<p><strong>ಧರ್ಮಾಯ ಯಶಸೇsರ್ಥಾಯ ಕಾಮಾಯ ಸ್ವಜನಾಯ ಚ ।</strong></p>.<p><strong>ಪಂಚಧಾ ವಿಭಜನ್ ವಿತ್ತಮಿಹಾಮುತ್ರ ಚ ಮೋದತೇ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮನುಷ್ಯನು ತನ್ನ ಹಣವನ್ನು ಧರ್ಮಕ್ಕೆ, ಕೀರ್ತಿಗೆ, ಅರ್ಥಕ್ಕೆ, ಕಾಮಕ್ಕೆ ಮತ್ತು ಸ್ವಜನರಿಗೆ – ಹೀಗೆ ಐದು ರೀತಿಯಲ್ಲಿ ಖರ್ಚುಮಾಡುವವನು ಈ ಲೋಕದಲ್ಲಿ ಮಾತ್ರವಲ್ಲ, ಪರಲೋಕದಲ್ಲಿಯೂ ಸುಖವನ್ನು ಪಡೆಯುತ್ತಾನೆ.’</p>.<p>ನಾವು ದುಡ್ಡನ್ನು ಸಂಪಾದಿಸುವುದಾದೂ ಏಕೆ? ಖರ್ಚುಮಾಡಲು ತಾನೆ? ನಮ್ಮ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ಈ ಸುಭಾಷಿತ ಹೇಳುತ್ತಿದೆ.</p>.<p>ನಮ್ಮಲ್ಲಿ ಪುರುಷಾರ್ಥಗಳ ಕಲ್ಪನೆ ಇದೆ. ಜೀವನದಲ್ಲಿ ನಮಗೆ ಏನೆಲ್ಲ ಆವಶ್ಯಕತೆಗಳು ಇವೆಯೊ ಅವೆಲ್ಲವನ್ನೂ ಪೂರೈಸಿಕೊಳ್ಳಲು ಇರುವ ದಾರಿಗಳೇ ಪುರುಷಾರ್ಥಗಳು. ಇವುಗಳಲ್ಲಿ ನಮ್ಮ ಆಸೆಗಳೂ ಇವೆ, ಅನಿವಾರ್ಯಗಳೂ ಇವೆ ಎಂಬುದನ್ನು ಗಮನಿಸಿಬೇಕು; ಪುರುಷಾರ್ಥಗಳಲ್ಲಿ ಎರಡೂ ಸೇರಿಕೊಂಡಿದೆ.</p>.<p>ಧರ್ಮಕ್ಕೆ ಹಣವನ್ನು ಖರ್ಚು ಮಾಡಬೇಕು. ಧರ್ಮ ಎಂದರೆ ನಮ್ಮ ಕರ್ತವ್ಯಗಳ ನಿರ್ವಹಣೆ; ಅದೂ ಸರಿಯಾದ ರೀತಿಯಲ್ಲಿ ನಿರ್ವಹಣೆ. ನಮ್ಮ ಕುಟುಂಬದ ನಿರ್ವಹಣೆ, ನಮ್ಮ ಪಾಲಿನ ಹೊಣೆಗಾರಿಕೆಗಳ ಪಾಲನೆ, ಸಮಾಜದ ಪೋಷಣೆ, ಗುರು–ಹಿರಿಯರ ತೋಷಣೆ – ಇವೆಲ್ಲವೂ ಧಾರ್ಮಿಕತೆಯ ವ್ಯಾಪ್ತಿಯಲ್ಲೇ ಬರುತ್ತವೆ.</p>.<p>ಕೀರ್ತಿಗಾಗಿ ದುಡ್ಡನ್ನು ಖರ್ಚುಮಾಡುವುದು ಸರಿ ಎಂಬುದು ಸುಭಾಷಿತದ ಇಂಗಿತ. ನಾಲ್ಕು ಜನರಿಗೆ ಉಪಯೋಗವಾಗುವಂಥ ಕೆಲಸ ಮಾಡಿದರೆ ಆಗ ನಮ್ಮ ಹೆಸರು ಹತ್ತು ಜನರ ನಾಲಗೆಯ ಮೇಲೆ ನಲಿದಾಡುತ್ತದೆ. ಇದೇ ಕೀರ್ತಿ. ಜನರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುವುದಲ್ಲ; ನಮ್ಮಿಂದಲೂ ಅವರಿಗೆ ಉಪಯೋಗ ಆಗಬೇಕು, ಅಲ್ಲವೆ?</p>.<p>ದುಡ್ಡನ್ನು ಸಂಪಾದಿಸಲು ಒದಗುವ ದಾರಿ ಎಂದರೆ ಅದು ಕೂಡ ದುಡ್ಡೇ! ಹೀಗಾಗಿಯೇ ಅರ್ಥಕ್ಕೆ ಹಣವನ್ನು ಖರ್ಚುಮಾಡುವಂತೆ ಸುಭಾಷಿತ ಹೇಳುತ್ತಿದೆ. ಅರ್ಥ ಎಂದರೆ ಜೀವನದ ಸುಖಕ್ಕೆ ಬೇಕಾದ ಸಾಧನಗಳೂ ಹೌದು.</p>.<p>ಕಾಮ ಎನ್ನುವುದು ನಮ್ಮ ಬಯಕೆಗಳು. ಅವುಗಳನ್ನು ಪೂರೈಸಿಕೊಳ್ಳಲು ಹಣವನ್ನು ಖರ್ಚುಮಾಡಲೇ ಬೇಕೆನ್ನಿ! ನಮ್ಮ ಬಯಕೆಗಳು ಎಂದರೆ ಅದು ಎಂಥ ಬಯಕೆಗಳೂ ಆಗಿರಬಹುದು ಎಂದಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಪುರುಷಾರ್ಥವಾಗಿರುವ ಬಯಕೆಗಳೇ ದಿಟವಾದ ಬಯಕೆಗಳು. ಎಂದರೆ ಧರ್ಮಕ್ಕೆ ವಿರುದ್ಧವಲ್ಲದವು; ನಮಗೆ ಆವಶ್ಯಕವಾಗಿರುವ, ಆದರೆ ನಮಗೂ ಯಾರಿಗೂ ಹಾನಿಯಾಗದಿರುವಂಥವು, ಅವೇ ದಿಟವಾದ ಬಯಕೆಗಳು. ಅವುಗಳನ್ನು ನೆರವೇರಿಸಿಕೊಳ್ಳಲು ಹಣವನ್ನು ಖರ್ಚುಮಾಡುವುದು ಕ್ಷೇಮಕರ ಮತ್ತು ಲಾಭಕರ.</p>.<p>ನಮ್ಮ ಸಂಪಾದನೆಯನ್ನು ನಮಗಷ್ಟೆ ವಿನಿಯೋಗಿಸಿದರೆ ಅದರಿಂದ ಯಾವ ಸುಖ? ನಮ್ಮ ಬಂಧುಗಳಿಗೆ, ಸ್ನೇಹಿತರಿಗೆ ನಮ್ಮ ಹಣ ಖರ್ಚಾಗಬೇಕು; ಅದರಲ್ಲಿಯೇ ನಮ್ಮ ನಿಜವಾದ ಸುಖ ಕೂಡ ಇರುವಂಥದ್ದು. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು.</p>.<p>ಹಣವನ್ನು ಸಂಪಾದಿಸುವುದು ತಪ್ಪು – ಎಂದು ನಮ್ಮ ಪರಂಪರೆಯಲ್ಲಿ ಹೇಳಿಲ್ಲ; ಅದನ್ನು ಚೆನ್ನಾಗಿಯೇ ಸಂಪಾದಿಸಬೇಕು ಎಂದೇ ಹೇಳಿರುವುದು. ಆದರೆ ಅದನ್ನು ಸರಿಯಾದ ದಾರಿಯಲ್ಲಿ ಸಂಪಾದಿಸಬೇಕು ಮತ್ತು ಸರಿಯಾದ ದಾರಿಯಲ್ಲಿ ಖರ್ಚುಮಾಡಬೇಕು – ಎಂದು ಹೇಳುವುದನ್ನು ಮಾತ್ರ ಅದು ಮರೆತಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರ್ಮಾಯ ಯಶಸೇsರ್ಥಾಯ ಕಾಮಾಯ ಸ್ವಜನಾಯ ಚ ।</strong></p>.<p><strong>ಪಂಚಧಾ ವಿಭಜನ್ ವಿತ್ತಮಿಹಾಮುತ್ರ ಚ ಮೋದತೇ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮನುಷ್ಯನು ತನ್ನ ಹಣವನ್ನು ಧರ್ಮಕ್ಕೆ, ಕೀರ್ತಿಗೆ, ಅರ್ಥಕ್ಕೆ, ಕಾಮಕ್ಕೆ ಮತ್ತು ಸ್ವಜನರಿಗೆ – ಹೀಗೆ ಐದು ರೀತಿಯಲ್ಲಿ ಖರ್ಚುಮಾಡುವವನು ಈ ಲೋಕದಲ್ಲಿ ಮಾತ್ರವಲ್ಲ, ಪರಲೋಕದಲ್ಲಿಯೂ ಸುಖವನ್ನು ಪಡೆಯುತ್ತಾನೆ.’</p>.<p>ನಾವು ದುಡ್ಡನ್ನು ಸಂಪಾದಿಸುವುದಾದೂ ಏಕೆ? ಖರ್ಚುಮಾಡಲು ತಾನೆ? ನಮ್ಮ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ಈ ಸುಭಾಷಿತ ಹೇಳುತ್ತಿದೆ.</p>.<p>ನಮ್ಮಲ್ಲಿ ಪುರುಷಾರ್ಥಗಳ ಕಲ್ಪನೆ ಇದೆ. ಜೀವನದಲ್ಲಿ ನಮಗೆ ಏನೆಲ್ಲ ಆವಶ್ಯಕತೆಗಳು ಇವೆಯೊ ಅವೆಲ್ಲವನ್ನೂ ಪೂರೈಸಿಕೊಳ್ಳಲು ಇರುವ ದಾರಿಗಳೇ ಪುರುಷಾರ್ಥಗಳು. ಇವುಗಳಲ್ಲಿ ನಮ್ಮ ಆಸೆಗಳೂ ಇವೆ, ಅನಿವಾರ್ಯಗಳೂ ಇವೆ ಎಂಬುದನ್ನು ಗಮನಿಸಿಬೇಕು; ಪುರುಷಾರ್ಥಗಳಲ್ಲಿ ಎರಡೂ ಸೇರಿಕೊಂಡಿದೆ.</p>.<p>ಧರ್ಮಕ್ಕೆ ಹಣವನ್ನು ಖರ್ಚು ಮಾಡಬೇಕು. ಧರ್ಮ ಎಂದರೆ ನಮ್ಮ ಕರ್ತವ್ಯಗಳ ನಿರ್ವಹಣೆ; ಅದೂ ಸರಿಯಾದ ರೀತಿಯಲ್ಲಿ ನಿರ್ವಹಣೆ. ನಮ್ಮ ಕುಟುಂಬದ ನಿರ್ವಹಣೆ, ನಮ್ಮ ಪಾಲಿನ ಹೊಣೆಗಾರಿಕೆಗಳ ಪಾಲನೆ, ಸಮಾಜದ ಪೋಷಣೆ, ಗುರು–ಹಿರಿಯರ ತೋಷಣೆ – ಇವೆಲ್ಲವೂ ಧಾರ್ಮಿಕತೆಯ ವ್ಯಾಪ್ತಿಯಲ್ಲೇ ಬರುತ್ತವೆ.</p>.<p>ಕೀರ್ತಿಗಾಗಿ ದುಡ್ಡನ್ನು ಖರ್ಚುಮಾಡುವುದು ಸರಿ ಎಂಬುದು ಸುಭಾಷಿತದ ಇಂಗಿತ. ನಾಲ್ಕು ಜನರಿಗೆ ಉಪಯೋಗವಾಗುವಂಥ ಕೆಲಸ ಮಾಡಿದರೆ ಆಗ ನಮ್ಮ ಹೆಸರು ಹತ್ತು ಜನರ ನಾಲಗೆಯ ಮೇಲೆ ನಲಿದಾಡುತ್ತದೆ. ಇದೇ ಕೀರ್ತಿ. ಜನರಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳುವುದಲ್ಲ; ನಮ್ಮಿಂದಲೂ ಅವರಿಗೆ ಉಪಯೋಗ ಆಗಬೇಕು, ಅಲ್ಲವೆ?</p>.<p>ದುಡ್ಡನ್ನು ಸಂಪಾದಿಸಲು ಒದಗುವ ದಾರಿ ಎಂದರೆ ಅದು ಕೂಡ ದುಡ್ಡೇ! ಹೀಗಾಗಿಯೇ ಅರ್ಥಕ್ಕೆ ಹಣವನ್ನು ಖರ್ಚುಮಾಡುವಂತೆ ಸುಭಾಷಿತ ಹೇಳುತ್ತಿದೆ. ಅರ್ಥ ಎಂದರೆ ಜೀವನದ ಸುಖಕ್ಕೆ ಬೇಕಾದ ಸಾಧನಗಳೂ ಹೌದು.</p>.<p>ಕಾಮ ಎನ್ನುವುದು ನಮ್ಮ ಬಯಕೆಗಳು. ಅವುಗಳನ್ನು ಪೂರೈಸಿಕೊಳ್ಳಲು ಹಣವನ್ನು ಖರ್ಚುಮಾಡಲೇ ಬೇಕೆನ್ನಿ! ನಮ್ಮ ಬಯಕೆಗಳು ಎಂದರೆ ಅದು ಎಂಥ ಬಯಕೆಗಳೂ ಆಗಿರಬಹುದು ಎಂದಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಪುರುಷಾರ್ಥವಾಗಿರುವ ಬಯಕೆಗಳೇ ದಿಟವಾದ ಬಯಕೆಗಳು. ಎಂದರೆ ಧರ್ಮಕ್ಕೆ ವಿರುದ್ಧವಲ್ಲದವು; ನಮಗೆ ಆವಶ್ಯಕವಾಗಿರುವ, ಆದರೆ ನಮಗೂ ಯಾರಿಗೂ ಹಾನಿಯಾಗದಿರುವಂಥವು, ಅವೇ ದಿಟವಾದ ಬಯಕೆಗಳು. ಅವುಗಳನ್ನು ನೆರವೇರಿಸಿಕೊಳ್ಳಲು ಹಣವನ್ನು ಖರ್ಚುಮಾಡುವುದು ಕ್ಷೇಮಕರ ಮತ್ತು ಲಾಭಕರ.</p>.<p>ನಮ್ಮ ಸಂಪಾದನೆಯನ್ನು ನಮಗಷ್ಟೆ ವಿನಿಯೋಗಿಸಿದರೆ ಅದರಿಂದ ಯಾವ ಸುಖ? ನಮ್ಮ ಬಂಧುಗಳಿಗೆ, ಸ್ನೇಹಿತರಿಗೆ ನಮ್ಮ ಹಣ ಖರ್ಚಾಗಬೇಕು; ಅದರಲ್ಲಿಯೇ ನಮ್ಮ ನಿಜವಾದ ಸುಖ ಕೂಡ ಇರುವಂಥದ್ದು. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು.</p>.<p>ಹಣವನ್ನು ಸಂಪಾದಿಸುವುದು ತಪ್ಪು – ಎಂದು ನಮ್ಮ ಪರಂಪರೆಯಲ್ಲಿ ಹೇಳಿಲ್ಲ; ಅದನ್ನು ಚೆನ್ನಾಗಿಯೇ ಸಂಪಾದಿಸಬೇಕು ಎಂದೇ ಹೇಳಿರುವುದು. ಆದರೆ ಅದನ್ನು ಸರಿಯಾದ ದಾರಿಯಲ್ಲಿ ಸಂಪಾದಿಸಬೇಕು ಮತ್ತು ಸರಿಯಾದ ದಾರಿಯಲ್ಲಿ ಖರ್ಚುಮಾಡಬೇಕು – ಎಂದು ಹೇಳುವುದನ್ನು ಮಾತ್ರ ಅದು ಮರೆತಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>