ನವದೆಹಲಿ: ಪೊಲೀಸರು, ರಾಜಕಾರಣಿಗಳು ಮುಂತಾದ ‘ಪ್ರಭಾವಿ’ ವರ್ಗದವರಿಗೆ ಸಾಲ ನೀಡದೇ ಇರುವಂತೆ ಬ್ಯಾಂಕ್ಗಳಿಗೆ ಯಾವುದೇ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆಗೆ ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕ್ಗಳು ‘ಕೆವೈಸಿ’ ಮತ್ತು ಇತರೆ ರೇಟಿಂಗ್ಸ್ಗಳ ಮೂಲಕ ಇಂತಹ ವರ್ಗದವರಿಗೆ ಸಾಲ ನೀಡುವ ಕುರಿತು ಮೌಲ್ಯಮಾಪನ ಮಾಡಬಹುದು ಎಂದು ಹೇಳಿದ್ದಾರೆ.
ಪೊಲೀಸರು ಮತ್ತು ರಾಜಕಾರಣಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್ಗಳು ಸಮಸ್ಯೆ ಹೊಂದಿವೆ. ಇಂತಹ ಗ್ರಾಹರಿಗೆ ಸಾಲ ನೀಡುವ ಮೊದಲು ಬ್ಯಾಂಕ್ಗಳು ದಾಖಲೆಗಳನ್ನು ನೋಡುತ್ತವೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೃಷ್ಣರಾವ್ ಕರಾಡ್ ತಿಳಿಸಿದ್ದಾರೆ.
ಕ್ರಿಪ್ಟೊಕರೆನ್ಸಿ ಕುರಿತು ಹೊಸ ಮಸೂದೆಯ ಬಗ್ಗೆ ಕೇಂದ್ರ ಸರ್ಕಾರವು ಕೆಲಸ ಮಾಡುತ್ತಿದ್ದು ಕೇಂದ್ರ ಸಚಿವ ಸಂಪುಟದ ಒಪ್ಪಿಗೆಯ ಬಳಿಕ ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ.