<p><strong>ನವದೆಹಲಿ:</strong> ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ದತ್ತಾಂಶ ಕೇಂದ್ರವನ್ನು ಒಡಿಶಾದಲ್ಲಿ ನಿರ್ಮಾಣ ಮಾಡಿದೆ. ಇದು ಭೂಕಂಪನಕ್ಕೆ ಹೆಚ್ಚು ತುತ್ತಾಗಬಹುದಾದ ವಲಯಗಳಿಂದ ಹಾಗೂ ಗಡಿಯಾಚೆಯಿಂದ ಅಪಾಯ ಎದುರಾಗಬಹುದಾದ ಪ್ರದೇಶಗಳಿಂದ ದೂರದಲ್ಲಿ ಇದೆ.</p>.<p>ಮಹತ್ವದ ಹಣಕಾಸು ಮೂಲಸೌಕರ್ಯವನ್ನು ಅಪಾಯಗಳಿಂದ ರಕ್ಷಿಸುವ ಉದ್ದೇಶದಿಂದ ಆರ್ಬಿಐ ದತ್ತಾಂಶ ಕೇಂದ್ರವನ್ನು ಇಲ್ಲಿ ನಿರ್ಮಿಸಿದೆ.</p>.<p>ಭುವನೇಶ್ವರದಲ್ಲಿ ಇರುವ ಇದು ಆರ್ಬಿಐನ ಕರೆನ್ಸಿ ನಿರ್ವಹಣೆಗೆ, ಪಾವತಿ ಪ್ರಕ್ರಿಯೆಗಳನ್ನು ಬೆಂಬಲಿಸುವ ವ್ಯವಸ್ಥೆಗಳನ್ನು ತನ್ನಲ್ಲಿ ಇರಿಸಿಕೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ.</p>.<p>ಒಡಿಶಾದಲ್ಲಿನ ಈ ಕೇಂದ್ರವು ಭಾರತದ ಪಶ್ಚಿಮ ಹಾಗೂ ಉತ್ತರದ ಗಡಿ ಪ್ರದೇಶಗಳಿಂದ ಬಹುದೂರದಲ್ಲಿ ಇದೆ. ಇದರಿಂದಾಗಿ ಗಡಿಯಾಚೆಯಿಂದ ಎದುರಾಗಬಹುದಾದ ಕ್ಷಿಪಣಿ ಅಥವಾ ಡ್ರೋನ್ ದಾಳಿಯ ಸಾಧ್ಯತೆ ಕಡಿಮೆ ಎಂದು ತಜ್ಞರೊಬ್ಬರು ತಿಳಿಸಿದರು.</p>.<p class="bodytext">ಆರ್ಬಿಐನ ಪ್ರಮುಖ ದತ್ತಾಂಶ ಕೇಂದ್ರವು ನವಿ ಮುಂಬೈನ ಖಾರ್ಗರ್ನಲ್ಲಿದೆ. ಒಡಿಶಾದಲ್ಲಿ ಇರುವುದು ಎರಡನೆಯ ದತ್ತಾಂಶ ಕೇಂದ್ರ.</p>.<p class="bodytext">ಒಡಿಶಾದಲ್ಲಿ ಹೆಚ್ಚಿನ ಪ್ರಮಾಣದ ಡಿಜಿಟಲ್ ದಟ್ಟಣೆ ಇಲ್ಲ. ಹೀಗಾಗಿ ಇಲ್ಲಿ ದತ್ತಾಂಶ ಕೇಂದ್ರವನ್ನು ನಿರ್ಮಿಸುವ ಮೂಲಕ ಆರ್ಬಿಐ ಸೈಬರ್ ಸಮಸ್ಯೆಗಳು ಎದುರಾಗುವ ಅಪಾಯವನ್ನು ತಗ್ಗಿಸಲು ಯತ್ನಿಸುತ್ತಿರಬಹುದು ಎಂದು ಇನ್ನೊಬ್ಬರು ತಜ್ಞರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ದತ್ತಾಂಶ ಕೇಂದ್ರವನ್ನು ಒಡಿಶಾದಲ್ಲಿ ನಿರ್ಮಾಣ ಮಾಡಿದೆ. ಇದು ಭೂಕಂಪನಕ್ಕೆ ಹೆಚ್ಚು ತುತ್ತಾಗಬಹುದಾದ ವಲಯಗಳಿಂದ ಹಾಗೂ ಗಡಿಯಾಚೆಯಿಂದ ಅಪಾಯ ಎದುರಾಗಬಹುದಾದ ಪ್ರದೇಶಗಳಿಂದ ದೂರದಲ್ಲಿ ಇದೆ.</p>.<p>ಮಹತ್ವದ ಹಣಕಾಸು ಮೂಲಸೌಕರ್ಯವನ್ನು ಅಪಾಯಗಳಿಂದ ರಕ್ಷಿಸುವ ಉದ್ದೇಶದಿಂದ ಆರ್ಬಿಐ ದತ್ತಾಂಶ ಕೇಂದ್ರವನ್ನು ಇಲ್ಲಿ ನಿರ್ಮಿಸಿದೆ.</p>.<p>ಭುವನೇಶ್ವರದಲ್ಲಿ ಇರುವ ಇದು ಆರ್ಬಿಐನ ಕರೆನ್ಸಿ ನಿರ್ವಹಣೆಗೆ, ಪಾವತಿ ಪ್ರಕ್ರಿಯೆಗಳನ್ನು ಬೆಂಬಲಿಸುವ ವ್ಯವಸ್ಥೆಗಳನ್ನು ತನ್ನಲ್ಲಿ ಇರಿಸಿಕೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ.</p>.<p>ಒಡಿಶಾದಲ್ಲಿನ ಈ ಕೇಂದ್ರವು ಭಾರತದ ಪಶ್ಚಿಮ ಹಾಗೂ ಉತ್ತರದ ಗಡಿ ಪ್ರದೇಶಗಳಿಂದ ಬಹುದೂರದಲ್ಲಿ ಇದೆ. ಇದರಿಂದಾಗಿ ಗಡಿಯಾಚೆಯಿಂದ ಎದುರಾಗಬಹುದಾದ ಕ್ಷಿಪಣಿ ಅಥವಾ ಡ್ರೋನ್ ದಾಳಿಯ ಸಾಧ್ಯತೆ ಕಡಿಮೆ ಎಂದು ತಜ್ಞರೊಬ್ಬರು ತಿಳಿಸಿದರು.</p>.<p class="bodytext">ಆರ್ಬಿಐನ ಪ್ರಮುಖ ದತ್ತಾಂಶ ಕೇಂದ್ರವು ನವಿ ಮುಂಬೈನ ಖಾರ್ಗರ್ನಲ್ಲಿದೆ. ಒಡಿಶಾದಲ್ಲಿ ಇರುವುದು ಎರಡನೆಯ ದತ್ತಾಂಶ ಕೇಂದ್ರ.</p>.<p class="bodytext">ಒಡಿಶಾದಲ್ಲಿ ಹೆಚ್ಚಿನ ಪ್ರಮಾಣದ ಡಿಜಿಟಲ್ ದಟ್ಟಣೆ ಇಲ್ಲ. ಹೀಗಾಗಿ ಇಲ್ಲಿ ದತ್ತಾಂಶ ಕೇಂದ್ರವನ್ನು ನಿರ್ಮಿಸುವ ಮೂಲಕ ಆರ್ಬಿಐ ಸೈಬರ್ ಸಮಸ್ಯೆಗಳು ಎದುರಾಗುವ ಅಪಾಯವನ್ನು ತಗ್ಗಿಸಲು ಯತ್ನಿಸುತ್ತಿರಬಹುದು ಎಂದು ಇನ್ನೊಬ್ಬರು ತಜ್ಞರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>