‘ಒಂದು ಕೋಟಿಗೂ ಮಿಕ್ಕಿದ ಗ್ರಾಹಕರು, 8,500ಕ್ಕೂ ಹೆಚ್ಚು ಸಹೋದ್ಯೋಗಿಗಳ ಸಹಕಾರದಿಂದ ಬ್ಯಾಂಕ್ ಉನ್ನತಿ ಸಾಧಿಸುತ್ತಿದೆ. ಜಾಗತಿಕವಾಗಿ ಕೋವಿಡ್–19 ಸಂಕಷ್ಟ ಎದುರಾಗಿದ್ದು, ಬ್ಯಾಂಕ್ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿದೆ. ನಮ್ಮ ಅವಧಿಯಲ್ಲಿ ಉತ್ತಮ ಆಡಳಿತ, ಮೌಲ್ಯ ಸಂವರ್ಧನೆಗೆ ಅವಿರತ ಶ್ರಮಿಸಲಾಗುವುದು’ ಎಂದು ಮಹಾಬಲೇಶ್ವರ ಎಂ.ಎಸ್. ಪ್ರತಿಕ್ರಿಯಿಸಿದ್ದಾರೆ.