ಸುಮಾರು ಎರಡು ವರ್ಷದ ಹಿಂದೆ ನಮಗೆ ಭಯದ ಸೂಚನೆಯಿತ್ತು, ನಮ್ಮ ದೇಶಕ್ಕೂ ಕೋವಿಡ್ ಬರಬಹುದು ಎಂಬ ಭಯ. ಹೌದು, ಕೋವಿಡ್ ನಮ್ಮಲ್ಲಿಗೂ ಬಂದೇಬಿಟ್ಟಿತು. ಆಗ ನಾವು ಏನು ಮಾಡಬೇಕು? ಭಯಪಡುತ್ತಲೇ ಇರಬೇಕಿತ್ತೆ? ಒಮ್ಮೆ ಕೋವಿಡ್ ಬಂದಮೇಲೆ ಅದನ್ನು ಎದುರಿಸುವುದು ಹೇಗೆ ಎಂದು ಯೋಚಿಸಿ, ಅದರಂತೆ ಕಾರ್ಯಪ್ರವೃತ್ತರಾಗಬೇಕೆ ವಿನಾ ಭಯ ಪಡುತ್ತ ಮೂಲೆ ಸೇರುವುದು ವಿವೇಕವಲ್ಲ. ನಮ್ಮ ದೇಶ ಧೈರ್ಯವಾಗಿಯೇ ಸಮಸ್ಯೆಯನ್ನು ಎದುರಿಸಿತು; ಅದು ಬೇರೆ ವಿಷಯ. ಇದು ನಾವು ಗಮನಿಸಬೇಕಾದ್ದು ಭಯವನ್ನು ಗೆಲ್ಲುವ ಬಗೆ.