ತಪಸ್ಸಿನ ಮೊದಲ ಹಂತವೇ ಕೋಪವನ್ನು ಕಳೆದುಕೊಳ್ಳುವುದು. ಹೀಗಾಗಿ ಕ್ರೋಧದಿಂದ ತಪಸ್ಸನ್ನು ಕಾಪಾಡಿಕೊಳ್ಳಬೇಕು. ಧರ್ಮ ಎಂದರೆ ಎಲ್ಲರನ್ನೂ ಸಮಾನವಾಗಿ ಕಾಣುವಂಥ ಮನೋಧರ್ಮ. ಎಲ್ಲರನ್ನೂ ಸಮಾನವಾಗಿ ಕಂಡಾಗ ಯಾರ ಬಗ್ಗೆಯಾದರೂ ಹೊಟ್ಟೆಕಿಚ್ಚು ಹೇಗೆ ಕಾಣಿಸಿಕೊಂಡೀತು? ವಿದ್ಯೆಯನ್ನು ಸಂಪಾದಿಸಬೇಕಾದರೆ ಮಾನ–ಅಪಮಾನಗಳನ್ನು ಬಿಡಬೇಕು ಎಂದು ಸುಭಾಷಿತ ಹೇಳುತ್ತಿದೆ. ಕಲಿಕೆಯ ಮೊದಲ ಹೆಜ್ಜೆಯೇ ‘ನನಗೆ ಗೊತ್ತಿಲ್ಲ‘ ಎಂಬುದರಿಂದ ಆರಂಭವಾಗಬೇಕು. ಹೀಗೆ ಹೇಳಲು ನಮ್ಮ ಅಹಂಕಾರ ಅಡ್ಡಬರಬಾರದು. ಇದನ್ನೇ ಸುಭಾಷಿತ ಹೇಳುತ್ತಿರುವುದು.