<p><strong>ನವದೆಹಲಿ</strong>: ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆಯು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್ಎಂಎ) ಮಾಹಿತಿ ನೀಡಿದೆ.</p>.<p>ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಬ್ಬು ಇಳುವರಿ ಕಡಿಮೆ ಆಗುವ ಸಾಧ್ಯತೆ ಇದೆ. ಅಲ್ಲದೆ,ಇಥೆನಾಲ್ ತಯಾರಿಕೆಗೆ ಕಬ್ಬನ್ನು ಬಳಸುವುದರಿಂದ ಒಟ್ಟಾರೆ ಸಕ್ಕರೆ ಉತ್ಪಾದನೆ 3.31 ಕೋಟಿ ಟನ್ಗಳಿಂದ2.6 ಕೋಟಿ ಟನ್ಗಳಿಗೆಶೇ 21.5ರಷ್ಟು ಕಡಿಮೆಯಾಗುವ ಅಂದಾಜು ಮಾಡಲಾಗಿದೆ.</p>.<p>ಒಟ್ಟಾರೆ ಸಕ್ಕರೆ ಉತ್ಪಾದನೆಯಲ್ಲಿ ಈ ಎರಡೂ ರಾಜ್ಯಗಳ ಕೊಡುಗೆ ಶೇ 35 ರಿಂದ ಶೇ 40ರಷ್ಟಿದೆ. ಆದರೆ,ಮಳೆ, ಪ್ರವಾಹವನ್ನೂ ಒಳಗೊಂಡು ಹಲವು ಕಾರಣಗಳಿಂದ ಬೆಳೆ ಹಾನಿ ಸಂಭವಿಸಿದೆ.</p>.<p>ಮಹಾರಾಷ್ಟ್ರದಲ್ಲಿ ಉತ್ಪಾದನೆ 1.07 ಕೋಟಿ ಟನ್ಗಳಿಂದ 62 ಲಕ್ಷ ಟನ್ಗಳಿಗೆ ಶೇ 40ರಷ್ಟು ಇಳಿಕೆಯಾಗಲಿದೆ.ಕರ್ನಾಟಕದಲ್ಲಿ ಉತ್ಪಾದನೆ 44 ಲಕ್ಷದಿಂದ 32 ಲಕ್ಷಕ್ಕೆ ಇಳಿಕೆಯಾಗಲಿದೆ ಎಂದೂ ಹೇಳಿದೆ.</p>.<p>ಕಾರ್ಖಾನೆಗಳು ಶೀಘ್ರವೇ ಕಬ್ಬು ಅರೆಯುವಿಕೆ ಆರಂಭಸಲಿವೆ. ಆ ಬಳಿಕ ಉತ್ಪಾದನೆಯ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಸಂಘ ಹೇಳಿದೆ.</p>.<p>ವಾಡಿಕೆಯಂತೆ ಮಳೆಯಾಗಿಲ್ಲ. ಹೀಗಾಗಿ ಮೊದಲು ಬಿಡುಗಡೆ ಮಾಡಿದ್ದ ಅಂದಾಜಿನಂತೆ ಉತ್ಪಾದನೆ ಆಗುವುದಿಲ್ಲ ಎಂದಿದೆ.</p>.<p>2018ರಲ್ಲಿ ಕಡಿಮೆ ಮಳೆ ಮತ್ತು 2019ರ ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕರ್ನಾಟಕದಲ್ಲಿ ಇಳುವರಿ ಮೇಲೆ ಹೊಡೆತ ಬಿದ್ದಿದೆ. ಅತಿಯಾದ ಮಳೆಯಿಂದ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ತಿಳಿಸಿದೆ.</p>.<p class="Subhead"><strong>ವಿಳಂಬ:ಅ</strong>ತಿಯಾದ ಮಳೆ ಮತ್ತು ಕಬ್ಬಿನ ಕೊರತೆಯಿಂದಾಗಿಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವಿಕೆಯು ಒಂದು ತಿಂಗಳು ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇದರಿಂದಲೂ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ.</p>.<p><strong>ಇಥೆನಾಲ್: ಪರಿಸರ ಅನುಮತಿ ಬೇಕಿಲ್ಲ</strong><br />ಹೆಚ್ಚುವರಿ ಸಕ್ಕರೆಯಿಂದ ಇಥೆನಾಲ್ ತಯಾರಿಸಲು ಪರಿಸರ ಇಲಾಖೆಯ ಅನುಮತಿ ಬೇಕಿಲ್ಲ. ಏಕೆಂದರೆ ಅದರಿಂದ ಮಾಲಿನ್ಯ ಉಂಟಾಗುವುದಿಲ್ಲ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ಇದರಿಂದ ರೈತರು ಮತ್ತು ನಗದು ಬಿಕ್ಕಟ್ಟು ಎದುರಿಸುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲ ಆಗಲಿದೆ.</p>.<p>ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲು ಮತ್ತು ಹೆಚ್ಚುವರಿ ಸಕ್ಕರೆಯನ್ನು ಇಥೆನಾಲ್ ತಯಾರಿಕೆಗೆ ಬಳಸಲು ಅನುಕೂಲ ಆಗುವಂತೆ, ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಯೋಜನೆ ಘೋಷಿಸಿದೆ. ಆದರೆ, ₹ 15 ಸಾವಿರ ಕೋಟಿ ಮೊತ್ತದ ಸಾಲ ಯೋಜನೆಯು ಕುಂಟುತ್ತಾ ಸಾಗುತ್ತಿದೆ ಎಂದು ಆಹಾರ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಯೋಜನೆಯಡಿ ಬ್ಯಾಂಕ್ಗಳು ಇದುವರೆಗೆ ಕೇವಲ ₹ 800 ಕೋಟಿಯನ್ನು ಮಾತ್ರ ವಿತರಣೆ ಮಾಡಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<p>ಸದ್ಯ 3 ಲಕ್ಷದಿಂದ 4 ಲಕ್ಷ ಟನ್ಗಳಷ್ಟು ಸಕ್ಕರೆಯನ್ನು ಇಥೆನಾಲ್ಗೆ ಬಳಸಲಾಗುತ್ತಿದೆ. ಯೋಜನೆಯಡಿ 9 ಲಕ್ಷದಿಂದ 10 ಲಕ್ಷ ಟನ್ಗಳಷ್ಟು ಬಳಕೆಯಾಗುವ ನಿರೀಕ್ಷೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ ಸಕ್ಕರೆ ಉತ್ಪಾದನೆಯು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘ (ಐಎಸ್ಎಂಎ) ಮಾಹಿತಿ ನೀಡಿದೆ.</p>.<p>ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಬ್ಬು ಇಳುವರಿ ಕಡಿಮೆ ಆಗುವ ಸಾಧ್ಯತೆ ಇದೆ. ಅಲ್ಲದೆ,ಇಥೆನಾಲ್ ತಯಾರಿಕೆಗೆ ಕಬ್ಬನ್ನು ಬಳಸುವುದರಿಂದ ಒಟ್ಟಾರೆ ಸಕ್ಕರೆ ಉತ್ಪಾದನೆ 3.31 ಕೋಟಿ ಟನ್ಗಳಿಂದ2.6 ಕೋಟಿ ಟನ್ಗಳಿಗೆಶೇ 21.5ರಷ್ಟು ಕಡಿಮೆಯಾಗುವ ಅಂದಾಜು ಮಾಡಲಾಗಿದೆ.</p>.<p>ಒಟ್ಟಾರೆ ಸಕ್ಕರೆ ಉತ್ಪಾದನೆಯಲ್ಲಿ ಈ ಎರಡೂ ರಾಜ್ಯಗಳ ಕೊಡುಗೆ ಶೇ 35 ರಿಂದ ಶೇ 40ರಷ್ಟಿದೆ. ಆದರೆ,ಮಳೆ, ಪ್ರವಾಹವನ್ನೂ ಒಳಗೊಂಡು ಹಲವು ಕಾರಣಗಳಿಂದ ಬೆಳೆ ಹಾನಿ ಸಂಭವಿಸಿದೆ.</p>.<p>ಮಹಾರಾಷ್ಟ್ರದಲ್ಲಿ ಉತ್ಪಾದನೆ 1.07 ಕೋಟಿ ಟನ್ಗಳಿಂದ 62 ಲಕ್ಷ ಟನ್ಗಳಿಗೆ ಶೇ 40ರಷ್ಟು ಇಳಿಕೆಯಾಗಲಿದೆ.ಕರ್ನಾಟಕದಲ್ಲಿ ಉತ್ಪಾದನೆ 44 ಲಕ್ಷದಿಂದ 32 ಲಕ್ಷಕ್ಕೆ ಇಳಿಕೆಯಾಗಲಿದೆ ಎಂದೂ ಹೇಳಿದೆ.</p>.<p>ಕಾರ್ಖಾನೆಗಳು ಶೀಘ್ರವೇ ಕಬ್ಬು ಅರೆಯುವಿಕೆ ಆರಂಭಸಲಿವೆ. ಆ ಬಳಿಕ ಉತ್ಪಾದನೆಯ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ ಎಂದು ಸಂಘ ಹೇಳಿದೆ.</p>.<p>ವಾಡಿಕೆಯಂತೆ ಮಳೆಯಾಗಿಲ್ಲ. ಹೀಗಾಗಿ ಮೊದಲು ಬಿಡುಗಡೆ ಮಾಡಿದ್ದ ಅಂದಾಜಿನಂತೆ ಉತ್ಪಾದನೆ ಆಗುವುದಿಲ್ಲ ಎಂದಿದೆ.</p>.<p>2018ರಲ್ಲಿ ಕಡಿಮೆ ಮಳೆ ಮತ್ತು 2019ರ ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕರ್ನಾಟಕದಲ್ಲಿ ಇಳುವರಿ ಮೇಲೆ ಹೊಡೆತ ಬಿದ್ದಿದೆ. ಅತಿಯಾದ ಮಳೆಯಿಂದ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ತಿಳಿಸಿದೆ.</p>.<p class="Subhead"><strong>ವಿಳಂಬ:ಅ</strong>ತಿಯಾದ ಮಳೆ ಮತ್ತು ಕಬ್ಬಿನ ಕೊರತೆಯಿಂದಾಗಿಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವಿಕೆಯು ಒಂದು ತಿಂಗಳು ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇದರಿಂದಲೂ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ.</p>.<p><strong>ಇಥೆನಾಲ್: ಪರಿಸರ ಅನುಮತಿ ಬೇಕಿಲ್ಲ</strong><br />ಹೆಚ್ಚುವರಿ ಸಕ್ಕರೆಯಿಂದ ಇಥೆನಾಲ್ ತಯಾರಿಸಲು ಪರಿಸರ ಇಲಾಖೆಯ ಅನುಮತಿ ಬೇಕಿಲ್ಲ. ಏಕೆಂದರೆ ಅದರಿಂದ ಮಾಲಿನ್ಯ ಉಂಟಾಗುವುದಿಲ್ಲ ಎಂದು ಸರ್ಕಾರ ಮಂಗಳವಾರ ತಿಳಿಸಿದೆ. ಇದರಿಂದ ರೈತರು ಮತ್ತು ನಗದು ಬಿಕ್ಕಟ್ಟು ಎದುರಿಸುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ ಅನುಕೂಲ ಆಗಲಿದೆ.</p>.<p>ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲು ಮತ್ತು ಹೆಚ್ಚುವರಿ ಸಕ್ಕರೆಯನ್ನು ಇಥೆನಾಲ್ ತಯಾರಿಕೆಗೆ ಬಳಸಲು ಅನುಕೂಲ ಆಗುವಂತೆ, ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಯೋಜನೆ ಘೋಷಿಸಿದೆ. ಆದರೆ, ₹ 15 ಸಾವಿರ ಕೋಟಿ ಮೊತ್ತದ ಸಾಲ ಯೋಜನೆಯು ಕುಂಟುತ್ತಾ ಸಾಗುತ್ತಿದೆ ಎಂದು ಆಹಾರ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಯೋಜನೆಯಡಿ ಬ್ಯಾಂಕ್ಗಳು ಇದುವರೆಗೆ ಕೇವಲ ₹ 800 ಕೋಟಿಯನ್ನು ಮಾತ್ರ ವಿತರಣೆ ಮಾಡಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<p>ಸದ್ಯ 3 ಲಕ್ಷದಿಂದ 4 ಲಕ್ಷ ಟನ್ಗಳಷ್ಟು ಸಕ್ಕರೆಯನ್ನು ಇಥೆನಾಲ್ಗೆ ಬಳಸಲಾಗುತ್ತಿದೆ. ಯೋಜನೆಯಡಿ 9 ಲಕ್ಷದಿಂದ 10 ಲಕ್ಷ ಟನ್ಗಳಷ್ಟು ಬಳಕೆಯಾಗುವ ನಿರೀಕ್ಷೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>