<p>ನಿಜದೋಷಾವೃತಮನಸಾಮತಿಸುಂದರಮೇವ ಭಾತಿ ವಿಪರೀತಮ್ ।</p>.<p>ಪಶ್ಯತಿ ಪಿತ್ತೋಪಹತಃ ಶಶಿಶುಭ್ರಂ ಶಂಖಮಪಿ ಪೀತಮ್ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ದೋಷದಲ್ಲೇ ಮನಸ್ಸನ್ನು ಮುಳುಗಿಸಿರುವವರಿಗೆ ಅತಿಸುಂದರವಾದ ವಸ್ತುವೂ ವಿಕೃತವಾಗಿಯೇ ಕಾಣುತ್ತದೆ. ಇದು ಹೇಗೆಂದರೆ, ಚಂದ್ರನಂತೆಯೇ ಶುಭ್ರವಾಗಿರುವ ಶಂಖವೂ ಹಳದಿಯಾಗಿದೆ ಎಂದು ತಿಳಿಯುತ್ತಾನೆ, ಪಿತ್ತರೋಗಿ.’</p>.<p>ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲ ಹಳದಿ – ಎಂಬ ಮಾತಿದೆಯಷ್ಟೆ. ಅದರದ್ದೇ ಧ್ವನಿಯನ್ನು ಈ ಸುಭಾಷಿತದಲ್ಲೂ ಕಾಣಬಹುದು.</p>.<p>ದಿಟವಾದ ಸೌಂದರ್ಯವಾಗಲೀ ಕುರೂಪವಾಗಲೀ ಇರುವುದು ಎಲ್ಲಿ? ನಮ್ಮ ಮನಸ್ಸಿನಲ್ಲಿಯೇ ಹೌದು. ನಮ್ಮ ಮನಸ್ಸಿನಲ್ಲಿ ಬರಿಯ ಕೊಳೆಯೇ ತುಂಬಿಕೊಂಡಿದ್ದರೆ, ನಮಗೆ ಹೊರಗೆ ಕಾಣುವುದೆಲ್ಲವೂ ಕೊಳೆಯಾಗಿಯೇ ಕಾಣುತ್ತದೆ. ನಮ್ಮ ದೃಷ್ಟಿಯನ್ನು ಅನುಸರಿಸಿ ನಮ್ಮ ಜಗತ್ತು ನಮ್ಮ ಮುಂದೆ ಸೃಷ್ಟಿಯಾಗುತ್ತಿರುತ್ತದೆ.</p>.<p>ಇಂದು ಜಗತ್ತು ಹಲವು ವಿಧದ ಆತಂಕಗಳ ನಡುವೆ ಉಸಿರಾಡುತ್ತಿದೆ. ಮತಾಂಧತೆಯ ಅಟ್ಟಹಾಸ ನಿರಂತರವಾಗಿ ಹೆಚ್ಚಾಗುತ್ತಿದೆ. ನನ್ನ ಮತವೇ ಶ್ರೇಷ್ಠ, ಉಳಿದವರದ್ದು ಕನಿಷ್ಠ – ಎಂಬ ಧೋರಣೆಯೇ ಇದಕ್ಕೆ ಕಾರಣವಾಗಿರುವುದು. ಇಂಥ ಧೋರಣೆಯನ್ನೇ ಮನಸ್ಸಿನಲ್ಲಿರುವ ಕಸ ಎಂದು ಸುಭಾಷಿತ ಕರೆಯುತ್ತಿರುವುದು. ನಮ್ಮ ಮುಂದೆ ಇರುವ ಮನುಷ್ಯರು ಕೂಡ ನಮ್ಮಂತೆಯೇ ಮನುಷ್ಯರು; ಅವರಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ – ಎಂಬ ಭಾವನೆ ಯಾರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿರುತ್ತದೆಯೋ ಅಂಥವರು ಮಾತ್ರ ಜಗತ್ತಿನಲ್ಲಿ ಶಾಂತಿ–ನೆಮ್ಮದಿಗಳನ್ನು ಉಂಟುಮಾಡಬಲ್ಲರು. ಎಲ್ಲರೂ ಶತ್ರುಗಳು ಎಂಬ ಭಾವನೆಯನ್ನೇ ಮನಸ್ಸಿನಲ್ಲಿ ತುಂಬಿಕೊಂಡಿದ್ದರೆ ಆಗ ಜಗತ್ತು ನಮ್ಮ ಪಾಲಿಗೆ ನರಕವಾಗಿಯೇ ಕಾಣುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಿಜದೋಷಾವೃತಮನಸಾಮತಿಸುಂದರಮೇವ ಭಾತಿ ವಿಪರೀತಮ್ ।</p>.<p>ಪಶ್ಯತಿ ಪಿತ್ತೋಪಹತಃ ಶಶಿಶುಭ್ರಂ ಶಂಖಮಪಿ ಪೀತಮ್ ।।</p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ದೋಷದಲ್ಲೇ ಮನಸ್ಸನ್ನು ಮುಳುಗಿಸಿರುವವರಿಗೆ ಅತಿಸುಂದರವಾದ ವಸ್ತುವೂ ವಿಕೃತವಾಗಿಯೇ ಕಾಣುತ್ತದೆ. ಇದು ಹೇಗೆಂದರೆ, ಚಂದ್ರನಂತೆಯೇ ಶುಭ್ರವಾಗಿರುವ ಶಂಖವೂ ಹಳದಿಯಾಗಿದೆ ಎಂದು ತಿಳಿಯುತ್ತಾನೆ, ಪಿತ್ತರೋಗಿ.’</p>.<p>ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲ ಹಳದಿ – ಎಂಬ ಮಾತಿದೆಯಷ್ಟೆ. ಅದರದ್ದೇ ಧ್ವನಿಯನ್ನು ಈ ಸುಭಾಷಿತದಲ್ಲೂ ಕಾಣಬಹುದು.</p>.<p>ದಿಟವಾದ ಸೌಂದರ್ಯವಾಗಲೀ ಕುರೂಪವಾಗಲೀ ಇರುವುದು ಎಲ್ಲಿ? ನಮ್ಮ ಮನಸ್ಸಿನಲ್ಲಿಯೇ ಹೌದು. ನಮ್ಮ ಮನಸ್ಸಿನಲ್ಲಿ ಬರಿಯ ಕೊಳೆಯೇ ತುಂಬಿಕೊಂಡಿದ್ದರೆ, ನಮಗೆ ಹೊರಗೆ ಕಾಣುವುದೆಲ್ಲವೂ ಕೊಳೆಯಾಗಿಯೇ ಕಾಣುತ್ತದೆ. ನಮ್ಮ ದೃಷ್ಟಿಯನ್ನು ಅನುಸರಿಸಿ ನಮ್ಮ ಜಗತ್ತು ನಮ್ಮ ಮುಂದೆ ಸೃಷ್ಟಿಯಾಗುತ್ತಿರುತ್ತದೆ.</p>.<p>ಇಂದು ಜಗತ್ತು ಹಲವು ವಿಧದ ಆತಂಕಗಳ ನಡುವೆ ಉಸಿರಾಡುತ್ತಿದೆ. ಮತಾಂಧತೆಯ ಅಟ್ಟಹಾಸ ನಿರಂತರವಾಗಿ ಹೆಚ್ಚಾಗುತ್ತಿದೆ. ನನ್ನ ಮತವೇ ಶ್ರೇಷ್ಠ, ಉಳಿದವರದ್ದು ಕನಿಷ್ಠ – ಎಂಬ ಧೋರಣೆಯೇ ಇದಕ್ಕೆ ಕಾರಣವಾಗಿರುವುದು. ಇಂಥ ಧೋರಣೆಯನ್ನೇ ಮನಸ್ಸಿನಲ್ಲಿರುವ ಕಸ ಎಂದು ಸುಭಾಷಿತ ಕರೆಯುತ್ತಿರುವುದು. ನಮ್ಮ ಮುಂದೆ ಇರುವ ಮನುಷ್ಯರು ಕೂಡ ನಮ್ಮಂತೆಯೇ ಮನುಷ್ಯರು; ಅವರಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ – ಎಂಬ ಭಾವನೆ ಯಾರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿರುತ್ತದೆಯೋ ಅಂಥವರು ಮಾತ್ರ ಜಗತ್ತಿನಲ್ಲಿ ಶಾಂತಿ–ನೆಮ್ಮದಿಗಳನ್ನು ಉಂಟುಮಾಡಬಲ್ಲರು. ಎಲ್ಲರೂ ಶತ್ರುಗಳು ಎಂಬ ಭಾವನೆಯನ್ನೇ ಮನಸ್ಸಿನಲ್ಲಿ ತುಂಬಿಕೊಂಡಿದ್ದರೆ ಆಗ ಜಗತ್ತು ನಮ್ಮ ಪಾಲಿಗೆ ನರಕವಾಗಿಯೇ ಕಾಣುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>