ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ 45 ದಿನಗಳವರೆಗೆ ಬೀಡುಬಿಟ್ಟಿದ್ದ ಆನೆಗಳು, ಭಾನುವಾರ ತಮ್ಮ ಶಿಬಿರಗಳಿಗೆ ಹೊರಟು ನಿಂತಿದ್ದವು. 12 ಆನೆಗಳ ಪೈಕಿ ಭಾನುವಾರ 9 ಆನೆಗಳನ್ನು ಲಾರಿಗೆ ಹತ್ತಿಸಲಾಗುತ್ತಿತ್ತು. ಹೊರಡುವ ಸಮಯದಲ್ಲಿ ಅರ್ಜುನ ಆನೆಯ ಕಣ್ಣಲ್ಲಿ ನೀರು ಸುರಿಯುತ್ತಿದ್ದುದು ಸ್ಥಳದಲ್ಲಿದ್ದವರ ಮನಕಲಕಿತು.