ಹಣಕಾಸಿನ ಒಳಗೊಳ್ಳುವಿಕೆಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ವೇದಿಕೆಗಳನ್ನು ಜಾಗತಿಕ ಮಟ್ಟಕ್ಕೆ ಒಯ್ಯುವ ಪ್ರಯತ್ನವೂ ಆಗಬೇಕು ಎಂದು ಅವರು ಹೇಳಿದರು. ‘ಇಂದು ಜಗತ್ತು ಭಾರತವನ್ನು ಒಂದು ದೊಡ್ಡ ಮಾರುಕಟ್ಟೆಯಾಗಷ್ಟೇ ನೋಡುತ್ತಿಲ್ಲ. ಬದಲಿಗೆ, ಸೃಜನಶೀಲ ಹಾಗೂ ಸಮರ್ಥ ವ್ಯವಸ್ಥೆಯನ್ನು ಹೊಂದಿರುವ ದೇಶವನ್ನಾಗಿ ಕಾಣುತ್ತಿದೆ’ ಎಂದರು.