ಅಪಾರ ಜನ ಏಕಕಂಠದಿಂದ ಜಯಘೋಷ ಮಾಡುವಾಗ ಗಾಂಧೀಜಿ ಗಾಡಿಯಲ್ಲಿ ಅದರ ಬಗ್ಗೆ ಲಕ್ಷ್ಯ ಕೊಡದೆ ಆರಾಮವಾಗಿ ನಿದ್ರೆಗೆ ಜಾರಿದ್ದರು. ಅವರನ್ನು ಯಾರೊ ಒಬ್ಬರು ಎಬ್ಬಿಸಿ, ಏನು ಮಹಾತ್ಮಾಜಿ, ಎಲ್ಲರೂ ಜಯಘೋಷ ಮಾಡುವಾಗ ನೀವು ಆರಾಮ ಮಲಗಿದ್ದೀರಿ ಎಂದರು. ಆಗ ಗಾಂಧಿ ಅವರು ಜಯಘೋಷ ಮಾಡುವುದು ನನಗಲ್ಲ, ನನ್ನಲ್ಲಿ ಇದ್ದ ಇನ್ನೊಬ್ಬ ಸದ್ಗುಣವೆಂಬ ಒಳಗಿನ ಗಾಂಧೀಜಿಗೆ ಎಂದರಂತೆ. ಇದು ಅಲ್ಲವೇ ಪೂಜೆಗೊಳ್ಳುವ ಗುಣ.