<p><strong>ನವದೆಹಲಿ:</strong> ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರವು ₹50 ಹೆಚ್ಚಿಸಿದೆ. ಪರಿಷ್ಕೃತ ದರ ಮಂಗಳವಾರದಿಂದ ಅನ್ವಯವಾಗಲಿದೆ.</p><p>ಅಡುಗೆ ಅನಿಲ ಬೆಲೆಯಲ್ಲಿನ ಹೆಚ್ಚಳವು ಉಜ್ವಲಾ ಯೋಜನೆಯ ಫಲಾನುಭವಿಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಅನ್ವಯಿಸುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ.</p><p>ಇದರ ಪರಿಣಾಮವಾಗಿ ನವದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯು ₹853ಕ್ಕೆ ತಲುಪಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಇದೇ ಎಲ್ಪಿಜಿ ಸಿಲಿಂಡರ್ ದರ ಪ್ರಸ್ತುತ ₹503 ರಿಂದ ₹553ಕ್ಕೆ ಏರಿಕೆಯಾಗಿದೆ. </p><p>ಎಲ್ಪಿಜಿ ಸಿಲಿಂಡರ್ ದರವನ್ನು ಕಳೆದ ವರ್ಷ ಮಾರ್ಚ್ನಲ್ಲಿ ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಆಗ ಬೆಲೆಯನ್ನು ₹100 ಕಡಿತಗೊಳಿಸಲಾಗಿತ್ತು.</p><p>ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೌದಿ ಸಿಪಿ (ಎಲ್ಪಿಜಿ ದರ ನಿಗದಿಗೆ ಆಧಾರವಾಗಿರುವ ದರ) ಕಳೆದ ಎರಡು ವರ್ಷಗಳಲ್ಲಿ ಶೇ 63ರಷ್ಟು ಏರಿಕೆಯಾಗಿದೆ. 2023ರ ಜುಲೈನಲ್ಲಿ ಟನ್ಗೆ 385 ಡಾಲರ್ (₹33 ಸಾವಿರ) ಇದ್ದಿದ್ದು 2025ರ ಫೆಬ್ರುವರಿಗೆ 629 ಡಾಲರ್ಗೆ (₹54 ಸಾವಿರ) ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದರು.</p><p>‘ಇದರಿಂದ ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ಗೆ ₹1,028 ಬೆಲೆ ನಿಗದಿಪಡಿಸಬೇಕಿತ್ತು. ಆದರೆ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ಇದುವರೆಗೂ ಬೆಲೆಯನ್ನು ಸರಿದೂಗಿಸಿಕೊಳ್ಳುತ್ತಿದ್ದವು’ ಎಂದರು.</p><p>‘ಎಲ್ಪಿಜಿಯನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಗೆ ಮಾರಾಟ ಮಾಡಿದ್ದಕ್ಕಾಗಿ ಕಂಪನಿಗಳು ₹41,338 ಕೋಟಿ ನಷ್ಟ ಅನುಭವಿಸಿವೆ. ಇನ್ನಷ್ಟು ನಷ್ಟವನ್ನು ತಪ್ಪಿಸಲು ಬೆಲೆಯನ್ನು ಅಲ್ಪ ಹೆಚ್ಚಿಸಲಾಗಿದೆ’ ಎಂದು ಕಾರಣ ನೀಡಿದರು.</p><p>‘ಪ್ರಸ್ತುತ ಬೆಲೆಯಲ್ಲಿ, ಉಜ್ವಲಾ ಯೋಜನೆ ಫಲಾನುಭವಿ ಕುಟುಂಬಗಳಿಗೆ ಎಲ್ಪಿಜಿ ಬಳಸಿ ದಿನಕ್ಕೆ ಅಡುಗೆ ಮಾಡಲು ಸುಮಾರು ₹6.10 ಹಾಗೂ ಸಾಮಾನ್ಯ ಬಳಕೆದಾರರಿಗೆ ₹14.58 ಖರ್ಚಾಗುತ್ತದೆ. ಇದು ತುಂಬಾ ದುಬಾರಿಯೇನೂ ಅಲ್ಲ’ ಎಂದರು. </p>.<p><strong>ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ₹2 ಹೆಚ್ಚಳ</strong></p><p>ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ₹2 ಹೆಚ್ಚಿಸಿದೆ. ಆದರೆ ಅಬಕಾರಿ ಸುಂಕದ ಹೆಚ್ಚಳವು ಚಿಲ್ಲರೆ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.</p><p>‘ಅಬಕಾರಿ ಸುಂಕ ಏರಿಕೆಯಾದರೂ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ ಎಂದು ತೈಲೋತ್ಪನ್ನ ಕಂಪನಿಗಳು ತಿಳಿಸಿವೆ’ ಎಂದು ಸಚಿವಾಲಯವು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.</p><p>ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್ಗೆ ₹11 ರಿಂದ ₹13ಕ್ಕೆ ಹಾಗೂ ಡೀಸೆಲ್ ಮೇಲಿನ ಸುಂಕ ಲೀಟರ್ಗೆ ₹8 ರಿಂದ ₹10ಕ್ಕೆ ಏರಿಕೆಯಾಗಿದೆ.</p><p>ಈ ಹೆಚ್ಚಳದ ನಂತರ ಪೆಟ್ರೋಲ್ ಮೇಲಿನ ಕೇಂದ್ರದ ಒಟ್ಟು ತೆರಿಗೆಗಳು ಲೀಟರ್ಗೆ ₹21.9 ಹಾಗೂ ಡೀಸೆಲ್ ಮೇಲಿನ ತೆರಿಗೆಗಳು ₹17.80ಕ್ಕೆ ತಲುಪಿವೆ.</p>.<p><strong>ಸಿಎನ್ಜಿ ದರ ₹1 ಏರಿಕೆ</strong></p><p>ನವದೆಹಲಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್ಜಿ) ದರವನ್ನು ಅನಿಲ ಸಂಸ್ಥೆಗಳು ಪ್ರತಿ ಕೆ.ಜಿಗೆ ₹1 ಹೆಚ್ಚಿಸಿವೆ.</p><p>ರಾಷ್ಟ್ರದ ರಾಜಧಾನಿಯಲ್ಲಿ ಸಿಎನ್ಜಿ ದರ ಪ್ರತಿ ಕೆ.ಜಿಗೆ ₹75.09 ಆಗಿದೆ ಎಂದು ನವದೆಹಲಿಯ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ‘ಎಕ್ಸ್’ನಲ್ಲಿ ತಿಳಿಸಿದೆ.</p>.<p><strong>‘ಬಿಜೆಪಿ ಕಪಾಳಕ್ಕೆ ಏಟು’</strong></p><p><strong>ಬೆಂಗಳೂರು:</strong> ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಆರಂಭಿಸಿರುವ ರಾಜ್ಯದ ಬಿಜೆಪಿ ನಾಯಕರಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.</p><p>‘ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿರುವ ಸತ್ಯವನ್ನು ಪ್ರಧಾನಿ ಅವರೇ ದೇಶದ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ತೆರಿಗೆ ₹2, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹50 ಏರಿಕೆ ಮಾಡಿದ್ದಾರೆ. ಈಗ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು? ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದ್ದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಿರುವುದು ಏಕೆ ಎಂಬ ವಿಷಯವನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರವು ₹50 ಹೆಚ್ಚಿಸಿದೆ. ಪರಿಷ್ಕೃತ ದರ ಮಂಗಳವಾರದಿಂದ ಅನ್ವಯವಾಗಲಿದೆ.</p><p>ಅಡುಗೆ ಅನಿಲ ಬೆಲೆಯಲ್ಲಿನ ಹೆಚ್ಚಳವು ಉಜ್ವಲಾ ಯೋಜನೆಯ ಫಲಾನುಭವಿಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಅನ್ವಯಿಸುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ.</p><p>ಇದರ ಪರಿಣಾಮವಾಗಿ ನವದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆಯು ₹853ಕ್ಕೆ ತಲುಪಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಇದೇ ಎಲ್ಪಿಜಿ ಸಿಲಿಂಡರ್ ದರ ಪ್ರಸ್ತುತ ₹503 ರಿಂದ ₹553ಕ್ಕೆ ಏರಿಕೆಯಾಗಿದೆ. </p><p>ಎಲ್ಪಿಜಿ ಸಿಲಿಂಡರ್ ದರವನ್ನು ಕಳೆದ ವರ್ಷ ಮಾರ್ಚ್ನಲ್ಲಿ ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಆಗ ಬೆಲೆಯನ್ನು ₹100 ಕಡಿತಗೊಳಿಸಲಾಗಿತ್ತು.</p><p>ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೌದಿ ಸಿಪಿ (ಎಲ್ಪಿಜಿ ದರ ನಿಗದಿಗೆ ಆಧಾರವಾಗಿರುವ ದರ) ಕಳೆದ ಎರಡು ವರ್ಷಗಳಲ್ಲಿ ಶೇ 63ರಷ್ಟು ಏರಿಕೆಯಾಗಿದೆ. 2023ರ ಜುಲೈನಲ್ಲಿ ಟನ್ಗೆ 385 ಡಾಲರ್ (₹33 ಸಾವಿರ) ಇದ್ದಿದ್ದು 2025ರ ಫೆಬ್ರುವರಿಗೆ 629 ಡಾಲರ್ಗೆ (₹54 ಸಾವಿರ) ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದರು.</p><p>‘ಇದರಿಂದ ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ಗೆ ₹1,028 ಬೆಲೆ ನಿಗದಿಪಡಿಸಬೇಕಿತ್ತು. ಆದರೆ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ಇದುವರೆಗೂ ಬೆಲೆಯನ್ನು ಸರಿದೂಗಿಸಿಕೊಳ್ಳುತ್ತಿದ್ದವು’ ಎಂದರು.</p><p>‘ಎಲ್ಪಿಜಿಯನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಗೆ ಮಾರಾಟ ಮಾಡಿದ್ದಕ್ಕಾಗಿ ಕಂಪನಿಗಳು ₹41,338 ಕೋಟಿ ನಷ್ಟ ಅನುಭವಿಸಿವೆ. ಇನ್ನಷ್ಟು ನಷ್ಟವನ್ನು ತಪ್ಪಿಸಲು ಬೆಲೆಯನ್ನು ಅಲ್ಪ ಹೆಚ್ಚಿಸಲಾಗಿದೆ’ ಎಂದು ಕಾರಣ ನೀಡಿದರು.</p><p>‘ಪ್ರಸ್ತುತ ಬೆಲೆಯಲ್ಲಿ, ಉಜ್ವಲಾ ಯೋಜನೆ ಫಲಾನುಭವಿ ಕುಟುಂಬಗಳಿಗೆ ಎಲ್ಪಿಜಿ ಬಳಸಿ ದಿನಕ್ಕೆ ಅಡುಗೆ ಮಾಡಲು ಸುಮಾರು ₹6.10 ಹಾಗೂ ಸಾಮಾನ್ಯ ಬಳಕೆದಾರರಿಗೆ ₹14.58 ಖರ್ಚಾಗುತ್ತದೆ. ಇದು ತುಂಬಾ ದುಬಾರಿಯೇನೂ ಅಲ್ಲ’ ಎಂದರು. </p>.<p><strong>ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ₹2 ಹೆಚ್ಚಳ</strong></p><p>ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ₹2 ಹೆಚ್ಚಿಸಿದೆ. ಆದರೆ ಅಬಕಾರಿ ಸುಂಕದ ಹೆಚ್ಚಳವು ಚಿಲ್ಲರೆ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.</p><p>‘ಅಬಕಾರಿ ಸುಂಕ ಏರಿಕೆಯಾದರೂ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ ಎಂದು ತೈಲೋತ್ಪನ್ನ ಕಂಪನಿಗಳು ತಿಳಿಸಿವೆ’ ಎಂದು ಸಚಿವಾಲಯವು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.</p><p>ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್ಗೆ ₹11 ರಿಂದ ₹13ಕ್ಕೆ ಹಾಗೂ ಡೀಸೆಲ್ ಮೇಲಿನ ಸುಂಕ ಲೀಟರ್ಗೆ ₹8 ರಿಂದ ₹10ಕ್ಕೆ ಏರಿಕೆಯಾಗಿದೆ.</p><p>ಈ ಹೆಚ್ಚಳದ ನಂತರ ಪೆಟ್ರೋಲ್ ಮೇಲಿನ ಕೇಂದ್ರದ ಒಟ್ಟು ತೆರಿಗೆಗಳು ಲೀಟರ್ಗೆ ₹21.9 ಹಾಗೂ ಡೀಸೆಲ್ ಮೇಲಿನ ತೆರಿಗೆಗಳು ₹17.80ಕ್ಕೆ ತಲುಪಿವೆ.</p>.<p><strong>ಸಿಎನ್ಜಿ ದರ ₹1 ಏರಿಕೆ</strong></p><p>ನವದೆಹಲಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್ಜಿ) ದರವನ್ನು ಅನಿಲ ಸಂಸ್ಥೆಗಳು ಪ್ರತಿ ಕೆ.ಜಿಗೆ ₹1 ಹೆಚ್ಚಿಸಿವೆ.</p><p>ರಾಷ್ಟ್ರದ ರಾಜಧಾನಿಯಲ್ಲಿ ಸಿಎನ್ಜಿ ದರ ಪ್ರತಿ ಕೆ.ಜಿಗೆ ₹75.09 ಆಗಿದೆ ಎಂದು ನವದೆಹಲಿಯ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ‘ಎಕ್ಸ್’ನಲ್ಲಿ ತಿಳಿಸಿದೆ.</p>.<p><strong>‘ಬಿಜೆಪಿ ಕಪಾಳಕ್ಕೆ ಏಟು’</strong></p><p><strong>ಬೆಂಗಳೂರು:</strong> ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಆರಂಭಿಸಿರುವ ರಾಜ್ಯದ ಬಿಜೆಪಿ ನಾಯಕರಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.</p><p>‘ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿರುವ ಸತ್ಯವನ್ನು ಪ್ರಧಾನಿ ಅವರೇ ದೇಶದ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ತೆರಿಗೆ ₹2, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹50 ಏರಿಕೆ ಮಾಡಿದ್ದಾರೆ. ಈಗ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು? ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದ್ದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಿರುವುದು ಏಕೆ ಎಂಬ ವಿಷಯವನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>