ಹಣ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ. ಹೀಗಾಗಿ ಸೆಬಿ ನೀಡಿರುವ ಆದೇಶವು ನಿಷ್ಠುರವಾಗಿದ್ದು ಸಮರ್ಥಿಸಲಾಗದು ಎಂದು ಹೇಳುವ ಮೂಲಕ ಆದೇಶವನ್ನು ಎಸ್ಎಟಿ ರದ್ದುಪಡಿಸಿದೆ. ಸೆಬಿಯ ತನಿಖೆಗೆ ಸಹಕರಿಸುವಂತೆಯೂ ಗೋಯೆಂಕಾ ಅವರಿಗೆ ನಿರ್ದೇಶನ ನೀಡಿದೆ. ತನಿಖೆಯ ವೇಳೆ ಅವರ ವಿರುದ್ಧ ಯಾವುದೇ ಸಾಕ್ಷ್ಯ ದೊರೆತಲ್ಲಿ ಕಾನೂನಿನ ರಿತ್ಯಾ ಅಗತ್ಯ ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ.