<p><strong>ನವದೆಹಲಿ: </strong> ಬಜೆಟ್ ಭಾಷಣದಲ್ಲಿವಿತ್ತ ಸಚಿವೆ ನಿರ್ಮಲಾ ಸೀತಾರಾಮನ್<strong>ಪ್ರಧಾನ್ ಮಂತ್ರಿ ಕರಮ್ ಯೋಗಿ ಮಾನ್ ಧನ್ ಯೋಜನೆ</strong>ಯನ್ನು ಘೋಷಿಸಿದ್ದಾರೆ.ವಾರ್ಷಿಕ ಆದಾಯ ₹1.5 ಕೋಟಿಗಿಂತ ಕಡಿಮೆ ಇರುವ ಚಿಲ್ಲರೆ ವ್ಯಾಪಾರಿ ಮತ್ತು ಅಂಗಡಿ ಮಾಲೀಕರಿಗಾಗಿರುವ ಪಿಂಚಣಿ ಯೋಜನೆ ಇದಾಗಿದೆ. 3 ಕೋಟಿ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.</p>.<p>ಈ ಯೋಜನೆ ಪಡೆಯಲು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ. ಪಿಂಚಣಿಗಾಗಿ ಅರ್ಜಿ ಸಲ್ಲಿಸುವವರು ಪ್ರತೀ ತಿಂಗಳು ಇಂತಿಷ್ಟು ಹಣ ಪಾವತಿ ಮಾಡಬೇಕಾಗಿದ್ದು ಅಷ್ಟೇ ಮೊತ್ತವನ್ನು ಸರ್ಕಾರ ಪಾವತಿ ಮಾಡಲಿದೆ.</p>.<p>ಈ ಹಿಂದೆ ಮಧ್ಯಂತರ ಬಜೆಟ್ನಲ್ಲಿ 'ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಸಮ್ಮಾನ್’ ಯೋಜನೆ ಘೋಷಿಸಲಾಗಿತ್ತು. ಅಸಂಘಟಿತ ಕಾರ್ಮಿಕರಿಗಾಗಿರುವ ಪಿಂಚಣಿ ಯೋಜನೆ ಇದಾಗಿದೆ.ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ <b></b>ಯೋಜನೆಯಂತೆಯೇ ಇರಲಿದೆ<strong>ಪ್ರಧಾನ್ ಮಂತ್ರಿ ಕರಮ್ ಯೋಗಿ ಮಾನ್ ಧನ್ ಯೋಜನೆ.</strong></p>.<p>ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ಯೋಜನೆಯಡಿಯಲ್ಲಿ, 60 ವರ್ಷ ದಾಟಿದವರಿಗೆ ತಿಂಗಳಿಗೆ ₹3,000 ಪಿಂಚಣಿ ನೀಡಲಾಗುತ್ತದೆ.</p>.<p><strong>ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಸಮ್ಮಾನ್ಯೋಜನೆ</strong></p>.<p><strong>* </strong>ನಿಮ್ಮ ತಿಂಗಳ ಆದಾಯ ₹15,000 ಮತ್ತು ಅದಕ್ಕಿಂತ ಕಡಿಮೆ ಆಗಿರಬೇಕು.ನಿಮ್ಮ ವಯಸ್ಸು 18- 40 ಆಗಿದ್ದರೆ ಈ ಯೋಜನೆಯ ಫಲ ಪಡೆಯಲು ಅರ್ಜಿ ಸಲ್ಲಿಸಬಹುದು.</p>.<p><strong>* </strong>ನೀವು ಈಗಾಗಲೇ ಪಿಂಚಣಿ ಯೋಜನೆಗಳಾದ ನ್ಯೂ ಪೆನ್ಶನ್ ಸ್ಕೀಮ್ (ಎನ್ಪಿಎಸ್) . ಇಪಿಎಫ್ಒ, ಇಎಸ್ಐಸಿ ಫಲಾನುಭವಿಗಳಾಗಿದ್ದರೆ ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.</p>.<p><strong>* </strong>ನೀವು ಪ್ರತಿ ತಿಂಗಳು ಇಂತಿಷ್ಟು ಹಣ ಇಲ್ಲಿ ಜಮೆ ಮಾಡಬೇಕಾಗುತ್ತದೆ. ಯೋಜನೆಗೆ ಸೇರುವ ಹೊತ್ತಲ್ಲಿ ನಿಮ್ಮ ವಯಸ್ಸಿಗೆ ಅನುಗುಣವಾಗಿರುತ್ತದೆ ನೀವು ಪಾವತಿ ಮಾಡಬೇಕಾದ ಹಣ. ನೀವು ಪಾವತಿ ಮಾಡುವ ಮೊತ್ತದಷ್ಟೇ ಹಣವನ್ನು ಸರ್ಕಾರ ಕೂಡಾ ಪಾವತಿಸುತ್ತದೆ.</p>.<p><strong>* </strong>ಒಂದು ವೇಳೆ ನೀವು ಹಣ ಪಾವತಿ ಮಾಡುವುದನ್ನು ನಿಲ್ಲಿಸಿದರೆ, ದಂಡವನ್ನೂ ತೆರಬೇಕಾಗುತ್ತದೆ.</p>.<p><strong>* </strong>ಈ ಯೋಜನೆಯಲ್ಲಿ 10 ವರ್ಷಗಳ ಕಾಲ ನೀವು ಹಣ ಪಾವತಿ ಮಾಡಬೇಕಾಗುತ್ತದೆ. 10 ವರ್ಷಕ್ಕಿಂತ ಮುನ್ನ ನೀವು ಯೋಜನೆಯಿಂದ ಹೊರಬರುವುದಾದರೆ ನೀವು ಪಾವತಿ ಮಾಡಿದ ಹಣದ ಜತೆಗೆ ಉಳಿತಾಯ ಧನಕ್ಕಾಗಿ ಬ್ಯಾಂಕ್ಗಳು ನೀಡುತ್ತಿರುವ ಬಡ್ಡಿದರದಲ್ಲಿ ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ.</p>.<p><strong>* </strong>10 ವರ್ಷಗಳ ನಂತರ ಮತ್ತು ನಿವೃತ್ತಿ ವಯಸ್ಸಿಗೆ ಮುನ್ನವೇ ನೀವು ಯೋಜನೆಯನ್ನು ತೊರೆಯುವುದಾದರೆ ನಿಮ್ಮ ಹಣದ ಜತೆಗೆ ಬ್ಯಾಂಕ್ಗಳು ಉಳಿತಾಯ ಖಾತೆಗೆ ನೀಡುವ ಬಡ್ಡಿದರಗಳಲ್ಲಿ ಅತೀ ಹೆಚ್ಚು, ಬಡ್ಡಿದರವನ್ನು ಸೇರಿಸಿಮೊತ್ತ ನಿಮಗೆ ಸಿಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong> ಬಜೆಟ್ ಭಾಷಣದಲ್ಲಿವಿತ್ತ ಸಚಿವೆ ನಿರ್ಮಲಾ ಸೀತಾರಾಮನ್<strong>ಪ್ರಧಾನ್ ಮಂತ್ರಿ ಕರಮ್ ಯೋಗಿ ಮಾನ್ ಧನ್ ಯೋಜನೆ</strong>ಯನ್ನು ಘೋಷಿಸಿದ್ದಾರೆ.ವಾರ್ಷಿಕ ಆದಾಯ ₹1.5 ಕೋಟಿಗಿಂತ ಕಡಿಮೆ ಇರುವ ಚಿಲ್ಲರೆ ವ್ಯಾಪಾರಿ ಮತ್ತು ಅಂಗಡಿ ಮಾಲೀಕರಿಗಾಗಿರುವ ಪಿಂಚಣಿ ಯೋಜನೆ ಇದಾಗಿದೆ. 3 ಕೋಟಿ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.</p>.<p>ಈ ಯೋಜನೆ ಪಡೆಯಲು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿರುವುದು ಕಡ್ಡಾಯ. ಪಿಂಚಣಿಗಾಗಿ ಅರ್ಜಿ ಸಲ್ಲಿಸುವವರು ಪ್ರತೀ ತಿಂಗಳು ಇಂತಿಷ್ಟು ಹಣ ಪಾವತಿ ಮಾಡಬೇಕಾಗಿದ್ದು ಅಷ್ಟೇ ಮೊತ್ತವನ್ನು ಸರ್ಕಾರ ಪಾವತಿ ಮಾಡಲಿದೆ.</p>.<p>ಈ ಹಿಂದೆ ಮಧ್ಯಂತರ ಬಜೆಟ್ನಲ್ಲಿ 'ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಸಮ್ಮಾನ್’ ಯೋಜನೆ ಘೋಷಿಸಲಾಗಿತ್ತು. ಅಸಂಘಟಿತ ಕಾರ್ಮಿಕರಿಗಾಗಿರುವ ಪಿಂಚಣಿ ಯೋಜನೆ ಇದಾಗಿದೆ.ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ <b></b>ಯೋಜನೆಯಂತೆಯೇ ಇರಲಿದೆ<strong>ಪ್ರಧಾನ್ ಮಂತ್ರಿ ಕರಮ್ ಯೋಗಿ ಮಾನ್ ಧನ್ ಯೋಜನೆ.</strong></p>.<p>ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ಯೋಜನೆಯಡಿಯಲ್ಲಿ, 60 ವರ್ಷ ದಾಟಿದವರಿಗೆ ತಿಂಗಳಿಗೆ ₹3,000 ಪಿಂಚಣಿ ನೀಡಲಾಗುತ್ತದೆ.</p>.<p><strong>ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಸಮ್ಮಾನ್ಯೋಜನೆ</strong></p>.<p><strong>* </strong>ನಿಮ್ಮ ತಿಂಗಳ ಆದಾಯ ₹15,000 ಮತ್ತು ಅದಕ್ಕಿಂತ ಕಡಿಮೆ ಆಗಿರಬೇಕು.ನಿಮ್ಮ ವಯಸ್ಸು 18- 40 ಆಗಿದ್ದರೆ ಈ ಯೋಜನೆಯ ಫಲ ಪಡೆಯಲು ಅರ್ಜಿ ಸಲ್ಲಿಸಬಹುದು.</p>.<p><strong>* </strong>ನೀವು ಈಗಾಗಲೇ ಪಿಂಚಣಿ ಯೋಜನೆಗಳಾದ ನ್ಯೂ ಪೆನ್ಶನ್ ಸ್ಕೀಮ್ (ಎನ್ಪಿಎಸ್) . ಇಪಿಎಫ್ಒ, ಇಎಸ್ಐಸಿ ಫಲಾನುಭವಿಗಳಾಗಿದ್ದರೆ ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.</p>.<p><strong>* </strong>ನೀವು ಪ್ರತಿ ತಿಂಗಳು ಇಂತಿಷ್ಟು ಹಣ ಇಲ್ಲಿ ಜಮೆ ಮಾಡಬೇಕಾಗುತ್ತದೆ. ಯೋಜನೆಗೆ ಸೇರುವ ಹೊತ್ತಲ್ಲಿ ನಿಮ್ಮ ವಯಸ್ಸಿಗೆ ಅನುಗುಣವಾಗಿರುತ್ತದೆ ನೀವು ಪಾವತಿ ಮಾಡಬೇಕಾದ ಹಣ. ನೀವು ಪಾವತಿ ಮಾಡುವ ಮೊತ್ತದಷ್ಟೇ ಹಣವನ್ನು ಸರ್ಕಾರ ಕೂಡಾ ಪಾವತಿಸುತ್ತದೆ.</p>.<p><strong>* </strong>ಒಂದು ವೇಳೆ ನೀವು ಹಣ ಪಾವತಿ ಮಾಡುವುದನ್ನು ನಿಲ್ಲಿಸಿದರೆ, ದಂಡವನ್ನೂ ತೆರಬೇಕಾಗುತ್ತದೆ.</p>.<p><strong>* </strong>ಈ ಯೋಜನೆಯಲ್ಲಿ 10 ವರ್ಷಗಳ ಕಾಲ ನೀವು ಹಣ ಪಾವತಿ ಮಾಡಬೇಕಾಗುತ್ತದೆ. 10 ವರ್ಷಕ್ಕಿಂತ ಮುನ್ನ ನೀವು ಯೋಜನೆಯಿಂದ ಹೊರಬರುವುದಾದರೆ ನೀವು ಪಾವತಿ ಮಾಡಿದ ಹಣದ ಜತೆಗೆ ಉಳಿತಾಯ ಧನಕ್ಕಾಗಿ ಬ್ಯಾಂಕ್ಗಳು ನೀಡುತ್ತಿರುವ ಬಡ್ಡಿದರದಲ್ಲಿ ನಿಮ್ಮ ಹಣಕ್ಕೆ ಬಡ್ಡಿ ಸಿಗುತ್ತದೆ.</p>.<p><strong>* </strong>10 ವರ್ಷಗಳ ನಂತರ ಮತ್ತು ನಿವೃತ್ತಿ ವಯಸ್ಸಿಗೆ ಮುನ್ನವೇ ನೀವು ಯೋಜನೆಯನ್ನು ತೊರೆಯುವುದಾದರೆ ನಿಮ್ಮ ಹಣದ ಜತೆಗೆ ಬ್ಯಾಂಕ್ಗಳು ಉಳಿತಾಯ ಖಾತೆಗೆ ನೀಡುವ ಬಡ್ಡಿದರಗಳಲ್ಲಿ ಅತೀ ಹೆಚ್ಚು, ಬಡ್ಡಿದರವನ್ನು ಸೇರಿಸಿಮೊತ್ತ ನಿಮಗೆ ಸಿಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>