‘ಸಚಿವನಾದ ಬಳಿಕ ನನಗೆ ಮುಖ್ಯಮಂತ್ರಿಯವರು ಕೊಡಗು ಜಿಲ್ಲೆಯ ಉಸ್ತುವಾರಿಯನ್ನೂ ವಹಿಸಿದರು. ವಾರದಲ್ಲಿ ಮೂರು ದಿನ ಆ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೆ. ಕಳೆದ ಬಾರಿಯೂ ನಾನು ಇಲ್ಲಿ ಸ್ಪರ್ಧಿಸಿಲ್ಲ. ನಾಲ್ಕು ವರ್ಷಗಳಿಂದ ಇಲ್ಲಿನ ಸ್ಥಳೀಯ ನಾಯಕರ ಹಾಗೂ ಕಾರ್ಯಕರ್ತರ ನೇರ ಸಂಪರ್ಕ ಇರಲಿಲ್ಲ. ಹಾಗಾಗಿ, ಅವರೆಲ್ಲರ ವಿಶ್ವಾಸ ಗಳಿಸಿ ಮುಂದುವರಿಯಬೇಕಿದೆ’ ಎಂದರು.