<p><strong>ಮುಂಬೈ (ಪಿಟಿಐ): `</strong>ಬ್ಯಾಂಕುಗಳ ಮೂಲಕ ಚಿನ್ನದ ನಾಣ್ಯ ಮಾರಾಟ ಮಾಡುವುದಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸ್ಪಷ್ಟಪಡಿಸಿದೆ. <br /> <br /> `ಬ್ಯಾಂಕುಗಳ ಮೂಲಕ ನಡೆಯುವ ಚಿನ್ನದ ನಾಣ್ಯದ ಮಾರಾಟವು ತುಂಬಾ ಚಿಕ್ಕ ಪ್ರಮಾಣದಲ್ಲಿದೆ. ಇದರ ಮೇಲೆ ನಿಯಂತ್ರಣ ಹೇರುವ ಯೋಚನೆ ಸದ್ಯಕ್ಕಿಲ್ಲ~ ಎಂದು `ಆರ್ಬಿಐ~ ಗವರ್ನರ್ ಡಿ. ಸುಬ್ಬರಾವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. <br /> <br /> ಚಿನ್ನದ ಆಮದು ಹೆಚ್ಚುತ್ತಿರುವುದು ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡ ಬೀರಿದೆ. ಈ ನಿಟ್ಟಿನಲ್ಲಿ ಚಿನ್ನದ ನಾಣ್ಯ ಮಾರಾಟದ ಮೇಲೆ ನಿಯಂತ್ರಣ ಹೇರಲಾಗುವುದೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು. ನಾಣ್ಯ ಮಾರಾಟ ಮಾತ್ರವಲ್ಲ, ಬ್ಯಾಂಕುಗಳು ನೀಡುವ ಚಿನ್ನದ ಸಾಲದ ಮೇಲೆ ಕೂಡ `ಆರ್ಬಿಐ~ ನಿರ್ಬಂಧ ವಿಧಿಸುತ್ತಿಲ್ಲ. <br /> <br /> ಇಂದು ಲಕ್ಷಾಂತರ ಕುಟುಂಬಗಳು `ಚಿನ್ನ~ವನ್ನೇ ನೆಚ್ಚಿಕೊಂಡಿವೆ ಎಂದರು. `ಚಿನ್ನದ ಬೇಡಿಕೆ ಮತ್ತು ಬೆಲೆ ಇಳಿಯಲು, ದೇಶದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಆಗಬೇಕು~ ಎಂದು ಇತ್ತೀಚೆಗೆ `ಆರ್ಬಿಐ~ ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): `</strong>ಬ್ಯಾಂಕುಗಳ ಮೂಲಕ ಚಿನ್ನದ ನಾಣ್ಯ ಮಾರಾಟ ಮಾಡುವುದಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸ್ಪಷ್ಟಪಡಿಸಿದೆ. <br /> <br /> `ಬ್ಯಾಂಕುಗಳ ಮೂಲಕ ನಡೆಯುವ ಚಿನ್ನದ ನಾಣ್ಯದ ಮಾರಾಟವು ತುಂಬಾ ಚಿಕ್ಕ ಪ್ರಮಾಣದಲ್ಲಿದೆ. ಇದರ ಮೇಲೆ ನಿಯಂತ್ರಣ ಹೇರುವ ಯೋಚನೆ ಸದ್ಯಕ್ಕಿಲ್ಲ~ ಎಂದು `ಆರ್ಬಿಐ~ ಗವರ್ನರ್ ಡಿ. ಸುಬ್ಬರಾವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. <br /> <br /> ಚಿನ್ನದ ಆಮದು ಹೆಚ್ಚುತ್ತಿರುವುದು ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡ ಬೀರಿದೆ. ಈ ನಿಟ್ಟಿನಲ್ಲಿ ಚಿನ್ನದ ನಾಣ್ಯ ಮಾರಾಟದ ಮೇಲೆ ನಿಯಂತ್ರಣ ಹೇರಲಾಗುವುದೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು. ನಾಣ್ಯ ಮಾರಾಟ ಮಾತ್ರವಲ್ಲ, ಬ್ಯಾಂಕುಗಳು ನೀಡುವ ಚಿನ್ನದ ಸಾಲದ ಮೇಲೆ ಕೂಡ `ಆರ್ಬಿಐ~ ನಿರ್ಬಂಧ ವಿಧಿಸುತ್ತಿಲ್ಲ. <br /> <br /> ಇಂದು ಲಕ್ಷಾಂತರ ಕುಟುಂಬಗಳು `ಚಿನ್ನ~ವನ್ನೇ ನೆಚ್ಚಿಕೊಂಡಿವೆ ಎಂದರು. `ಚಿನ್ನದ ಬೇಡಿಕೆ ಮತ್ತು ಬೆಲೆ ಇಳಿಯಲು, ದೇಶದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಆಗಬೇಕು~ ಎಂದು ಇತ್ತೀಚೆಗೆ `ಆರ್ಬಿಐ~ ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>