‘ಒಂದು ಕ್ವಿಂಟಲ್ ಉಳ್ಳಾಗಡ್ಡಿಯನ್ನು ಹೊಲದಿಂದ ಮಾರುಕಟ್ಟೆಗೆ ಸಾಗಿಸಲು ₹1,500 ಖರ್ಚಾಗುತ್ತದೆ (ಕಟಾವು, ಗ್ರೇಡಿಂಗ್,ಸಾಗಣೆ, ಚೀಲದವೆಚ್ಚ). ಆದರೆ, ಮಾರುಕಟ್ಟೆ ದರ ₹ 700 ಇದೆ. ಹೀಗಿರುವಾಗ ನಾವೇ ಕೈಯ್ಯಾರೆ ಇನ್ನಷ್ಟು ಹಣ ವ್ಯಯಿಸಬೇಕಿದೆ. ಬೆಳೆಗೆ ಹಾಕಿದ ಬಂಡವಾಳವೇ ತಲೆ ಮೇಲೆ ಬೆಟ್ಟದಷ್ಟಿದೆ. ಹೀಗಾಗಿ ಕಟಾವಿನ ಉಸಾಬರಿಗೆ ಹೋಗಿಲ್ಲ. ಕೊಳೆತು ಗೊಬ್ಬರವಾದರೂ ಆಗಲಿ ಅಂತ ಬಿಟ್ಟಿದ್ದೇವೆ’ ಎಂದು ಕುಸುಗಲ್ ಗ್ರಾಮದ ರೈತ ಮಂಜುನಾಥ ಅಸಹಾಯಕರಾಗಿ ನುಡಿದರು.