‘ಹಣದ ಮೇಲೆ ನೌಕರರಿಗೆ ಹಕ್ಕಿದೆ. ಹೂಡಿಕೆಯಾದ ಹಣವು ಬಡ್ಡಿಯನ್ನು ಪಡೆಯುತ್ತಿರುತ್ತದೆ. ನಿವೃತ್ತಿಯ ನಂತರದಲ್ಲಿ ಹಣವು ನೌಕರರಿಗೆ ಸಿಗುತ್ತದೆ. ಆದರೆ ಹಣವು ಸರ್ಕಾರದ ಕೈಗೆ ವಾಪಸ್ ಸಿಗುವುದಿಲ್ಲ’ ಎಂದು ನಿರ್ಮಲಾ ಅವರು ವರದಿಗಾರರಿಗೆ ತಿಳಿಸಿದ್ದಾರೆ. ನಿರ್ಮಲಾ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿದ್ದರು. ಎನ್ಪಿಎಸ್ ಅಡಿಯಲ್ಲಿ ಹೂಡಿಕೆ ಆಗಿರುವ ಹಣವು ನೌಕರನಿಗೆ ಸಂಬಂಧಿಸಿದ್ದು. ಇಲ್ಲಿ ಎನ್ಪಿಎಸ್ ಟ್ರಸ್ಟ್ ಹಾಗೂ ನೌಕರನ ನಡುವೆ ಒಂದು ಒಪ್ಪಂದ ಏರ್ಪಟ್ಟಿರುತ್ತದೆ. ಎನ್ಪಿಎಸ್ ಅಡಿಯಲ್ಲಿ ಹೂಡಿಕೆ ಆಗಿರುವ ಹಣವು ವಾಪಸ್ ಸಿಗುತ್ತದೆ ಎಂದು ರಾಜ್ಯ ಸರ್ಕಾರಗಳು ಭಾವಿಸಿದ್ದರೆ, ಅದು ಈಗಿನ ಕಾನೂನುಗಳ ಅಡಿಯಲ್ಲಿ ಸಾಧ್ಯವಿಲ್ಲ ಎಂದು ಜೋಷಿ ಹೇಳಿದ್ದಾರೆ.