<p><strong>ಬೆಂಗಳೂರು: </strong>ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿಸಾಕಷ್ಟು ಅಡಮಾನ ಇಲ್ಲ ಅಥವಾ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲ ಎನ್ನುವ ಕಾರಣಕ್ಕೆ ಶೇ 40ರಷ್ಟು ಕಿರು ಉದ್ದಿಮೆಗಳಿಗೆ ಸಾಲವನ್ನು ನಿರಾಕರಿಸಲಾಗಿತ್ತು.</p>.<p>ಗ್ಲೋಬಲ್ ಅಲಯನ್ಸ್ ಫಾರ್ ಮಾಸ್ ಎಂಟರ್ಪ್ರಿನ್ಯೂರ್ಶಿಪ್ (ಜಿಎಎಂಇ–ಗೇಮ್) ಈಚೆಗೆ ಬಿಡುಗಡೆ ಮಾಡಿರುವ ‘ಚೇತರಿಕೆಯ ಹಾದಿ: ಭಾರತದಲ್ಲಿ ಕಿರು ಉದ್ದಿಮೆಗಳ ಮೇಲೆ ಕೋವಿಡ್–19 ಪರಿಣಾಮದ ಪರಿಶೀಲನೆ’ ಎನ್ನುವ ವರದಿಯಲ್ಲಿ ಈ ಮಾಹಿತಿ ಇದೆ.</p>.<p>ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಶೇ 21ರಷ್ಟು ಕಿರು ಉದ್ದಿಮೆಗಳ ಬಳಿ ಅಗತ್ಯವಾದ ದಾಖಲೆಪತ್ರಗಳೇ ಇರಲಿಲ್ಲ ಎಂದು ತಿಳಿಸಿದೆ.</p>.<p>ಲಾಕ್ಡೌನ್ ಅವಧಿಯಲ್ಲಿ ಮತ್ತು ಆ ಬಳಿಕ ಎಂಎಸ್ಎಂಇಗಳು ಎದುರಿಸಿದ ಹಣಕಾಸಿನ ಪರಿಣಾಮಗಳು, ವಹಿವಾಟು ನಡೆಸುವ ವಿಶ್ವಾಸ ಮತ್ತು ಒತ್ತಡ ನಿರ್ವಹಣೆಯ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ‘ಗೇಮ್’ ಹೇಳಿದೆ.</p>.<p>2020 ಮತ್ತು 2021ರಲ್ಲಿ ಎರಡು ಸುತ್ತಿನಲ್ಲಿ ಅಧ್ಯಯನ ನಡೆಸಲಾಗಿದೆ. 1955 ಕಿರು ಉದ್ದಿಮೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಕೋವಿಡ್ನ ಪರಿಣಾಮಗಳನ್ನು ಕಡಿಮೆ ಮಾಡಲು ಸೂಕ್ತವಾದ ಕಾರ್ಯತಂತ್ರ ಅಥವಾ ಕಾರ್ಯವಿಧಾನವನ್ನೇ ಹೊಂದಿರಲಿಲ್ಲ ಎಂದು ಶೇ 50ರಷ್ಟು ಉದ್ದಿಮೆಗಳು ಹೇಳಿವೆ ಎಂದು ‘ಗೇಮ್’ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಬ್ಯಾಂಕ್ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು, ಕ್ಷೇತ್ರ ಅಧಿಕಾರಿಗಳು ಮತ್ತು ಬ್ಯಾಂಕಿಂಗ್ ಪ್ರತಿನಿಧಿಗಳು ಉದ್ದಿಮೆಗಳಲ್ಲಿ ತಿಳಿವಳಿಕೆ ಮೂಡಿಸುವ ತುರ್ತು ಅಗತ್ಯ ಇದೆ ಎಂದು ಗೇಮ್ ಸ್ಥಾಪಕ ರವಿ ವೆಂಕಟೇಶನ್ ಅಭಿಪ್ರಾಪಟ್ಟಿದ್ದಾರೆ.</p>.<p>‘ಆತ್ಮನಿರ್ಭರ ಭಾರತ’ ಕಾರ್ಯಕ್ರಮದಡಿ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಶೇ 31ರಷ್ಟು ಉದ್ದಿಮೆಗಳಿಗೆ ಮಾತ್ರವೇ ಮಾಹಿತಿ ಇದೆ ಎನ್ನುವುದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿಸಾಕಷ್ಟು ಅಡಮಾನ ಇಲ್ಲ ಅಥವಾ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲ ಎನ್ನುವ ಕಾರಣಕ್ಕೆ ಶೇ 40ರಷ್ಟು ಕಿರು ಉದ್ದಿಮೆಗಳಿಗೆ ಸಾಲವನ್ನು ನಿರಾಕರಿಸಲಾಗಿತ್ತು.</p>.<p>ಗ್ಲೋಬಲ್ ಅಲಯನ್ಸ್ ಫಾರ್ ಮಾಸ್ ಎಂಟರ್ಪ್ರಿನ್ಯೂರ್ಶಿಪ್ (ಜಿಎಎಂಇ–ಗೇಮ್) ಈಚೆಗೆ ಬಿಡುಗಡೆ ಮಾಡಿರುವ ‘ಚೇತರಿಕೆಯ ಹಾದಿ: ಭಾರತದಲ್ಲಿ ಕಿರು ಉದ್ದಿಮೆಗಳ ಮೇಲೆ ಕೋವಿಡ್–19 ಪರಿಣಾಮದ ಪರಿಶೀಲನೆ’ ಎನ್ನುವ ವರದಿಯಲ್ಲಿ ಈ ಮಾಹಿತಿ ಇದೆ.</p>.<p>ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಶೇ 21ರಷ್ಟು ಕಿರು ಉದ್ದಿಮೆಗಳ ಬಳಿ ಅಗತ್ಯವಾದ ದಾಖಲೆಪತ್ರಗಳೇ ಇರಲಿಲ್ಲ ಎಂದು ತಿಳಿಸಿದೆ.</p>.<p>ಲಾಕ್ಡೌನ್ ಅವಧಿಯಲ್ಲಿ ಮತ್ತು ಆ ಬಳಿಕ ಎಂಎಸ್ಎಂಇಗಳು ಎದುರಿಸಿದ ಹಣಕಾಸಿನ ಪರಿಣಾಮಗಳು, ವಹಿವಾಟು ನಡೆಸುವ ವಿಶ್ವಾಸ ಮತ್ತು ಒತ್ತಡ ನಿರ್ವಹಣೆಯ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ‘ಗೇಮ್’ ಹೇಳಿದೆ.</p>.<p>2020 ಮತ್ತು 2021ರಲ್ಲಿ ಎರಡು ಸುತ್ತಿನಲ್ಲಿ ಅಧ್ಯಯನ ನಡೆಸಲಾಗಿದೆ. 1955 ಕಿರು ಉದ್ದಿಮೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಕೋವಿಡ್ನ ಪರಿಣಾಮಗಳನ್ನು ಕಡಿಮೆ ಮಾಡಲು ಸೂಕ್ತವಾದ ಕಾರ್ಯತಂತ್ರ ಅಥವಾ ಕಾರ್ಯವಿಧಾನವನ್ನೇ ಹೊಂದಿರಲಿಲ್ಲ ಎಂದು ಶೇ 50ರಷ್ಟು ಉದ್ದಿಮೆಗಳು ಹೇಳಿವೆ ಎಂದು ‘ಗೇಮ್’ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಬ್ಯಾಂಕ್ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು, ಕ್ಷೇತ್ರ ಅಧಿಕಾರಿಗಳು ಮತ್ತು ಬ್ಯಾಂಕಿಂಗ್ ಪ್ರತಿನಿಧಿಗಳು ಉದ್ದಿಮೆಗಳಲ್ಲಿ ತಿಳಿವಳಿಕೆ ಮೂಡಿಸುವ ತುರ್ತು ಅಗತ್ಯ ಇದೆ ಎಂದು ಗೇಮ್ ಸ್ಥಾಪಕ ರವಿ ವೆಂಕಟೇಶನ್ ಅಭಿಪ್ರಾಪಟ್ಟಿದ್ದಾರೆ.</p>.<p>‘ಆತ್ಮನಿರ್ಭರ ಭಾರತ’ ಕಾರ್ಯಕ್ರಮದಡಿ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಶೇ 31ರಷ್ಟು ಉದ್ದಿಮೆಗಳಿಗೆ ಮಾತ್ರವೇ ಮಾಹಿತಿ ಇದೆ ಎನ್ನುವುದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>