‘ಗ್ರಾಹಕರ ಚಿನ್ನವು ಬ್ಯಾಂಕ್ ಬಳಿ ಭದ್ರವಾಗಿ ಇರುತ್ತದೆ. ಈ ಯೋಜನೆಯು ಸ್ಮಾರ್ಟ್ ಹಾಗೂ ಸುರಕ್ಷಿತ ಆಯ್ಕೆಯಾಗಿದೆ. ಗ್ರಾಹಕರು ತಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು, ಅವರ ಅಗತ್ಯಕ್ಕೆ ಸರಿಹೊಂದುವಂತ ಹಣಕಾಸು ಆಯ್ಕೆಯೂ ಆಗಿದೆ. ಈ ಯೋಜನೆಯು ಮಾರ್ಚ್ 1ರಿಂದ ಆರಂಭಗೊಂಡಿದ್ದು, ದೇಶದಲ್ಲಿರುವ ಬ್ಯಾಂಕ್ನ ಎಲ್ಲಾ ಶಾಖೆಗಳಲ್ಲೂ ಲಭ್ಯವಿದೆ’ ಎಂದು ಬ್ಯಾಂಕ್ನ ಮುಖ್ಯ ಮಾರುಕಟ್ಟೆ ಅಧಿಕಾರಿ ರೋಹಿತ್ ಭಾಸಿನ್ ತಿಳಿಸಿದ್ದಾರೆ.