‘ಸಾಲದ ಮೇಲೆ ಕಣ್ಣಿಡಿ’: ಮರುಪಾವತಿ ಆಗುತ್ತಿಲ್ಲದ ಸಾಲದ ಮೇಲೆ ಒಂದು ಕಣ್ಣು ಇಡುವಂತೆ, ಎನ್ಪಿಎ ಆಗಬಹುದಾದ ಸಾಲಗಳಿಗಾಗಿ ಅಗತ್ಯ ಪ್ರಮಾಣದಲ್ಲಿ ಬಂಡವಾಳ ಮೀಸಲಿಡುವಂತೆ ಆರ್ಬಿಐ, ಬ್ಯಾಂಕ್ಗಳಿಗೆ ಸೂಚನೆ ನೀಡಿದೆ. ಆದರೆ, ಬ್ಯಾಂಕ್ಗಳ ಬಳಿ ಹೆಚ್ಚು ಬಂಡವಾಳ ಇರುವುದರಿಂದ, ಸಾಲದ ವಸೂಲಿ ಸುಧಾರಿಸುತ್ತಿರುವುದರಿಂದ ಹಾಗೂ ಬ್ಯಾಂಕ್ಗಳು ಲಾಭದ ಹಳಿಗೆ ಮರಳಿರುವುದರಿಂದ ಹಣಕಾಸಿನ ಒತ್ತಡಗಳನ್ನು ಉತ್ತಮವಾಗಿ ನಿಭಾಯಿಸುವ ಸ್ಥಿತಿಯಲ್ಲಿ ಅವು ಇವೆ ಎಂದು ಆರ್ಬಿಐ ವಿಶ್ವಾಸ ವ್ಯಕ್ತಪಡಿಸಿದೆ.