ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಯಾಂಡ್ ಬಾಕ್ಸ್ನ ಸಿಇಒ ಸಿ.ಎಂ. ಪಾಟೀಲ್, ನವೋದ್ಯಮದ ಕುರಿತು ಯುವಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ದೇಶದ 20 ರಾಜ್ಯಗಳಲ್ಲಿ ‘ಸ್ಟಾರ್ಟ್ಅಪ್ಸ್ ಯಾತ್ರಾ’ವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಕರ್ನಾಟಕವೂ ಒಂದಾಗಿದೆ. ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಸ್ಟಾರ್ಟ್ಅಪ್ಸ್ ಯಾತ್ರಾ ನಡೆಯುತ್ತಿದೆ ಎಂದು ಹೇಳಿದರು.