<p><strong>ಮುಂಬೈ: </strong>ಗೃಹ, ವಾಹನ, ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಸಾಲಕ್ಕೆ ನಗದು ಮೀಸಲು ಅನುಪಾತದಲ್ಲಿ (ಸಿಆರ್ಆರ್) ನೀಡಿರುವ ವಿನಾಯ್ತಿ ಸೌಲಭ್ಯವನ್ನು 5 ವರ್ಷಗಳವರೆಗೆ ಬಳಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ.</p>.<p>‘ಸಿಆರ್ಆರ್’ ವಿನಾಯ್ತಿ ವಿಸ್ತರಣೆಯಿಂದಬ್ಯಾಂಕ್ಗಳು, ಆರ್ಬಿಐ ಕೈಗೊಳ್ಳುವ ರೆಪೊ ಬಡ್ಡಿ ದರ ಕಡಿತದ ನಿರ್ಧಾರವನ್ನು ಗ್ರಾಹಕರಿಗೆ ವರ್ಗಾಯಿಸುವುದು ಸುಲಭವಾಗಲಿದೆ.</p>.<p>ಸಾಲಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಲು ಆರ್ಬಿಐ ನಿಯಂತ್ರಣ ಕ್ರಮಗಳನ್ನು ಸಡಿಲಿಸಿದೆ. ಬ್ಯಾಂಕ್ಗಳಿಗೆ ದೀರ್ಘಾವಧಿ ನಿಧಿ ನೆರವು ರೂಪದಲ್ಲಿ ಶೇ 5.15ರ ರಿಯಾಯ್ತಿ ಬಡ್ಡಿ ದರದಲ್ಲಿ ₹ 1 ಲಕ್ಷ ಕೋಟಿ ವಿತರಿಸಲಿದೆ. ಇದರಿಂದ ಬ್ಯಾಂಕ್ಗಳೂ ತಮ್ಮ ಬಡ್ಡಿ ದರ ಕಡಿತಗೊಳಿಸಲು ಸಾಧ್ಯವಾಗಲಿದೆ. ಸಾಲಗಾರರ ಮಾಸಿಕ ಸಮಾನ ಕಂತಿನ (ಇಎಂಐ) ಪ್ರಮಾಣವೂ ಕಡಿಮೆಯಾಗಲಿದೆ.</p>.<p>ಸದ್ಯಕ್ಕೆ ಶಾಸನಬದ್ಧ ನಗದು ಮೀಸಲು ಅನುಪಾತದ ಅನ್ವಯ, ಬ್ಯಾಂಕ್ಗಳು ತಾವು ಗಳಿಸಿದ ಪ್ರತಿ ₹ 100ಗೆ ₹ 4ರಂತೆ ಆರ್ಬಿಐನಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್ಬಿಐ ಈ ನಿಯಮ ಸಡಿಲಿಸಿದೆ.</p>.<p>ಉತ್ಪಾದನಾ ವಲಯಕ್ಕೆ ಬ್ಯಾಂಕ್ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ‘ಸಿಆರ್ಆರ್’ ವಿನಾಯ್ತಿ ಘೋಷಿಸಿದೆ. ಈ ವಲಯಕ್ಕೆ ನೀಡುವ ಸಾಲಕ್ಕೆ ಪ್ರತಿಯಾಗಿ ಬ್ಯಾಂಕ್ಗಳು ಹೆಚ್ಚುವರಿ ‘ಸಿಆರ್ಆರ್’ ನಿರ್ವಹಿಸುವ ಅಗತ್ಯ ಇರುವುದಿಲ್ಲ. ಗೃಹ, ವಾಹನ ಖರೀದಿ ಮತ್ತು ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವುದರಿಂದ ಆರ್ಥಿಕ ಬೆಳವಣಿಗೆ ಮೇಲೆ ಬಹುಬಗೆಯ ಪರಿಣಾಮ ಕಂಡು ಬರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಗೃಹ, ವಾಹನ, ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್ಎಂಇ) ಸಾಲಕ್ಕೆ ನಗದು ಮೀಸಲು ಅನುಪಾತದಲ್ಲಿ (ಸಿಆರ್ಆರ್) ನೀಡಿರುವ ವಿನಾಯ್ತಿ ಸೌಲಭ್ಯವನ್ನು 5 ವರ್ಷಗಳವರೆಗೆ ಬಳಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ.</p>.<p>‘ಸಿಆರ್ಆರ್’ ವಿನಾಯ್ತಿ ವಿಸ್ತರಣೆಯಿಂದಬ್ಯಾಂಕ್ಗಳು, ಆರ್ಬಿಐ ಕೈಗೊಳ್ಳುವ ರೆಪೊ ಬಡ್ಡಿ ದರ ಕಡಿತದ ನಿರ್ಧಾರವನ್ನು ಗ್ರಾಹಕರಿಗೆ ವರ್ಗಾಯಿಸುವುದು ಸುಲಭವಾಗಲಿದೆ.</p>.<p>ಸಾಲಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸಲು ಆರ್ಬಿಐ ನಿಯಂತ್ರಣ ಕ್ರಮಗಳನ್ನು ಸಡಿಲಿಸಿದೆ. ಬ್ಯಾಂಕ್ಗಳಿಗೆ ದೀರ್ಘಾವಧಿ ನಿಧಿ ನೆರವು ರೂಪದಲ್ಲಿ ಶೇ 5.15ರ ರಿಯಾಯ್ತಿ ಬಡ್ಡಿ ದರದಲ್ಲಿ ₹ 1 ಲಕ್ಷ ಕೋಟಿ ವಿತರಿಸಲಿದೆ. ಇದರಿಂದ ಬ್ಯಾಂಕ್ಗಳೂ ತಮ್ಮ ಬಡ್ಡಿ ದರ ಕಡಿತಗೊಳಿಸಲು ಸಾಧ್ಯವಾಗಲಿದೆ. ಸಾಲಗಾರರ ಮಾಸಿಕ ಸಮಾನ ಕಂತಿನ (ಇಎಂಐ) ಪ್ರಮಾಣವೂ ಕಡಿಮೆಯಾಗಲಿದೆ.</p>.<p>ಸದ್ಯಕ್ಕೆ ಶಾಸನಬದ್ಧ ನಗದು ಮೀಸಲು ಅನುಪಾತದ ಅನ್ವಯ, ಬ್ಯಾಂಕ್ಗಳು ತಾವು ಗಳಿಸಿದ ಪ್ರತಿ ₹ 100ಗೆ ₹ 4ರಂತೆ ಆರ್ಬಿಐನಲ್ಲಿ ಠೇವಣಿ ಇರಿಸಬೇಕಾಗುತ್ತದೆ. ಇತ್ತೀಚಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್ಬಿಐ ಈ ನಿಯಮ ಸಡಿಲಿಸಿದೆ.</p>.<p>ಉತ್ಪಾದನಾ ವಲಯಕ್ಕೆ ಬ್ಯಾಂಕ್ ಸಾಲ ನೀಡಿಕೆ ಪ್ರಮಾಣ ಹೆಚ್ಚಿಸಲು ‘ಸಿಆರ್ಆರ್’ ವಿನಾಯ್ತಿ ಘೋಷಿಸಿದೆ. ಈ ವಲಯಕ್ಕೆ ನೀಡುವ ಸಾಲಕ್ಕೆ ಪ್ರತಿಯಾಗಿ ಬ್ಯಾಂಕ್ಗಳು ಹೆಚ್ಚುವರಿ ‘ಸಿಆರ್ಆರ್’ ನಿರ್ವಹಿಸುವ ಅಗತ್ಯ ಇರುವುದಿಲ್ಲ. ಗೃಹ, ವಾಹನ ಖರೀದಿ ಮತ್ತು ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವುದರಿಂದ ಆರ್ಥಿಕ ಬೆಳವಣಿಗೆ ಮೇಲೆ ಬಹುಬಗೆಯ ಪರಿಣಾಮ ಕಂಡು ಬರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>