<p>ಬೆಂಗಳೂರು: ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನಾ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ಸ್ಥಾಪಿಸಲಾಗುವುದು ಎಂದು ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರೂ ಆದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್ಎಲ್ಬಿಸಿ) ಅಧ್ಯಕ್ಷ ಬಸಂತ ಸೇಠ್ ಹೇಳಿದರು.<br /> <br /> ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ 118ನೇ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ವಿತ್ತೀಯ ಸೇರ್ಪಡೆಯ ಯಶಸ್ಸಿಗೆ ಆರ್ಥಿಕ ಸಾಕ್ಷರತೆಯ ಅವಶ್ಯಕತೆಯನ್ನು ಮನಗಂಡು, ವಿವಿಧ ಬ್ಯಾಂಕುಗಳು ಇದುವರೆಗೂ 26 ಕಡೆ ಈ ರೀತಿಯ ಸಮಾಲೋಚನಾ ಕೇಂದ್ರಗಳನ್ನು ಸ್ಥಾಪಿಸಿವೆ. ಇವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ಸ್ಥಾಪಿಸಲಾಗುವುದು ಎಂದರು.<br /> <br /> ಪ್ರಸಕ್ತ ವರ್ಷವನ್ನು `ಆರ್ಥಿಕ ಸೇರ್ಪಡೆ ಮತ್ತು ಕೃಷಿ ಸಾಲ ವರ್ಷ~ ಎಂದು ಘೋಷಣೆ ಮಾಡಿದ್ದು, ಆ ಹಿನ್ನೆಲೆಯಲ್ಲಿ ಬ್ಯಾಂಕ್ರಹಿತ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಕಡೆಗೆ ಗಮನ ನೀಡಲಾಗುತ್ತಿದೆ. ಈವರೆಗೆ 2,000ಕ್ಕೂ ಹೆಚ್ಚು ಜನಸಂಖ್ಯೆ ಇರುವ 3,395 ಬ್ಯಾಂಕ್ರಹಿತ ಗ್ರಾಮಗಳ ಪೈಕಿ 1,713 ಗ್ರಾಮಗಳಿಗೆ ಬ್ಯಾಂಕಿನ ಸೇವೆ ಒದಗಿಸಿ, ಶೇ 50.46ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.<br /> <br /> ಒಂದು ಸಾವಿರದಿಂದ ಎರಡು ಸಾವಿರ ಜನಸಂಖ್ಯೆ ಇರುವ 6,029 ಬ್ಯಾಂಕ್ ರಹಿತ ಗ್ರಾಮಗಳನ್ನು ಗುರುತಿಸಿದ್ದು, ಅಂತಹ ಕಡೆಯೂ ಬ್ಯಾಂಕ್ ಸೇವೆ ಒದಗಿಸಲು ಎಲ್ಲ ಲೀಡ್ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.<br /> <br /> ಪ್ರಸಕ್ತ ಸಾಲಿನ ಜೂನ್ ಅಂತ್ಯದವರೆಗೆ ್ಙ 3,54,999 ಕೋಟಿ ಠೇವಣಿ ಮತ್ತು ್ಙ 2,58,105 ಕೋಟಿ ಸಾಲ ನೀಡಲಾಗಿದೆ. ಹೀಗಾಗಿ ಸಾಲ- ಠೇವಣಿ ಅನುಪಾತ ಶೇ 27:21ರಷ್ಟು ಇದೆ. ಆದ್ಯತಾ ಕ್ಷೇತ್ರಕ್ಕೆ ್ಙ 1,09,550 ಕೋಟಿ ಸಾಲ ನೀಡಲಾಗಿದೆ ಎಂದು ವಿವರಿಸಿದರು.<br /> <br /> ಕೃಷಿ ಕ್ಷೇತ್ರಕ್ಕೆ ್ಙ 47,054 ಕೋಟಿ ಸಾಲ ನೀಡಲಾಗಿದೆ. ಇದು `ಆರ್ಬಿಐ~ ನಿಗದಿಪಡಿಸಿರುವ ಶೇ 18ಕ್ಕಿಂತ ಹೆಚ್ಚು ಎಂದು ಹೇಳಿದರು.<br /> <br /> ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾತನಾಡಿ, ಬ್ಯಾಂಕುಗಳು ಕೃಷಿ, ಗೃಹ ನಿರ್ಮಾಣ ಮತ್ತು ಶಿಕ್ಷಣ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ವಿಷಯದಲ್ಲಿ ರಾಜಿ ಬೇಡ ಎಂದರು. <br /> <br /> `ಎಸ್ಎಲ್ಬಿಸಿ~ ಸಂಚಾಲಕ ಜಿ.ರಾಮನಾಥನ್, ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ರವಿ ಚಟರ್ಜಿ, ಆರ್ಬಿಐ ಕಾರ್ಯನಿರ್ವಾಹಕ ನಿರ್ದೇಶಕ ಉಮಾಶಂಕರ್, ನಬಾರ್ಡ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಎ.ಜಿನ್ನಾ ಸೇರಿದಂತೆ ಇತರರು ಸಭೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಆರ್ಥಿಕ ಸಾಕ್ಷರತೆ ಮತ್ತು ಸಾಲ ಸಮಾಲೋಚನಾ ಕೇಂದ್ರಗಳನ್ನು ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ಸ್ಥಾಪಿಸಲಾಗುವುದು ಎಂದು ಸಿಂಡಿಕೇಟ್ ಬ್ಯಾಂಕಿನ ಅಧ್ಯಕ್ಷರೂ ಆದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ (ಎಸ್ಎಲ್ಬಿಸಿ) ಅಧ್ಯಕ್ಷ ಬಸಂತ ಸೇಠ್ ಹೇಳಿದರು.<br /> <br /> ವಿಧಾನಸೌಧದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯ 118ನೇ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ವಿತ್ತೀಯ ಸೇರ್ಪಡೆಯ ಯಶಸ್ಸಿಗೆ ಆರ್ಥಿಕ ಸಾಕ್ಷರತೆಯ ಅವಶ್ಯಕತೆಯನ್ನು ಮನಗಂಡು, ವಿವಿಧ ಬ್ಯಾಂಕುಗಳು ಇದುವರೆಗೂ 26 ಕಡೆ ಈ ರೀತಿಯ ಸಮಾಲೋಚನಾ ಕೇಂದ್ರಗಳನ್ನು ಸ್ಥಾಪಿಸಿವೆ. ಇವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿಯೂ ಸ್ಥಾಪಿಸಲಾಗುವುದು ಎಂದರು.<br /> <br /> ಪ್ರಸಕ್ತ ವರ್ಷವನ್ನು `ಆರ್ಥಿಕ ಸೇರ್ಪಡೆ ಮತ್ತು ಕೃಷಿ ಸಾಲ ವರ್ಷ~ ಎಂದು ಘೋಷಣೆ ಮಾಡಿದ್ದು, ಆ ಹಿನ್ನೆಲೆಯಲ್ಲಿ ಬ್ಯಾಂಕ್ರಹಿತ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಕಡೆಗೆ ಗಮನ ನೀಡಲಾಗುತ್ತಿದೆ. ಈವರೆಗೆ 2,000ಕ್ಕೂ ಹೆಚ್ಚು ಜನಸಂಖ್ಯೆ ಇರುವ 3,395 ಬ್ಯಾಂಕ್ರಹಿತ ಗ್ರಾಮಗಳ ಪೈಕಿ 1,713 ಗ್ರಾಮಗಳಿಗೆ ಬ್ಯಾಂಕಿನ ಸೇವೆ ಒದಗಿಸಿ, ಶೇ 50.46ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.<br /> <br /> ಒಂದು ಸಾವಿರದಿಂದ ಎರಡು ಸಾವಿರ ಜನಸಂಖ್ಯೆ ಇರುವ 6,029 ಬ್ಯಾಂಕ್ ರಹಿತ ಗ್ರಾಮಗಳನ್ನು ಗುರುತಿಸಿದ್ದು, ಅಂತಹ ಕಡೆಯೂ ಬ್ಯಾಂಕ್ ಸೇವೆ ಒದಗಿಸಲು ಎಲ್ಲ ಲೀಡ್ ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.<br /> <br /> ಪ್ರಸಕ್ತ ಸಾಲಿನ ಜೂನ್ ಅಂತ್ಯದವರೆಗೆ ್ಙ 3,54,999 ಕೋಟಿ ಠೇವಣಿ ಮತ್ತು ್ಙ 2,58,105 ಕೋಟಿ ಸಾಲ ನೀಡಲಾಗಿದೆ. ಹೀಗಾಗಿ ಸಾಲ- ಠೇವಣಿ ಅನುಪಾತ ಶೇ 27:21ರಷ್ಟು ಇದೆ. ಆದ್ಯತಾ ಕ್ಷೇತ್ರಕ್ಕೆ ್ಙ 1,09,550 ಕೋಟಿ ಸಾಲ ನೀಡಲಾಗಿದೆ ಎಂದು ವಿವರಿಸಿದರು.<br /> <br /> ಕೃಷಿ ಕ್ಷೇತ್ರಕ್ಕೆ ್ಙ 47,054 ಕೋಟಿ ಸಾಲ ನೀಡಲಾಗಿದೆ. ಇದು `ಆರ್ಬಿಐ~ ನಿಗದಿಪಡಿಸಿರುವ ಶೇ 18ಕ್ಕಿಂತ ಹೆಚ್ಚು ಎಂದು ಹೇಳಿದರು.<br /> <br /> ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಮಾತನಾಡಿ, ಬ್ಯಾಂಕುಗಳು ಕೃಷಿ, ಗೃಹ ನಿರ್ಮಾಣ ಮತ್ತು ಶಿಕ್ಷಣ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ವಿಷಯದಲ್ಲಿ ರಾಜಿ ಬೇಡ ಎಂದರು. <br /> <br /> `ಎಸ್ಎಲ್ಬಿಸಿ~ ಸಂಚಾಲಕ ಜಿ.ರಾಮನಾಥನ್, ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ರವಿ ಚಟರ್ಜಿ, ಆರ್ಬಿಐ ಕಾರ್ಯನಿರ್ವಾಹಕ ನಿರ್ದೇಶಕ ಉಮಾಶಂಕರ್, ನಬಾರ್ಡ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎನ್.ಎ.ಜಿನ್ನಾ ಸೇರಿದಂತೆ ಇತರರು ಸಭೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>