<p><strong>ಬೆಂಗಳೂರು:</strong> ಆರಂಭಿಕ ಆಟಗಾರ ಆಯುಷ್ ಜೇಥ್ವಾ (ಔಟಾಗದೇ 139;316ಎ) ಅವರ ಅಜೇಯ ಶತಕದ ಬಲದಿಂದ ಆತಿಥೇಯ ಮುಂಬೈ ತಂಡವು ಭಾನುವಾರ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕದ ವಿರುದ್ಧ ಬಿಗಿಹಿಡಿತ ಸಾಧಿಸಿದೆ.</p>.<p>ಮುಂಬೈನ ಜಿಮ್ಖಾನಾದ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 240 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ 97 ಓವರ್ಗಳಲ್ಲಿ 1 ವಿಕೆಟ್ಗೆ 310 ರನ್ ಗಳಿಸಿ, 70 ರನ್ಗಳ ಮುನ್ನಡೆ ಸಾಧಿಸಿದೆ. </p>.<p>ವಿಕೆಟ್ ನಷ್ಟವಿಲ್ಲದೆ 12 ರನ್ಗಳೊಂದಿಗೆ ದಿನದಾಟವನ್ನು ಆರಂಭಿಸಿದ ಮುಂಬೈ ತಂಡದ ಅಂಗ್ಕ್ರಿಶ್ ರಘುವಂಶಿ (92;117ಎ, 4X11, 6X1) ಮತ್ತು ಆಯುಷ್ ಅವರು ಮೊದಲ ವಿಕೆಟ್ಗೆ 200 ರನ್ ಸೇರಿಸಿದರು. ಈ ಜೋಡಿಯು ಕರ್ನಾಟಕದ ಬೌಲರ್ಗಳನ್ನು ದಂಡಿಸಿತು. ಆಯುಷ್ ಇನಿಂಗ್ಸ್ನಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. </p>.<p>ಶತಕದ ಹೊಸ್ತಿಲಲ್ಲಿದ್ದ ರಘುವಂಶಿ ಅವರು ಕೆ.ಪಿ. ಕಾರ್ತಿಕೇಯ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮನನ್ ಭಟ್ (ಔಟಾಗದೇ 64;92ಎ, 4X8, 6X1) ಅವರು ಆಯುಷ್ಗೆ ಜೊತೆಯಾದರು. ಈ ಜೋಡಿ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 110 ರನ್ ಸೇರಿಸಿತು. ಇನಿಂಗ್ಸ್ ಚುಕ್ತಾ ಮಾಡಿರುವ ಮುಂಬೈ ತಂಡವು ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ದಿನವಿಡೀ ಬೆವರು ಹರಿಸಿದ ಕರ್ನಾಟಕದ ಬೌಲರ್ಗಳು ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತವಾದರು. </p>.<h2>ಸಂಕ್ಷಿಪ್ತ ಸ್ಕೋರು: </h2><p>ಕರ್ನಾಟಕ: 78.5 ಓವರ್ಗಳಲ್ಲಿ 240. ಮುಂಬೈ: 97 ಓವರ್ಗಳಲ್ಲಿ 1 ವಿಕೆಟ್ಗೆ 310 (ಅಂಗ್ಕ್ರಿಶ್ ರಘುವಂಶಿ 92, ಆಯುಷ್ ಜೇಥ್ವಾ ಔಟಾಗದೇ 139, ಮನನ್ ಭಟ್ ಔಟಾಗದೇ 64; ಕೆ.ಪಿ. ಕಾರ್ತಿಕೇಯ 42ಕ್ಕೆ 1). </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆರಂಭಿಕ ಆಟಗಾರ ಆಯುಷ್ ಜೇಥ್ವಾ (ಔಟಾಗದೇ 139;316ಎ) ಅವರ ಅಜೇಯ ಶತಕದ ಬಲದಿಂದ ಆತಿಥೇಯ ಮುಂಬೈ ತಂಡವು ಭಾನುವಾರ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕದ ವಿರುದ್ಧ ಬಿಗಿಹಿಡಿತ ಸಾಧಿಸಿದೆ.</p>.<p>ಮುಂಬೈನ ಜಿಮ್ಖಾನಾದ ಸಚಿನ್ ತೆಂಡೂಲ್ಕರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 240 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ 97 ಓವರ್ಗಳಲ್ಲಿ 1 ವಿಕೆಟ್ಗೆ 310 ರನ್ ಗಳಿಸಿ, 70 ರನ್ಗಳ ಮುನ್ನಡೆ ಸಾಧಿಸಿದೆ. </p>.<p>ವಿಕೆಟ್ ನಷ್ಟವಿಲ್ಲದೆ 12 ರನ್ಗಳೊಂದಿಗೆ ದಿನದಾಟವನ್ನು ಆರಂಭಿಸಿದ ಮುಂಬೈ ತಂಡದ ಅಂಗ್ಕ್ರಿಶ್ ರಘುವಂಶಿ (92;117ಎ, 4X11, 6X1) ಮತ್ತು ಆಯುಷ್ ಅವರು ಮೊದಲ ವಿಕೆಟ್ಗೆ 200 ರನ್ ಸೇರಿಸಿದರು. ಈ ಜೋಡಿಯು ಕರ್ನಾಟಕದ ಬೌಲರ್ಗಳನ್ನು ದಂಡಿಸಿತು. ಆಯುಷ್ ಇನಿಂಗ್ಸ್ನಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದ್ದವು. </p>.<p>ಶತಕದ ಹೊಸ್ತಿಲಲ್ಲಿದ್ದ ರಘುವಂಶಿ ಅವರು ಕೆ.ಪಿ. ಕಾರ್ತಿಕೇಯ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮನನ್ ಭಟ್ (ಔಟಾಗದೇ 64;92ಎ, 4X8, 6X1) ಅವರು ಆಯುಷ್ಗೆ ಜೊತೆಯಾದರು. ಈ ಜೋಡಿ ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 110 ರನ್ ಸೇರಿಸಿತು. ಇನಿಂಗ್ಸ್ ಚುಕ್ತಾ ಮಾಡಿರುವ ಮುಂಬೈ ತಂಡವು ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ದಿನವಿಡೀ ಬೆವರು ಹರಿಸಿದ ಕರ್ನಾಟಕದ ಬೌಲರ್ಗಳು ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತವಾದರು. </p>.<h2>ಸಂಕ್ಷಿಪ್ತ ಸ್ಕೋರು: </h2><p>ಕರ್ನಾಟಕ: 78.5 ಓವರ್ಗಳಲ್ಲಿ 240. ಮುಂಬೈ: 97 ಓವರ್ಗಳಲ್ಲಿ 1 ವಿಕೆಟ್ಗೆ 310 (ಅಂಗ್ಕ್ರಿಶ್ ರಘುವಂಶಿ 92, ಆಯುಷ್ ಜೇಥ್ವಾ ಔಟಾಗದೇ 139, ಮನನ್ ಭಟ್ ಔಟಾಗದೇ 64; ಕೆ.ಪಿ. ಕಾರ್ತಿಕೇಯ 42ಕ್ಕೆ 1). </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>