ಬೆಂಗಳೂರು: ಚಿನ್ನಾಭರಣಗಳ ಮಳಿಗೆ ‘ತನಿಷ್ಕ್’ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ, ವಜ್ರದ ಆಭರಣಗಳ ಮೇಲೆ ಶೇಕಡ 25ರವರೆಗೆ, ಪ್ರತಿ ಗ್ರಾಂ ಚಿನ್ನದ ಮೇಲೆ ₹ 300ರವರೆಗೆ ವಿನಾಯಿತಿ ಘೋಷಿಸಿದೆ. ಸೀಮಿತ ಅವಧಿಯ ಈ ಕೊಡುಗೆಯು ರಾಜ್ಯದ ಎಲ್ಲ ತನಿಷ್ಕ್ ಮಳಿಗೆಗಳಲ್ಲಿ ಲಭ್ಯವಿರಲಿದೆ.
ಹಬ್ಬದ ಸಂದರ್ಭದಲ್ಲಿ ವಿಶೇಷ ಅಷ್ಟಲಕ್ಷ್ಮಿ ಚಿನ್ನದ ನಾಣ್ಯಗಳನ್ನೂ ಮಾರಾಟಕ್ಕೆ ಬಿಡಲಾಗಿದೆ ಎಂದು ತನಿಷ್ಕ್ ತಿಳಿಸಿದೆ. ‘ಈಗ ಎದುರಾಗಿರುವಂತಹ ಕಠಿಣ ಪರಿಸ್ಥಿತಿಗಳಲ್ಲಿ ಹಬ್ಬಗಳ ಪಾವಿತ್ರ್ಯತೆಯು ನಮ್ಮಲ್ಲಿ ಖುಷಿ ಮತ್ತು ಭರವಸೆಯನ್ನು ಮರಳಿ ತರುತ್ತದೆ’ ಎಂದು ‘ತನಿಷ್ಕ್’ನ ಮಾರುಕಟ್ಟೆ ವಿಭಾಗದ ಜನರಲ್ ಮ್ಯಾನೇಜರ್ ರಂಜನಿ ಕೃಷ್ಣಸ್ವಾಮಿ ಹೇಳಿದ್ದಾರೆ.