‘ಈ ಅವಿಭಕ್ತ ಕುಟುಂಬದ ವ್ಯವಸ್ಥೆ ಇಂದಿನ ಅರ್ಥವ್ಯವಸ್ಥೆಯಲ್ಲಿ ಇಲ್ಲ. ಇಲ್ಲಿ ಮಾರುಕಟ್ಟೆಗಳಿವೆ, ಖಾಸಗಿ ವಲಯದ ಕಂಪನಿಗಳು ದೇಶದ ಒಳಗಿನಿಂದಲೂ ಸಾಲ ಎತ್ತುತ್ತಿವೆ, ಹೊರಗಿನಿಂದಲೂ ಸಾಲ ತರುತ್ತಿವೆ. ಅರ್ಥವ್ಯವಸ್ಥೆಯ ಸ್ವರೂಪದಲ್ಲಿ ಬದಲಾವಣೆ ಆಗು ವುದರ ಜೊತೆಗೆ, ದೇಶದ ಜನರ ಉಳಿತಾಯ ಪ್ರಮಾಣದಲ್ಲಿ ಕೂಡ ಹಿಂದಿನ ದಶಕದಲ್ಲಿ ಇಳಿಕೆ ಆಗಿದೆ. ಇದು ಸಂಪನ್ಮೂಲಗಳ ಲಭ್ಯತೆಯನ್ನು ಕಡಿಮೆ ಮಾಡುತ್ತಿದೆ’ ಎಂದು ಹೇಳಿದರು.