ ‘ಲೆಕ್ಕವಿಲ್ಲದ’ ₹ 50 ಲಕ್ಷ ನಗದು, 3 ಕೋಟಿ ಮೌಲ್ಯದ ಆಭರಣಗಳು ಮತ್ತು ₹ 12.5 ಕೋಟಿ ಮೌಲ್ಯದ ಒಂಬತ್ತು ಐಷಾರಾಮಿ ವಾಹನಗಳು ಪತ್ತೆಯಾಗಿವೆ" ಎಂದು ಐಟಿ ಇಲಾಖೆ ತಿಳಿಸಿದೆ.</p>.<p>"ಕೃಷಿ ಸರಕುಗಳ ಮಾರಾಟ ಮತ್ತು ಖರೀದಿಯ ಸೋಗಿನಲ್ಲಿ ವಿವಿಧ ಘಟಕಗಳ ಮೂಲಕ ₹ 100 ಕೋಟಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗಿದೆ ಎಂದು ಶೋಧದ ಸಂದರ್ಭದಲ್ಲಿ ಕಂಡುಬಂದ ಸಾಕ್ಷ್ಯಗಳು ಬಹಿರಂಗಪಡಿಸಿವೆ. ಈ ಘಟಕಗಳ ಕೃಷಿ ಸಂಬಂಧಿತ ಯಾವುದೇ ಚಟುವಟಿಕೆಗಳು ಅಸ್ತಿತ್ವದಲ್ಲಿಲ್ಲ ಮತ್ತು ಯಾವುದೇ ಸ್ಟಾಕ್ ಕಂಡುಬಂದಿಲ್ಲ ಎಂದು ಐಟಿ ಇಲಾಖೆ ಹೇಳಿದೆ.</p>.<p>"ನಕಲಿ ಮಾರಾಟ ಮತ್ತು ಖರೀದಿ ಇನ್ವಾಯ್ಸ್ಗಳನ್ನು ಅವರ ಉದ್ಯೋಗಿಗಳೇ ತಯಾರಿಸಿರುವುದು ಕಂಡುಬಂದಿದೆ" ಎಂದು ಸಿಬಿಡಿಟಿ ಹೇಳಿದೆ.</p>.<p>ಬ್ಯಾಂಕ್ ಸಾಲಗಳನ್ನು ಪಡೆಯಲು ವಹಿವಾಟು ತೋರಿಸಲು ಮಾರಾಟ ಮತ್ತು ಸ್ಟಾಕ್ ಕುರಿತಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಅದು ಹೇಳಿದೆ.</p>.<p>"ದಾಳಿ ವೇಳೆ ಕಂಡು ಬಂದ ಈ ಘಟಕಗಳು ಇಲ್ಲಿಯವರೆಗೆ ಯಾವುದೇ ಟ್ಯಾಕ್ಸ್ ರಿಟರ್ನ್ ಸಲ್ಲಿಸಿಲ್ಲ. ವಿದೇಶಿ ಘಟಕದಿಂದ ಡಿಬೆಂಚರ್ ಮೂಲಕ ₹ 150 ಕೋಟಿ ಪಡೆದಿದ್ದಾರೆ, ಶೋಧದ ಸಮಯದಲ್ಲಿ ಕಂಡುಬಂದ ಸಾಕ್ಷ್ಯಗಳು ಇದೊಂದು ಶಾಮ್ ವಹಿವಾಟು ಮತ್ತು ಎಲ್ಲ ಹಣ ಆ ವ್ಯಕ್ತಿಗಳ ವೈಯಕ್ತಿಕ ಖಾತೆಗಳಿಗೆ ಹೋಗಿದೆ " ಎಂದು ಸಿಬಿಡಿಟಿ ಹೇಳಿದೆ.</p>.<p>ಇದರ ಜೊತೆಗೆ ಈ ಘಟಕಗಳು ಮಸಾಲೆ ಪದಾರ್ಥಗಳನ್ನು ಸಹ ಆಮದು ಮಾಡಿಕೊಂಡಿವೆ, ಅದರ ಆಮದು ವೆಚ್ಚ ಸುಮಾರು ₹ 25 ಕೋಟಿ ಎಂದು ಇಲಾಖೆ ತಿಳಿಸಿದೆ.<br /><br />"ಈ ಮೂಲಕ, ಹಣವನ್ನು ಭಾರತದಿಂದ ಹೊರಗೆ ಕಳುಹಿಸಲಾಗಿದ್ದು, ಇತರ ದೇಶಗಳಲ್ಲಿನ ಅವರ ವೈಯಕ್ತಿಕ ಖಾತೆಗಳಿಗೆ ಜಮಾ ಮಾಡಲಾಗಿದೆ.</p>.<p>ದಾಳೆ ವೇಳೆ, ಚೆನ್ನೈನ ಪ್ರಮುಖ ಸ್ಥಳಗಳು ಮತ್ತು ತಮಿಳುನಾಡಿನ ಇತರ ಪಟ್ಟಣಗಳಲ್ಲಿ ಕಳೆದ 3-4 ವರ್ಷಗಳಲ್ಲಿ ಹಲವಾರು ಸ್ಥಿರಾಸ್ತಿಗಳನ್ನು ಸರ್ಕಲ್ ದರಗಳಿಗಿಂತ ಕಡಿಮೆ ಮೌಲ್ಯದಲ್ಲಿ ಖರೀದಿಸಲಾಗಿರುವುದು ಕಂಡು ಬಂದಿದೆ. ಈ ಹಲವು ಆಸ್ತಿಗಳನ್ನು ಟ್ಯಾಕ್ಸ್ ರಿಟರ್ನ್ಸ್ನಲ್ಲಿ ಬಹಿರಂಗಪಡಿಸಲಾಗಿಲ್ಲ.</p>.<p>"ಶೋಧದ ಸಮಯದಲ್ಲಿ 25 ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಅವುಗಳಲ್ಲಿ ಹಲವು ಲೆಕ್ಕದಲ್ಲಿಲ್ಲ. ಬಹಿರಂಗಪಡಿಸದ ವಿದೇಶಿ ಬ್ಯಾಂಕ್ ಖಾತೆಗಳು, ವಿದೇಶಿ ಕ್ರೆಡಿಟ್ ಕಾರ್ಡ್ಗಳು ಮತ್ತು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆಗಳ ಬಗ್ಗೆ ಪುರಾವೆಗಳು ಕಂಡುಬಂದಿವೆ" ಎಂದು ಹೇಳಿಕೆ ತಿಳಿಸಿದೆ.</p>.<p>ಶೋಧದಲ್ಲಿ ಈವರೆಗೆ ಸುಮಾರು ₹ 400 ಕೋಟಿ ಬಹಿರಂಗಪಡಿಸದ ಆದಾಯ ಪತ್ತೆಮಾಡಲಾಗಿದೆ. ಕಪ್ಪು ಹಣ ವಿರೋಧಿ ಕಾಯ್ದೆಯಡಿ ತನಿಖೆ ನಡೆಸಲಾಗುವುದು ಎಂದು ಅದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>