ನವದೆಹಲಿ (ಪಿಟಿಐ):ಎಂಎಸ್ಎಂಇ ವಲಯ ಎದುರಿಸುತ್ತಿರುವ ನಗದು ಲಭ್ಯತೆ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಪ್ರಧಾನ ವ್ಯವಸ್ಥಾಪಕ ಅಥವಾ ಪ್ರಧಾನ ವ್ಯವಸ್ಥಾಪಕ ಮಟ್ಟದ ಅಧಿಕಾರಿಯನ್ನು ನೇಮಿಸುವಂತೆ ಕೇಂದ್ರ ಸರ್ಕಾರವು, ಸರ್ಕಾರಿ ಸ್ವಾಮ್ಯದಬ್ಯಾಂಕ್ಗಳಿಗೆ ಸೂಚನೆ ನೀಡಿದೆ.
ವರದಿ ಸಿದ್ಧಪಡಿಸುವ ವೇಳೆ,ಬ್ಯಾಂಕ್ಗಳಿಗೆ ಸಾಲ ಪಡೆದಿರುವ, ಸಾಲ ಬಾಕಿ ಉಳಿಸಿಕೊಂಡಿರುವ, ಸಾಲ ಮರು ಹೊಂದಾಣಿಕೆ ಅಥವಾ ವಸೂಲಿ ಪ್ರಕ್ರಿಯೆ ಕುರಿತು ಹಂತ ಹಂತವಾಗಿ ಮಾಹಿತಿ ಸಂಗ್ರಹಿಸಬಹುದು ಎಂದು ತಿಳಿಸಿದೆ.
ಹೊಸದಾಗಿ ಯಾವ ಎಂಎಸ್ಎಂಇಗಳಿಗೆ ಸಾಲ ನೀಡಲಾಗಿದೆ ಮತ್ತು ಯಾವ ಉದ್ದಿಮೆಗಳು ಬ್ಯಾಂಕ್ ವ್ಯಾಪ್ತಿಯಿಂದ ಹೊರಗೆ ಇವೆ ಎನ್ನುವ ಬಗ್ಗೆ ವಿವರವಾದ ವರದಿ ನೀಡುವಂತೆ ಬ್ಯಾಂಕ್ಗಳಿಗೆ ಕೇಳಲಾಗಿದೆ.