<p>`ಮಮತೆಯ ಬಂಧನ~ ಬಿಡುಗಡೆಯಾದ ಮೇಲೆ ನನಗೆ ಅಭಿನಯಿಸಲು ಅವಕಾಶಗಳು ಸಿಕ್ಕವು. ಶಂಕರ್ಸಿಂಗ್, ವಿಠಲಾಚಾರ್ಯ ಆಗಿನ ಹೆಸರಾಂತ ನಿರ್ಮಾಪಕರು. ಆಂಧ್ರದಲ್ಲಿ ಜಾನಪದ ಸಿನಿಮಾಗಳನ್ನು ಯಶಸ್ವಿ ಮಾಡಿದವರು ವಿಠಲಾಚಾರ್ಯ. ಶಂಕರ್ ಸಿಂಗ್ ಕನ್ನಡದಲ್ಲಿ ಆ ಕಾಲಕ್ಕೇ ಅದ್ಭುತವಾದ ಸಿನಿಮಾಗಳನ್ನು ಮಾಡಿದ್ದರು. ಅವರ `ಜಗನ್ಮೋಹಿನಿ~ ಚಿತ್ರ ದಾವಣಗೆರೆಯಲ್ಲಿ 36 ವಾರ ಓಡಿತ್ತು. <br /> <br /> ಶಂಕರ್ ಸಿಂಗ್ ಹೇಳಿದ ಒಂದು ಅನುಭವವನ್ನು ನಾನು ಹಂಚಿಕೊಳ್ಳಲೇಬೇಕು: ಮಹಾಬಲರಾಯರು ಆಗ ಜನಪ್ರಿಯ ಹಾಸ್ಯನಟ. `ಜಗನ್ಮೋಹಿನಿ~ ಚಿತ್ರಕ್ಕೆ ಅವರು ಓಡಿಬರುವ ಶಾಟ್ಚಿತ್ರೀಕರಿಸಿಕೊಳ್ಳಬೇಕಿತ್ತು. ನೆಗೆಟಿವ್ ಮುಗಿದುಹೋಗುತ್ತಿದ್ದ ಕಾರಣ ಸಮಯ ಹಾಳು ಮಾಡುವಂತಿರಲಿಲ್ಲ. <br /> <br /> ರೀಟೇಕ್ ಇರಲಿ, ಹೆಚ್ಚು ಕಾಲವನ್ನೂ ತೆಗೆದುಕೊಳ್ಳುವ ಹಾಗಿರಲಿಲ್ಲ. ಆದಷ್ಟು ಬೇಗ ಓಡಿಬರಬೇಕೆಂದು ಮಹಾಬಲರಾಯರಿಗೆ ಶಂಕರ್ ಸಿಂಗ್ ತಾಕೀತು ಮಾಡಿದ್ದರು. ಅವರು ಓಡಿಬರತೊಡಗಿದರು. ಅವರ ಪಂಚೆ ಮುಳ್ಳಿಗೆ ಸಿಕ್ಕಿಹಾಕಿಕೊಂಡಿತು. ಶಂಕರ್ ಸಿಂಗ್ ಅದನ್ನು ಕಿತ್ತುಕೊಂಡು ಬಾ ಎಂದು ಕೂಗುತ್ತಲೇ ಇದ್ದರು.<br /> <br /> ವಿಧಿಯಿಲ್ಲದೆ ಮಹಾಬಲರಾಯರು ತಮ್ಮ ಪಂಚೆಯನ್ನು ಕಿತ್ತುಕೊಂಡು ಎದ್ದೆನೋ ಬಿದ್ದೆನೋ ಎಂಬಂತೆ ಓಡಿಬಂದರು. ಚಿತ್ರದಲ್ಲೂ ಆ ದೃಶ್ಯ ಹಾಗೆಯೇ ಮೂಡಿಬಂತು. ಅವರ ಪಂಚೆ ಸಿಕ್ಕಿಹಾಕಿಕೊಂಡಿದ್ದನ್ನು ಕಂಡ ಜನ ಹಿಂದೆ ದೆವ್ವ ಬರುತ್ತಾ ಇರುವ ದೃಶ್ಯ ಅದಾದ್ದರಿಂದ ತುಂಬಾ ಸಹಜವಾಗಿದೆ ಎಂದು ಮೆಚ್ಚಿಕೊಂಡರು. <br /> <br /> `ಎಂಥ ನಿರ್ದೇಶಕ. ಸಿಂಬಾಲಿಕ್ ಆಗಿದೆ. ವಾಟ್ ಎ ಡೈರೆಕ್ಟೋರಿಯಲ್ ಟಚ್~ ಎಂದು ಉದ್ಗರಿಸಿದರು. ಇದನ್ನು ಕಂಡು ಶಂಕರ್ ಸಿಂಗ್ಗೆ ಮೊದಲು ನಗು ಬಂದಿತಂತೆ. <br /> ನನಗೆ ಖುದ್ದು ಶಂಕರ್ ಸಿಂಗ್ ಈ ಘಟನೆಯನ್ನು ಹೇಳಿಕೊಂಡಿದ್ದರು. <br /> <br /> ಶಂಕರ್ ಸಿಂಗ್ ಅವರ ಮಗ ರಾಜೇಂದ್ರ ಸಿಂಗ್ ನಾನು ಮರೆಯಲಾಗದ ಇನ್ನೊಬ್ಬ ಸಜ್ಜನ. ಅವನು ನಿರ್ದೇಶಿಸಿದ `ಪಾತಾಳಮೋಹಿನಿ~, `ಲಕ್ಷಾಧೀಶ್ವರ~, `ಧನಪಿಶಾಚಿ~ ಚಿತ್ರಗಳಲ್ಲಿ ನನಗೆ ಅವಕಾಶ ಕೊಟ್ಟ. `ಧನಪಿಶಾಚಿ~ಯ್ಲ್ಲಲಂತೂ ತುಂಬಾ ದೊಡ್ಡ ಪಾತ್ರವಿತ್ತು. <br /> <br /> ವಂದನಾ ಎಂಬ ಆ ಕಾಲಕ್ಕೆ ಹೆಸರಾದ ನಾಯಕಿಯ ಜೊತೆ ಹಾಸ್ಯ ಪಾತ್ರಧಾರಿಯಾದ ನನಗೆ ಒಂದು ಹಾಡಿತ್ತು. ಅದು ನನ್ನ ಪಾಲಿಗೆ ಆಗ ಹೆಮ್ಮೆಯ ವಿಷಯ. ಆ ಹಾಡಲ್ಲಿ ವಂದನಾ ಹೇಳುತ್ತಾಳೆ: `ನಿನಗೇನಿದೆ ಪರ್ಸನಾಲಿಟಿ. ಕುಳ್ಳ~. <br /> <br /> ಅದಕ್ಕೆ ನಾನು ಒಂದು ಹಾಡು ಹೇಳುತ್ತೇನೆ: `ಕುಳ್ಳ ನಾನಾಗಿದ್ದರೆ ಏನಾಯ್ತೆ/ ಒಳ್ಳೆ ಮನಸು ನನಗೈತೆ/ ನಾ ಕಳ್ಳನಲ್ಲ ಸುಳ್ಳನಲ್ಲ/ ಗುಳ್ಳೆ ನರಿಯ ಬುದ್ಧಿಯಿಲ್ಲ/ ಒಳ್ಳೆ ವಂಶ ನಮ್ಮದೆಲ್ಲ...~. ನನ್ನ ಮಾವ ಹುಣಸೂರು ಕೃಷ್ಣಮೂರ್ತಿ ನನಗಾಗಿಯೇ ಬರೆದ ಹಾಡದು. ಬಹುಶಃ ನನ್ನ ತಲೆಯಲ್ಲಿ ಕುಳ್ಳ ಎಂಬ ಧ್ವನಿ ಮೊದಲು ಮೂಡಿದ್ದೇ ಆಗ. ಮುಂದೆ ನಾನು `ಕರ್ನಾಟಕ ಕುಳ್ಳ~ ಎನಿಸಿಕೊಳ್ಳಲು ಅದೇ ಮೊದಲ ಮೆಟ್ಟಿಲಾಗಿತ್ತೋ ಏನೋ.<br /> <br /> ರಾಜೇಂದ್ರ ಸಿಂಗ್ ಬಾಬು ನನಗೆ ಬಹಳ ಹತ್ತಿರದ ಹುಡುಗ. ಕನ್ನಡ ಚಿತ್ರರಂಗದಲ್ಲಿ ಅವನು ತನ್ನದೇ ಆದ ಸ್ಥಾನ ಪಡೆದ. ನಾನು, ವಿಷ್ಣುವರ್ಧನ್ 1985-86ರಲ್ಲಿ ಜಗಳವಾಡಿದಾಗ, ಅವನು ವಿಮಾನ ನಿಲ್ದಾಣದಲ್ಲಿ ಸಿಕ್ಕಿದ. ಒಂದು ಕಡೆ ನಾನು ಬಂದಿಳಿದೆ. ಇನ್ನೊಂದು ಕಡೆ ವಿಷ್ಣು, ಬಾಬು ಇಳಿದರು. <br /> <br /> ನನ್ನ ಜೊತೆ ಅಲ್ಲಿಯೇ ಬಾಬು ಚರ್ಚೆಯಲ್ಲಿ ತೊಡಗಿದ. `ನೀವಿಬ್ಬರೂ ಜಗಳ ಆಡಬಾರದು. ಮತ್ತೆ ಸೇರಿ ಸಿನಿಮಾ ಮಾಡಿ. ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ. ನೀವಿಬ್ಬರೂ ಟಾಪ್ ಆಗಿ ಸೇರಿದ್ದೀರಿ. ಯಾಕ್ರೋ ಹೀಗೆ ಮಾಡುತ್ತೀರಿ?~ ಎಂದು ಪಾರ್ಲಿಮೆಂಟ್ನಲ್ಲಿ ಮಾತನಾಡುವಂತೆ ಮಾತನಾಡಿದ್ದ. <br /> <br /> ಅವನು ಇಂಡಸ್ಟ್ರಿ ಬಗ್ಗೆ ಯೋಚನೆ ಮಾಡಿದ್ದ. ಸ್ವಾರ್ಥವೇ ಹೆಚ್ಚಾಗಿದ್ದ ಉದ್ಯಮದಲ್ಲಿ ರಾಜೇಂದ್ರ ಸಿಂಗ್ ಬಾಬು ಅಂದು ಆಡಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿವೆ. ಆ ಬಾಬು ನಿರ್ದೇಶನದಲ್ಲಿ ನಾನು ಒಂದು ಸಿನಿಮಾ ನಿರ್ಮಿಸಲು ಆಗಲಿಲ್ಲವಲ್ಲ ಎಂಬ ನೋವು ನನಗಿದೆ. <br /> <br /> ನಾನು `ರವಿ ಅಣ್ಣ~ ಎಂದೇ ಕರೆಯುವ ಕೆ.ಎಸ್.ಎಲ್.ಸ್ವಾಮಿ ನನ್ನ ಬೆಳವಣಿಗೆಗೆ ಸಹಾಯಕನಾದ ಗಾಡ್ ಫಾದರ್. `ತೂಗುದೀಪ~ ಎಂಬ ಸಿನಿಮಾ ಶುರುಮಾಡಿದ್ದ ಅವರಿಗೆ ನನ್ನ ಕಂಡರೆ ಬಲು ಪ್ರೀತಿ. `ಲಗ್ನಪತ್ರಿಕೆ~ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟರು. ಸಿದ್ದಲಿಂಗಯ್ಯ ಆ ಚಿತ್ರದ ಸಹಾಯಕ ನಿರ್ದೇಶಕ.<br /> <br /> ಅವರನ್ನು ಸಿದ್ದಲಿಂಗಣ್ಣ ಎಂದೇ ನಾನು ಕರೆಯುತ್ತಿದ್ದೆ. `ನಾನು ಇನ್ನೊಂದು ಸಿನಿಮಾ ಮಾಡಿದರೆ ನೀನೇ ಅದರ ನಿರ್ದೇಶಕ~ ಎಂದು ಅವನಿಗೆ ಲಗ್ನಪತ್ರಿಕೆ ಚಿತ್ರೀಕರಣದ ಸಂದರ್ಭದಲ್ಲಿಯೇ ಒಂದು ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದೆ. ಮುಂದೆ ಅದೇ ಸಿದ್ದಲಿಂಗಯ್ಯ ಕನ್ನಡ ಚಿತ್ರರಂಗದ ಮಹತ್ವದ ನಿರ್ದೇಶಕರಾದರು. <br /> <br /> ರವಿ ಅಣ್ಣ ನನಗೆ ರಾಜ್ಕುಮಾರ್ ಜೊತೆ ನಟಿಸುವ ಅವಕಾಶಗಳನ್ನು ಕಲ್ಪಿಸಿದರು. ರಾಜಣ್ಣ ಅಭಿನಯಿಸಿದ ನೂರನೇ ಚಿತ್ರ `ಭಾಗ್ಯದ ಬಾಗಿಲು~. ಅದರಲ್ಲಿ ನಾನೂ ನಟಿಸಿದ್ದೇನೆಂಬುದು ಹೆಮ್ಮೆಯ ವಿಷಯ. `ಮಂಕುದಿಣ್ಣೆ~, `ಅರಿಶಿನ ಕುಂಕುಮ~, `ಕೃಷ್ಣ ರುಕ್ಮಿಣಿ~ ಎಲ್ಲಾ ಚಿತ್ರಗಳಲ್ಲೂ ನಾನು ರಾಜಣ್ಣನವರ ಜೊತೆ ನಟಿಸಿದ್ದೆ.<br /> <br /> ನಾನು, ರಾಜಣ್ಣ ಒಳ್ಳೆಯ ಸ್ನೇಹಿತರಾಗಿದ್ದೆವು. ಊಟ ಮಾಡುವಾಗ, ವಾಕ್ ಮಾಡುವಾಗ ನನ್ನನ್ನು ಕರೆದು, ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ಒಡನಾಟದ ಕ್ಷಣಗಳು ಈಗಲೂ ಕಣ್ಣಿಗೆ ಕಟ್ಟಿದಂತಿವೆ.<br /> <br /> ಅವರು ನನಗೆ ಚೆನ್ನಾಗಿ ಪರಿಚಿತರಾಗಿದ್ದೇ `ರಾಜಣ್ಣ ನನಗೊಂದು ಕಾಲ್ಷೀಟ್ ಕೊಡಿ~ ಎಂದು ದುಂಬಾಲುಬೀಳತೊಡಗಿದೆ. `ನನ್ನನ್ನ ಎತ್ತಿಕೊಳ್ಳೋಕೆ ಆಗುತ್ತಾ ನಿಮಗೆ?~ ಅಂತ ಅವರು ತಮಾಷೆ ಮಾಡುತ್ತಿದ್ದರು. `ನೀವು ಕಾಲ್ಷೀಟ್ ಕೊಡಿ. ಇಡೀ ವಾಹಿನಿ ಸ್ಟುಡಿಯೋದಲ್ಲಿ ಹೊತ್ತುಕೊಂಡು ತಿರುಗುತ್ತೇನೆ~ ಎಂದು ನಾನು ನನ್ನ ಬಯಕೆ ಹೇಳಿಕೊಳ್ಳುತ್ತಿದ್ದೆ. <br /> <br /> ರಾಜ್ಕುಮಾರ್ ಸಹೋದರ ವರದಪ್ಪನವರು ಸಿದ್ದಲಿಂಗಣ್ಣನಿಗೆ ಹತ್ತಿರವಾಗಿದ್ದರು. `ಹೇಗಾದರೂ ಮಾಡಿ ವರದಪ್ಪನವರನ್ನು ಒಪ್ಪಿಸಿ ರಾಜಣ್ಣನ ಕಾಲ್ಷೀಟ್ ಗಿಟ್ಟಿಸು. ನೀನೇ ನಿರ್ದೇಶಕ. ಸಿನಿಮಾ ಮಾಡೋಣ~ ಅಂತ ಸಿದ್ದಲಿಂಗಣ್ಣನಿಗೆ ನಾನು ಆಗಾಗ ಜಾಕ್ ಹಾಕುತ್ತಲೇ ಇದ್ದೆ. <br /> <br /> ಅದೇ ಕಾಲದಲ್ಲಿ ನಮ್ಮ ಮಾವನ ಸ್ನೇಹಿತ ಹಿರೇಮಠ್ ಎಂಬುವರು ಬಂದರು. ನಾಟಕಗಳಲ್ಲಿ ಅಭಿನಯಿಸಲು ನನಗೆ ಬುಲಾವು ಕೊಟ್ಟರು. ಮಾವನಿಗೆ ಅವರು ತುಂಬಾ ಬೇಕಾದವರಾದ್ದರಿಂದ ತಳ್ಳಿಹಾಕುವಂತಿರಲಿಲ್ಲ. `ಹೋಗು, ನಾಟಕದಲ್ಲಿ ಪಾರ್ಟ್ ಮಾಡು~ ಎಂದು ಮಾವ ತಾಕೀತು ಮಾಡಿದರು.<br /> <br /> ಆ ಕಾಲದಲ್ಲಿ ಒಂದು ನಾಟಕದಲ್ಲಿ ಅಭಿನಯಿಸಿದರೆ ನನಗೆ ಮೂರು ಸಾವಿರ ರೂಪಾಯಿ ಸಂಭಾವನೆ ಕೊಡುತ್ತಿದ್ದರು. ಹುಬ್ಬಳ್ಳಿಯಲ್ಲಿ ನಾಟಕ ಆಡಲು ಹೋದೆವು. ಎದುರಾಳಿ ನಾಟಕದ ಕಂಪೆನಿಯವರು ನರಸಿಂಹ ರಾಜು ಅವರನ್ನು ಕರೆದುಕೊಂಡು ಬಂದಿದ್ದರು. <br /> <br /> ಅದಕ್ಕೇ ನನ್ನನ್ನು ಇವರು ಕರೆದುಕೊಂಡು ಹೋದದ್ದು ಅಂತ ಅಲ್ಲಿ ಗೊತ್ತಾಯಿತು. ನಾನು, ನರಸಿಂಹರಾಜಣ್ಣ ಬೇರೆ ಬೇರೆ ಕಂಪೆನಿಗಳಲ್ಲಿದ್ದರೂ ಒಂದೇ ಹೋಟೆಲ್ನ ಪಕ್ಕ ಪಕ್ಕದ ರೂಮ್ನಲ್ಲಿ ಇಳಿದುಕೊಂಡಿದ್ದೆವು. ಇಬ್ಬರೂ ರಾತ್ರಿ ಹೊತ್ತು ಹರಟೆ ಹೊಡೆಯುತ್ತಿದ್ದೆವು. <br /> <br /> ನಮ್ಮಿಬ್ಬರ ನಡುವೆ ಯಾವತ್ತೂ ಮನಸ್ತಾಪ ಬರಲಿಲ್ಲ. ಅವರೂ ನನ್ನ ಬೆನ್ನುತಟ್ಟಿದರು. ಪ್ರೊಫೆಸರ್ ಹುಚ್ಚುರಾಯ ಸಿನಿಮಾ ನಿರ್ಮಿಸಿದಾಗ ಅವರು ಚಿತ್ರೀಕರಿಸಿದ ಮುಹೂರ್ತದ ಶಾಟ್ನಲ್ಲಿ ನಾನು ವೈಶಾಲಿ ನಟಿಸಿದ್ದೆವು. <br /> <br /> ಹಾಗೆ ನಾನು ರಾಯಚೂರಲ್ಲಿ ನಾಟಕ ಆಡುತ್ತಿದ್ದ ಸಂದರ್ಭದಲ್ಲಿ ನನ್ನ ಮೊದಲ ಮಗ ಸಂತೋಷ್ ಹುಟ್ಟಿದ. ಅದು ಏಪ್ರಿಲ್ ತಿಂಗಳು. ಎರಡು ದಿನಗಳಾದ ಮೇಲೆ ಮದ್ರಾಸ್ಗೆ ಹೋದೆ. ರಾಜ್ಕುಮಾರ್ ಕಾಲ್ಷೀಟ್ ಸಿಕ್ಕಿದೆ ಎಂಬ ಸಿಹಿ ಸುದ್ದಿ ಕಿವಿಮೇಲೆ ಬಿತ್ತು. ನನಗೆ ಡಬ್ಬಲ್ ಸಂತೋಷ. <br /> <br /> ತಕ್ಷಣ ಮಣಿರತ್ನಂ ತಂದೆ ರತ್ನಂ ಅಯ್ಯರ್ ಬಳಿಗೆ ಹೋದೆ. ಅವರು ಚಿತ್ರಕ್ಕೆ ಫೈನಾನ್ಸ್ ಮಾಡಿದರು. ನ್ಯೂಟೌನ್ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲು ತೀರ್ಮಾನಿಸಿದೆವು. ಭಾರತಿ ಚಿತ್ರದ ನಾಯಕಿ.<br /> <br /> ಆ ಕಾಲದಲ್ಲಿ ರಾಜ್ಕುಮಾರ್-ಲೀಲಾವತಿ ಚರಿಷ್ಮಾ ಇದ್ದಂಥ ಜೋಡಿ. ನಂತರದ ಹೆಮ್ಮೆಯ ಜೋಡಿ ಎಂದರೆ ರಾಜ್ಕುಮಾರ್-ಭಾರತಿ. `ಎಮ್ಮೆ ತಮ್ಮಣ್ಣ~, `ಬೀದಿ ಬಸವಣ್ಣ~, `ಚೂರಿ ಚಿಕ್ಕಣ್ಣ~ ಎಲ್ಲವೂ ಹಿಟ್ ಆಗಿದ್ದ ಕಾಲವದು. ಹಾಗಾಗಿ ನನ್ನ ಚಿತ್ರದ ಶೀರ್ಷಿಕೆಯಲ್ಲಿ `ಅಣ್ಣ~ ಎಂಬುದು ಇರಲೇಬೇಕೆಂದು ತೀರ್ಮಾನಿಸಿದ್ದೆ. <br /> <br /> `ಮಣ್ಣಿನ ಮಗ~, `ಅಣ್ಣತಂಗಿ~ಯಲ್ಲಿ ರಾಜಣ್ಣ ಹಳ್ಳಿಯವನ ಪಾತ್ರ ಮಾಡಿದ್ದರು. ಅವರು ಹಳ್ಳಿಯವನ ಕಾಮಿಡಿ ಪಾತ್ರ ಮಾಡಿದರೆ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನಿಸಿತು. ಅದಕ್ಕೇ ನನ್ನ ಚಿತ್ರದ ನಾಯಕನೂ ಹಳ್ಳಿಯವನೇ ಎಂಬುದೂ ನಿಕ್ಕಿಯಾಯಿತು. <br /> <br /> ಐದು ರೈಟರ್ಗಳು ಕೂತು ಕತೆಗಳನ್ನು ಬರೆದರು. ಒಂದು ಕತೆಯಲ್ಲಿ ನಾಯಕನ ಕಾಲು ಮುರಿದುಹೋಗುತ್ತದೆ. ಆ ಸಿನಿಮಾ ಮಾಡಿದರೆ ಚಿತ್ರ ತೋಪಾಗುತ್ತದೆ ಎಂದು ಹೇಳಿದ ಚಿ.ಉದಯಶಂಕರ್ ಅವರನ್ನು ನಾನು ಸ್ಮರಿಸಲೇಬೇಕು.<br /> <br /> ಅವರು ಆ ಕತೆ ತಿರಸ್ಕರಿಸಿದ ಮೇಲೆ ಬಾಸುಮಣಿ ಎಂಬ ರೈಟರನ್ನು ಕರೆದುಕೊಂಡು ಬಂದೆವು. ಹಳ್ಳಿಯವನು ಮೇಯರ್ ಆಗುತ್ತಾನೆಂಬ ಸಣ್ಣ ಸಾಲು ಕ್ಯಾಲೆಂಡರ್ ಒಂದರಲ್ಲಿ ಇತ್ತು. ಆ ಲೈನ್ ಇಟ್ಟುಕೊಂಡೇ ನಾವು ಕತೆ ಬೆಳೆಸಿದೆವು. `ಮೇಯರ್ ಮುತ್ತಣ್ಣ~ ತಯಾರಾಯಿತು. ಸಿದ್ದಲಿಂಗಣ್ಣ ನಿರ್ದೇಶಕನಾದ.<br /> <br /> ಚಿತ್ರದ ಬಿಡುಗಡೆಯ ದಿನ ಗೊತ್ತು ಮಾಡಿದ್ದೆ. ರತ್ನಂ ಅಯ್ಯರ್ ಸಿನಿಮಾ ಲೆಂಗ್ತ್ ಸಾಲದು ಎಂದು ಕೊನೆಕೊನೆಯಲ್ಲಿ ಒಂದಿಷ್ಟು ಹಣ ಕೊಡಲಿಲ್ಲ. `ಕೃಷ್ಣದೇವರಾಯ~ ಸಿನಿಮಾ ಚಿತ್ರೀಕರಣಕ್ಕೆ 45 ದಿನ ರಾಜಣ್ಣ ಜೈಪುರಕ್ಕೆ ಹೊರಡಬೇಕಿತ್ತು. ಹಾಗಾಗಿ ನಾನು ಅನಿವಾರ್ಯವಾಗಿ ಮುದ್ದುಕೃಷ್ಣ ಎಂಬುವರಿಗೆ ಸಿನಿಮಾ ಹಕ್ಕುಗಳನ್ನು ಮಾರಿಬಿಟ್ಟೆ; ಕೇವಲ 40-50 ಸಾವಿರ ರೂಪಾಯಿ ಲಾಭಕ್ಕೆ. <br /> <br /> ಒಂದು ಲಕ್ಷ ರೂಪಾಯಿಯಲ್ಲಿ ತೆಗೆದ ಚಿತ್ರ `ಮೇಯರ್ ಮುತ್ತಣ್ಣ~. ರಾಜಣ್ಣ ಪಡೆದದ್ದು ಕೇವಲ ಒಂಬತ್ತು ಹತ್ತು ಸಾವಿರ ರೂ. ಸಂಭಾವನೆ. ನಾಯಕನ ಕಾಲ್ಷೀಟ್ನ ಐದು ಪಟ್ಟು ಲಾಭ ಆಗ ಬರುತ್ತಿತ್ತು. ಈಗ ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕಾಲ ಬದಲಾಗಿದೆ. <br /> <br /> <strong>ಮುಂದಿನ ವಾರ: ಮತ್ತೊಂದು ಸಿನಿಮಾ ಮತ್ತೊಂದು ಹೆಜ್ಜೆ</strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಮಮತೆಯ ಬಂಧನ~ ಬಿಡುಗಡೆಯಾದ ಮೇಲೆ ನನಗೆ ಅಭಿನಯಿಸಲು ಅವಕಾಶಗಳು ಸಿಕ್ಕವು. ಶಂಕರ್ಸಿಂಗ್, ವಿಠಲಾಚಾರ್ಯ ಆಗಿನ ಹೆಸರಾಂತ ನಿರ್ಮಾಪಕರು. ಆಂಧ್ರದಲ್ಲಿ ಜಾನಪದ ಸಿನಿಮಾಗಳನ್ನು ಯಶಸ್ವಿ ಮಾಡಿದವರು ವಿಠಲಾಚಾರ್ಯ. ಶಂಕರ್ ಸಿಂಗ್ ಕನ್ನಡದಲ್ಲಿ ಆ ಕಾಲಕ್ಕೇ ಅದ್ಭುತವಾದ ಸಿನಿಮಾಗಳನ್ನು ಮಾಡಿದ್ದರು. ಅವರ `ಜಗನ್ಮೋಹಿನಿ~ ಚಿತ್ರ ದಾವಣಗೆರೆಯಲ್ಲಿ 36 ವಾರ ಓಡಿತ್ತು. <br /> <br /> ಶಂಕರ್ ಸಿಂಗ್ ಹೇಳಿದ ಒಂದು ಅನುಭವವನ್ನು ನಾನು ಹಂಚಿಕೊಳ್ಳಲೇಬೇಕು: ಮಹಾಬಲರಾಯರು ಆಗ ಜನಪ್ರಿಯ ಹಾಸ್ಯನಟ. `ಜಗನ್ಮೋಹಿನಿ~ ಚಿತ್ರಕ್ಕೆ ಅವರು ಓಡಿಬರುವ ಶಾಟ್ಚಿತ್ರೀಕರಿಸಿಕೊಳ್ಳಬೇಕಿತ್ತು. ನೆಗೆಟಿವ್ ಮುಗಿದುಹೋಗುತ್ತಿದ್ದ ಕಾರಣ ಸಮಯ ಹಾಳು ಮಾಡುವಂತಿರಲಿಲ್ಲ. <br /> <br /> ರೀಟೇಕ್ ಇರಲಿ, ಹೆಚ್ಚು ಕಾಲವನ್ನೂ ತೆಗೆದುಕೊಳ್ಳುವ ಹಾಗಿರಲಿಲ್ಲ. ಆದಷ್ಟು ಬೇಗ ಓಡಿಬರಬೇಕೆಂದು ಮಹಾಬಲರಾಯರಿಗೆ ಶಂಕರ್ ಸಿಂಗ್ ತಾಕೀತು ಮಾಡಿದ್ದರು. ಅವರು ಓಡಿಬರತೊಡಗಿದರು. ಅವರ ಪಂಚೆ ಮುಳ್ಳಿಗೆ ಸಿಕ್ಕಿಹಾಕಿಕೊಂಡಿತು. ಶಂಕರ್ ಸಿಂಗ್ ಅದನ್ನು ಕಿತ್ತುಕೊಂಡು ಬಾ ಎಂದು ಕೂಗುತ್ತಲೇ ಇದ್ದರು.<br /> <br /> ವಿಧಿಯಿಲ್ಲದೆ ಮಹಾಬಲರಾಯರು ತಮ್ಮ ಪಂಚೆಯನ್ನು ಕಿತ್ತುಕೊಂಡು ಎದ್ದೆನೋ ಬಿದ್ದೆನೋ ಎಂಬಂತೆ ಓಡಿಬಂದರು. ಚಿತ್ರದಲ್ಲೂ ಆ ದೃಶ್ಯ ಹಾಗೆಯೇ ಮೂಡಿಬಂತು. ಅವರ ಪಂಚೆ ಸಿಕ್ಕಿಹಾಕಿಕೊಂಡಿದ್ದನ್ನು ಕಂಡ ಜನ ಹಿಂದೆ ದೆವ್ವ ಬರುತ್ತಾ ಇರುವ ದೃಶ್ಯ ಅದಾದ್ದರಿಂದ ತುಂಬಾ ಸಹಜವಾಗಿದೆ ಎಂದು ಮೆಚ್ಚಿಕೊಂಡರು. <br /> <br /> `ಎಂಥ ನಿರ್ದೇಶಕ. ಸಿಂಬಾಲಿಕ್ ಆಗಿದೆ. ವಾಟ್ ಎ ಡೈರೆಕ್ಟೋರಿಯಲ್ ಟಚ್~ ಎಂದು ಉದ್ಗರಿಸಿದರು. ಇದನ್ನು ಕಂಡು ಶಂಕರ್ ಸಿಂಗ್ಗೆ ಮೊದಲು ನಗು ಬಂದಿತಂತೆ. <br /> ನನಗೆ ಖುದ್ದು ಶಂಕರ್ ಸಿಂಗ್ ಈ ಘಟನೆಯನ್ನು ಹೇಳಿಕೊಂಡಿದ್ದರು. <br /> <br /> ಶಂಕರ್ ಸಿಂಗ್ ಅವರ ಮಗ ರಾಜೇಂದ್ರ ಸಿಂಗ್ ನಾನು ಮರೆಯಲಾಗದ ಇನ್ನೊಬ್ಬ ಸಜ್ಜನ. ಅವನು ನಿರ್ದೇಶಿಸಿದ `ಪಾತಾಳಮೋಹಿನಿ~, `ಲಕ್ಷಾಧೀಶ್ವರ~, `ಧನಪಿಶಾಚಿ~ ಚಿತ್ರಗಳಲ್ಲಿ ನನಗೆ ಅವಕಾಶ ಕೊಟ್ಟ. `ಧನಪಿಶಾಚಿ~ಯ್ಲ್ಲಲಂತೂ ತುಂಬಾ ದೊಡ್ಡ ಪಾತ್ರವಿತ್ತು. <br /> <br /> ವಂದನಾ ಎಂಬ ಆ ಕಾಲಕ್ಕೆ ಹೆಸರಾದ ನಾಯಕಿಯ ಜೊತೆ ಹಾಸ್ಯ ಪಾತ್ರಧಾರಿಯಾದ ನನಗೆ ಒಂದು ಹಾಡಿತ್ತು. ಅದು ನನ್ನ ಪಾಲಿಗೆ ಆಗ ಹೆಮ್ಮೆಯ ವಿಷಯ. ಆ ಹಾಡಲ್ಲಿ ವಂದನಾ ಹೇಳುತ್ತಾಳೆ: `ನಿನಗೇನಿದೆ ಪರ್ಸನಾಲಿಟಿ. ಕುಳ್ಳ~. <br /> <br /> ಅದಕ್ಕೆ ನಾನು ಒಂದು ಹಾಡು ಹೇಳುತ್ತೇನೆ: `ಕುಳ್ಳ ನಾನಾಗಿದ್ದರೆ ಏನಾಯ್ತೆ/ ಒಳ್ಳೆ ಮನಸು ನನಗೈತೆ/ ನಾ ಕಳ್ಳನಲ್ಲ ಸುಳ್ಳನಲ್ಲ/ ಗುಳ್ಳೆ ನರಿಯ ಬುದ್ಧಿಯಿಲ್ಲ/ ಒಳ್ಳೆ ವಂಶ ನಮ್ಮದೆಲ್ಲ...~. ನನ್ನ ಮಾವ ಹುಣಸೂರು ಕೃಷ್ಣಮೂರ್ತಿ ನನಗಾಗಿಯೇ ಬರೆದ ಹಾಡದು. ಬಹುಶಃ ನನ್ನ ತಲೆಯಲ್ಲಿ ಕುಳ್ಳ ಎಂಬ ಧ್ವನಿ ಮೊದಲು ಮೂಡಿದ್ದೇ ಆಗ. ಮುಂದೆ ನಾನು `ಕರ್ನಾಟಕ ಕುಳ್ಳ~ ಎನಿಸಿಕೊಳ್ಳಲು ಅದೇ ಮೊದಲ ಮೆಟ್ಟಿಲಾಗಿತ್ತೋ ಏನೋ.<br /> <br /> ರಾಜೇಂದ್ರ ಸಿಂಗ್ ಬಾಬು ನನಗೆ ಬಹಳ ಹತ್ತಿರದ ಹುಡುಗ. ಕನ್ನಡ ಚಿತ್ರರಂಗದಲ್ಲಿ ಅವನು ತನ್ನದೇ ಆದ ಸ್ಥಾನ ಪಡೆದ. ನಾನು, ವಿಷ್ಣುವರ್ಧನ್ 1985-86ರಲ್ಲಿ ಜಗಳವಾಡಿದಾಗ, ಅವನು ವಿಮಾನ ನಿಲ್ದಾಣದಲ್ಲಿ ಸಿಕ್ಕಿದ. ಒಂದು ಕಡೆ ನಾನು ಬಂದಿಳಿದೆ. ಇನ್ನೊಂದು ಕಡೆ ವಿಷ್ಣು, ಬಾಬು ಇಳಿದರು. <br /> <br /> ನನ್ನ ಜೊತೆ ಅಲ್ಲಿಯೇ ಬಾಬು ಚರ್ಚೆಯಲ್ಲಿ ತೊಡಗಿದ. `ನೀವಿಬ್ಬರೂ ಜಗಳ ಆಡಬಾರದು. ಮತ್ತೆ ಸೇರಿ ಸಿನಿಮಾ ಮಾಡಿ. ಇಂಡಸ್ಟ್ರಿಗೆ ಒಳ್ಳೆಯದಾಗುತ್ತೆ. ನೀವಿಬ್ಬರೂ ಟಾಪ್ ಆಗಿ ಸೇರಿದ್ದೀರಿ. ಯಾಕ್ರೋ ಹೀಗೆ ಮಾಡುತ್ತೀರಿ?~ ಎಂದು ಪಾರ್ಲಿಮೆಂಟ್ನಲ್ಲಿ ಮಾತನಾಡುವಂತೆ ಮಾತನಾಡಿದ್ದ. <br /> <br /> ಅವನು ಇಂಡಸ್ಟ್ರಿ ಬಗ್ಗೆ ಯೋಚನೆ ಮಾಡಿದ್ದ. ಸ್ವಾರ್ಥವೇ ಹೆಚ್ಚಾಗಿದ್ದ ಉದ್ಯಮದಲ್ಲಿ ರಾಜೇಂದ್ರ ಸಿಂಗ್ ಬಾಬು ಅಂದು ಆಡಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿವೆ. ಆ ಬಾಬು ನಿರ್ದೇಶನದಲ್ಲಿ ನಾನು ಒಂದು ಸಿನಿಮಾ ನಿರ್ಮಿಸಲು ಆಗಲಿಲ್ಲವಲ್ಲ ಎಂಬ ನೋವು ನನಗಿದೆ. <br /> <br /> ನಾನು `ರವಿ ಅಣ್ಣ~ ಎಂದೇ ಕರೆಯುವ ಕೆ.ಎಸ್.ಎಲ್.ಸ್ವಾಮಿ ನನ್ನ ಬೆಳವಣಿಗೆಗೆ ಸಹಾಯಕನಾದ ಗಾಡ್ ಫಾದರ್. `ತೂಗುದೀಪ~ ಎಂಬ ಸಿನಿಮಾ ಶುರುಮಾಡಿದ್ದ ಅವರಿಗೆ ನನ್ನ ಕಂಡರೆ ಬಲು ಪ್ರೀತಿ. `ಲಗ್ನಪತ್ರಿಕೆ~ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟರು. ಸಿದ್ದಲಿಂಗಯ್ಯ ಆ ಚಿತ್ರದ ಸಹಾಯಕ ನಿರ್ದೇಶಕ.<br /> <br /> ಅವರನ್ನು ಸಿದ್ದಲಿಂಗಣ್ಣ ಎಂದೇ ನಾನು ಕರೆಯುತ್ತಿದ್ದೆ. `ನಾನು ಇನ್ನೊಂದು ಸಿನಿಮಾ ಮಾಡಿದರೆ ನೀನೇ ಅದರ ನಿರ್ದೇಶಕ~ ಎಂದು ಅವನಿಗೆ ಲಗ್ನಪತ್ರಿಕೆ ಚಿತ್ರೀಕರಣದ ಸಂದರ್ಭದಲ್ಲಿಯೇ ಒಂದು ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದೆ. ಮುಂದೆ ಅದೇ ಸಿದ್ದಲಿಂಗಯ್ಯ ಕನ್ನಡ ಚಿತ್ರರಂಗದ ಮಹತ್ವದ ನಿರ್ದೇಶಕರಾದರು. <br /> <br /> ರವಿ ಅಣ್ಣ ನನಗೆ ರಾಜ್ಕುಮಾರ್ ಜೊತೆ ನಟಿಸುವ ಅವಕಾಶಗಳನ್ನು ಕಲ್ಪಿಸಿದರು. ರಾಜಣ್ಣ ಅಭಿನಯಿಸಿದ ನೂರನೇ ಚಿತ್ರ `ಭಾಗ್ಯದ ಬಾಗಿಲು~. ಅದರಲ್ಲಿ ನಾನೂ ನಟಿಸಿದ್ದೇನೆಂಬುದು ಹೆಮ್ಮೆಯ ವಿಷಯ. `ಮಂಕುದಿಣ್ಣೆ~, `ಅರಿಶಿನ ಕುಂಕುಮ~, `ಕೃಷ್ಣ ರುಕ್ಮಿಣಿ~ ಎಲ್ಲಾ ಚಿತ್ರಗಳಲ್ಲೂ ನಾನು ರಾಜಣ್ಣನವರ ಜೊತೆ ನಟಿಸಿದ್ದೆ.<br /> <br /> ನಾನು, ರಾಜಣ್ಣ ಒಳ್ಳೆಯ ಸ್ನೇಹಿತರಾಗಿದ್ದೆವು. ಊಟ ಮಾಡುವಾಗ, ವಾಕ್ ಮಾಡುವಾಗ ನನ್ನನ್ನು ಕರೆದು, ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ಒಡನಾಟದ ಕ್ಷಣಗಳು ಈಗಲೂ ಕಣ್ಣಿಗೆ ಕಟ್ಟಿದಂತಿವೆ.<br /> <br /> ಅವರು ನನಗೆ ಚೆನ್ನಾಗಿ ಪರಿಚಿತರಾಗಿದ್ದೇ `ರಾಜಣ್ಣ ನನಗೊಂದು ಕಾಲ್ಷೀಟ್ ಕೊಡಿ~ ಎಂದು ದುಂಬಾಲುಬೀಳತೊಡಗಿದೆ. `ನನ್ನನ್ನ ಎತ್ತಿಕೊಳ್ಳೋಕೆ ಆಗುತ್ತಾ ನಿಮಗೆ?~ ಅಂತ ಅವರು ತಮಾಷೆ ಮಾಡುತ್ತಿದ್ದರು. `ನೀವು ಕಾಲ್ಷೀಟ್ ಕೊಡಿ. ಇಡೀ ವಾಹಿನಿ ಸ್ಟುಡಿಯೋದಲ್ಲಿ ಹೊತ್ತುಕೊಂಡು ತಿರುಗುತ್ತೇನೆ~ ಎಂದು ನಾನು ನನ್ನ ಬಯಕೆ ಹೇಳಿಕೊಳ್ಳುತ್ತಿದ್ದೆ. <br /> <br /> ರಾಜ್ಕುಮಾರ್ ಸಹೋದರ ವರದಪ್ಪನವರು ಸಿದ್ದಲಿಂಗಣ್ಣನಿಗೆ ಹತ್ತಿರವಾಗಿದ್ದರು. `ಹೇಗಾದರೂ ಮಾಡಿ ವರದಪ್ಪನವರನ್ನು ಒಪ್ಪಿಸಿ ರಾಜಣ್ಣನ ಕಾಲ್ಷೀಟ್ ಗಿಟ್ಟಿಸು. ನೀನೇ ನಿರ್ದೇಶಕ. ಸಿನಿಮಾ ಮಾಡೋಣ~ ಅಂತ ಸಿದ್ದಲಿಂಗಣ್ಣನಿಗೆ ನಾನು ಆಗಾಗ ಜಾಕ್ ಹಾಕುತ್ತಲೇ ಇದ್ದೆ. <br /> <br /> ಅದೇ ಕಾಲದಲ್ಲಿ ನಮ್ಮ ಮಾವನ ಸ್ನೇಹಿತ ಹಿರೇಮಠ್ ಎಂಬುವರು ಬಂದರು. ನಾಟಕಗಳಲ್ಲಿ ಅಭಿನಯಿಸಲು ನನಗೆ ಬುಲಾವು ಕೊಟ್ಟರು. ಮಾವನಿಗೆ ಅವರು ತುಂಬಾ ಬೇಕಾದವರಾದ್ದರಿಂದ ತಳ್ಳಿಹಾಕುವಂತಿರಲಿಲ್ಲ. `ಹೋಗು, ನಾಟಕದಲ್ಲಿ ಪಾರ್ಟ್ ಮಾಡು~ ಎಂದು ಮಾವ ತಾಕೀತು ಮಾಡಿದರು.<br /> <br /> ಆ ಕಾಲದಲ್ಲಿ ಒಂದು ನಾಟಕದಲ್ಲಿ ಅಭಿನಯಿಸಿದರೆ ನನಗೆ ಮೂರು ಸಾವಿರ ರೂಪಾಯಿ ಸಂಭಾವನೆ ಕೊಡುತ್ತಿದ್ದರು. ಹುಬ್ಬಳ್ಳಿಯಲ್ಲಿ ನಾಟಕ ಆಡಲು ಹೋದೆವು. ಎದುರಾಳಿ ನಾಟಕದ ಕಂಪೆನಿಯವರು ನರಸಿಂಹ ರಾಜು ಅವರನ್ನು ಕರೆದುಕೊಂಡು ಬಂದಿದ್ದರು. <br /> <br /> ಅದಕ್ಕೇ ನನ್ನನ್ನು ಇವರು ಕರೆದುಕೊಂಡು ಹೋದದ್ದು ಅಂತ ಅಲ್ಲಿ ಗೊತ್ತಾಯಿತು. ನಾನು, ನರಸಿಂಹರಾಜಣ್ಣ ಬೇರೆ ಬೇರೆ ಕಂಪೆನಿಗಳಲ್ಲಿದ್ದರೂ ಒಂದೇ ಹೋಟೆಲ್ನ ಪಕ್ಕ ಪಕ್ಕದ ರೂಮ್ನಲ್ಲಿ ಇಳಿದುಕೊಂಡಿದ್ದೆವು. ಇಬ್ಬರೂ ರಾತ್ರಿ ಹೊತ್ತು ಹರಟೆ ಹೊಡೆಯುತ್ತಿದ್ದೆವು. <br /> <br /> ನಮ್ಮಿಬ್ಬರ ನಡುವೆ ಯಾವತ್ತೂ ಮನಸ್ತಾಪ ಬರಲಿಲ್ಲ. ಅವರೂ ನನ್ನ ಬೆನ್ನುತಟ್ಟಿದರು. ಪ್ರೊಫೆಸರ್ ಹುಚ್ಚುರಾಯ ಸಿನಿಮಾ ನಿರ್ಮಿಸಿದಾಗ ಅವರು ಚಿತ್ರೀಕರಿಸಿದ ಮುಹೂರ್ತದ ಶಾಟ್ನಲ್ಲಿ ನಾನು ವೈಶಾಲಿ ನಟಿಸಿದ್ದೆವು. <br /> <br /> ಹಾಗೆ ನಾನು ರಾಯಚೂರಲ್ಲಿ ನಾಟಕ ಆಡುತ್ತಿದ್ದ ಸಂದರ್ಭದಲ್ಲಿ ನನ್ನ ಮೊದಲ ಮಗ ಸಂತೋಷ್ ಹುಟ್ಟಿದ. ಅದು ಏಪ್ರಿಲ್ ತಿಂಗಳು. ಎರಡು ದಿನಗಳಾದ ಮೇಲೆ ಮದ್ರಾಸ್ಗೆ ಹೋದೆ. ರಾಜ್ಕುಮಾರ್ ಕಾಲ್ಷೀಟ್ ಸಿಕ್ಕಿದೆ ಎಂಬ ಸಿಹಿ ಸುದ್ದಿ ಕಿವಿಮೇಲೆ ಬಿತ್ತು. ನನಗೆ ಡಬ್ಬಲ್ ಸಂತೋಷ. <br /> <br /> ತಕ್ಷಣ ಮಣಿರತ್ನಂ ತಂದೆ ರತ್ನಂ ಅಯ್ಯರ್ ಬಳಿಗೆ ಹೋದೆ. ಅವರು ಚಿತ್ರಕ್ಕೆ ಫೈನಾನ್ಸ್ ಮಾಡಿದರು. ನ್ಯೂಟೌನ್ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲು ತೀರ್ಮಾನಿಸಿದೆವು. ಭಾರತಿ ಚಿತ್ರದ ನಾಯಕಿ.<br /> <br /> ಆ ಕಾಲದಲ್ಲಿ ರಾಜ್ಕುಮಾರ್-ಲೀಲಾವತಿ ಚರಿಷ್ಮಾ ಇದ್ದಂಥ ಜೋಡಿ. ನಂತರದ ಹೆಮ್ಮೆಯ ಜೋಡಿ ಎಂದರೆ ರಾಜ್ಕುಮಾರ್-ಭಾರತಿ. `ಎಮ್ಮೆ ತಮ್ಮಣ್ಣ~, `ಬೀದಿ ಬಸವಣ್ಣ~, `ಚೂರಿ ಚಿಕ್ಕಣ್ಣ~ ಎಲ್ಲವೂ ಹಿಟ್ ಆಗಿದ್ದ ಕಾಲವದು. ಹಾಗಾಗಿ ನನ್ನ ಚಿತ್ರದ ಶೀರ್ಷಿಕೆಯಲ್ಲಿ `ಅಣ್ಣ~ ಎಂಬುದು ಇರಲೇಬೇಕೆಂದು ತೀರ್ಮಾನಿಸಿದ್ದೆ. <br /> <br /> `ಮಣ್ಣಿನ ಮಗ~, `ಅಣ್ಣತಂಗಿ~ಯಲ್ಲಿ ರಾಜಣ್ಣ ಹಳ್ಳಿಯವನ ಪಾತ್ರ ಮಾಡಿದ್ದರು. ಅವರು ಹಳ್ಳಿಯವನ ಕಾಮಿಡಿ ಪಾತ್ರ ಮಾಡಿದರೆ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎನಿಸಿತು. ಅದಕ್ಕೇ ನನ್ನ ಚಿತ್ರದ ನಾಯಕನೂ ಹಳ್ಳಿಯವನೇ ಎಂಬುದೂ ನಿಕ್ಕಿಯಾಯಿತು. <br /> <br /> ಐದು ರೈಟರ್ಗಳು ಕೂತು ಕತೆಗಳನ್ನು ಬರೆದರು. ಒಂದು ಕತೆಯಲ್ಲಿ ನಾಯಕನ ಕಾಲು ಮುರಿದುಹೋಗುತ್ತದೆ. ಆ ಸಿನಿಮಾ ಮಾಡಿದರೆ ಚಿತ್ರ ತೋಪಾಗುತ್ತದೆ ಎಂದು ಹೇಳಿದ ಚಿ.ಉದಯಶಂಕರ್ ಅವರನ್ನು ನಾನು ಸ್ಮರಿಸಲೇಬೇಕು.<br /> <br /> ಅವರು ಆ ಕತೆ ತಿರಸ್ಕರಿಸಿದ ಮೇಲೆ ಬಾಸುಮಣಿ ಎಂಬ ರೈಟರನ್ನು ಕರೆದುಕೊಂಡು ಬಂದೆವು. ಹಳ್ಳಿಯವನು ಮೇಯರ್ ಆಗುತ್ತಾನೆಂಬ ಸಣ್ಣ ಸಾಲು ಕ್ಯಾಲೆಂಡರ್ ಒಂದರಲ್ಲಿ ಇತ್ತು. ಆ ಲೈನ್ ಇಟ್ಟುಕೊಂಡೇ ನಾವು ಕತೆ ಬೆಳೆಸಿದೆವು. `ಮೇಯರ್ ಮುತ್ತಣ್ಣ~ ತಯಾರಾಯಿತು. ಸಿದ್ದಲಿಂಗಣ್ಣ ನಿರ್ದೇಶಕನಾದ.<br /> <br /> ಚಿತ್ರದ ಬಿಡುಗಡೆಯ ದಿನ ಗೊತ್ತು ಮಾಡಿದ್ದೆ. ರತ್ನಂ ಅಯ್ಯರ್ ಸಿನಿಮಾ ಲೆಂಗ್ತ್ ಸಾಲದು ಎಂದು ಕೊನೆಕೊನೆಯಲ್ಲಿ ಒಂದಿಷ್ಟು ಹಣ ಕೊಡಲಿಲ್ಲ. `ಕೃಷ್ಣದೇವರಾಯ~ ಸಿನಿಮಾ ಚಿತ್ರೀಕರಣಕ್ಕೆ 45 ದಿನ ರಾಜಣ್ಣ ಜೈಪುರಕ್ಕೆ ಹೊರಡಬೇಕಿತ್ತು. ಹಾಗಾಗಿ ನಾನು ಅನಿವಾರ್ಯವಾಗಿ ಮುದ್ದುಕೃಷ್ಣ ಎಂಬುವರಿಗೆ ಸಿನಿಮಾ ಹಕ್ಕುಗಳನ್ನು ಮಾರಿಬಿಟ್ಟೆ; ಕೇವಲ 40-50 ಸಾವಿರ ರೂಪಾಯಿ ಲಾಭಕ್ಕೆ. <br /> <br /> ಒಂದು ಲಕ್ಷ ರೂಪಾಯಿಯಲ್ಲಿ ತೆಗೆದ ಚಿತ್ರ `ಮೇಯರ್ ಮುತ್ತಣ್ಣ~. ರಾಜಣ್ಣ ಪಡೆದದ್ದು ಕೇವಲ ಒಂಬತ್ತು ಹತ್ತು ಸಾವಿರ ರೂ. ಸಂಭಾವನೆ. ನಾಯಕನ ಕಾಲ್ಷೀಟ್ನ ಐದು ಪಟ್ಟು ಲಾಭ ಆಗ ಬರುತ್ತಿತ್ತು. ಈಗ ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಕಾಲ ಬದಲಾಗಿದೆ. <br /> <br /> <strong>ಮುಂದಿನ ವಾರ: ಮತ್ತೊಂದು ಸಿನಿಮಾ ಮತ್ತೊಂದು ಹೆಜ್ಜೆ</strong><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>