<p><strong>ನವದೆಹಲಿ: </strong>ಎರಡು ವರ್ಷಗಳವರೆಗೆ ಶೇ 1ರಷ್ಟು ‘ ನೈಸರ್ಗಿಕ ವಿಪತ್ತು ತೆರಿಗೆ’ ವಿಧಿಸಲು ಜಿಎಸ್ಟಿ ಮಂಡಳಿಯ ಸಚಿವರ ಸಮಿತಿಯು ಕೇರಳ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.</p>.<p>ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ನೇತೃತ್ವದಲ್ಲಿನ ಸಮಿತಿಯು ಭಾನುವಾರ ಈ ನಿರ್ಧಾರ ಪ್ರಕಟಿಸಿದೆ. ಶೇ 1ರಷ್ಟು ಸೆಸ್ಗೆ ಒಳಪಡುವ ಸರಕು ಮತ್ತು ಸೇವೆಗಳನ್ನು ಕೇರಳ ಸರ್ಕಾರವೇ ನಿರ್ಧರಿಸಲಿದೆ.</p>.<p>ನೈಸರ್ಗಿಕ ಪ್ರಕೋಪಕ್ಕೆ ಒಳಗಾದ ರಾಜ್ಯಗಳು ಅನುಮತಿ ನೀಡಿದ ಪ್ರಮಾಣಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆಯುವುದಕ್ಕೆ ಅವಕಾಶ ನೀಡಬೇಕು ಎಂದೂ ಸಮಿತಿಯು ಮಂಡಳಿಗೆ ಶಿಫಾರಸು ಮಾಡಿದೆ.</p>.<p>ಪ್ರವಾಹಕ್ಕೆ ಗುರಿಯಾಗಿ ಅಪಾರ ನಷ್ಟ ಕಂಡಿರುವ ಕೇರಳವು, ಹಣಕಾಸು ನಷ್ಟ ಸರಿದೂಗಿಸಲು ಮತ್ತು ಪುನರ್ವಸತಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯದ ಒಳಗೆ ಸರಕು ಮತ್ತು ಸೇವೆಗಳ ಮೇಲೆ ಸೀಮಿತ ಅವಧಿಗೆ ಪ್ರತ್ಯೇಕ ಸೆಸ್ ವಿಧಿಸಲು ಅನುಮತಿ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು.</p>.<p>ಇಂತಹ ಸೆಸ್ ವಿಧಿಸಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಉದ್ದೇಶಿಸಿರುವ ಇತರ ರಾಜ್ಯಗಳು ಜಿಎಸ್ಟಿ ಮಂಡಳಿಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಎರಡು ವರ್ಷಗಳವರೆಗೆ ಶೇ 1ರಷ್ಟು ‘ ನೈಸರ್ಗಿಕ ವಿಪತ್ತು ತೆರಿಗೆ’ ವಿಧಿಸಲು ಜಿಎಸ್ಟಿ ಮಂಡಳಿಯ ಸಚಿವರ ಸಮಿತಿಯು ಕೇರಳ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.</p>.<p>ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ ನೇತೃತ್ವದಲ್ಲಿನ ಸಮಿತಿಯು ಭಾನುವಾರ ಈ ನಿರ್ಧಾರ ಪ್ರಕಟಿಸಿದೆ. ಶೇ 1ರಷ್ಟು ಸೆಸ್ಗೆ ಒಳಪಡುವ ಸರಕು ಮತ್ತು ಸೇವೆಗಳನ್ನು ಕೇರಳ ಸರ್ಕಾರವೇ ನಿರ್ಧರಿಸಲಿದೆ.</p>.<p>ನೈಸರ್ಗಿಕ ಪ್ರಕೋಪಕ್ಕೆ ಒಳಗಾದ ರಾಜ್ಯಗಳು ಅನುಮತಿ ನೀಡಿದ ಪ್ರಮಾಣಕ್ಕಿಂತ ಹೆಚ್ಚಿನ ಮೊತ್ತದ ಸಾಲ ಪಡೆಯುವುದಕ್ಕೆ ಅವಕಾಶ ನೀಡಬೇಕು ಎಂದೂ ಸಮಿತಿಯು ಮಂಡಳಿಗೆ ಶಿಫಾರಸು ಮಾಡಿದೆ.</p>.<p>ಪ್ರವಾಹಕ್ಕೆ ಗುರಿಯಾಗಿ ಅಪಾರ ನಷ್ಟ ಕಂಡಿರುವ ಕೇರಳವು, ಹಣಕಾಸು ನಷ್ಟ ಸರಿದೂಗಿಸಲು ಮತ್ತು ಪುನರ್ವಸತಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯದ ಒಳಗೆ ಸರಕು ಮತ್ತು ಸೇವೆಗಳ ಮೇಲೆ ಸೀಮಿತ ಅವಧಿಗೆ ಪ್ರತ್ಯೇಕ ಸೆಸ್ ವಿಧಿಸಲು ಅನುಮತಿ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು.</p>.<p>ಇಂತಹ ಸೆಸ್ ವಿಧಿಸಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಉದ್ದೇಶಿಸಿರುವ ಇತರ ರಾಜ್ಯಗಳು ಜಿಎಸ್ಟಿ ಮಂಡಳಿಗೆ ಮನವಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>