<p><strong>ಉಭಯೋರ್ನಾಸ್ತಿ ಭೋಗೇಚ್ಛಾ ಪರಾರ್ಥಂ ಧನಸಂಚಯಃ ।</strong></p>.<p><strong>ಕೃಪಣೋದಾರಯೋಃ ಪಶ್ಯ ತಥಾಪಿ ಮಹದಂತರಮ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ಜಿಪುಣ ಮತ್ತು ಉದಾರಿ – ಇವರಿಬ್ಬರಿಗೂ ನಾವು ಅನುಭವಿಸಬೇಕೆಂಬ ಇಚ್ಛೆ ಇಲ್ಲ; ಇಬ್ಬರೂ ಮತ್ತೊಬ್ಬರಿಗಾಗಿಯೇ ಹಣವನ್ನು ಕೂಡಿಡುವುದು. ಆದರೂ ಇಬ್ಬರಲ್ಲಿ ಇರುವ ಅಪಾರವಾದ ವ್ಯತ್ಯಾಸವನ್ನು ನೋಡು.‘</p>.<p>ಈ ಸುಭಾಷಿತವನ್ನು ಕೇಳಿದ ತತ್ಕ್ಷಣ ಹೊಳೆದ ಹೋಲಿಕೆ. ಭಯೋತ್ಪಾದಕ ಮತ್ತು ಸೈನಿಕರ ಉದಾಹರಣೆ; ಇವರಿಬ್ಬರೂ ಬಂದೂಕನ್ನು ಹಿಡಿದವರೇ. ಆದರೆ ಇಬ್ಬರು ಅದನ್ನು ಬಳಸುವ ಉದ್ದೇಶದಲ್ಲಿ ಎಷ್ಟು ವ್ಯತ್ಯಾಸ ಇದೆಯಲ್ಲವೆ?</p>.<p>ಇರಲಿ, ಸುಭಾಷಿತದ ವಿವರಣೆಯನ್ನು ನೋಡೋಣ.</p>.<p>ಜಿಪುಣ – ಎಂದರೆ ಯಾರು? ಯಾರು ತನ್ನ ಹಣವನ್ನೂ ಸಂಪತ್ತನ್ನೂ ತನಗಾಗಿ ಖರ್ಚು ಮಾಡುವುದಿಲ್ಲವೋ, ಅವನು ಜಿಪುಣ. ಅವನು ತನ್ನ ಸಂಪಾದನೆಯ ಒಂದೇ ಒಂದು ಪೈಸೆಯನ್ನೂ ತನಗಾಗಿ ಬಳಸಿಕೊಳ್ಳಲು ಇಚ್ಛಿಸಲಾರ, ಪಾಪ! ಹಾಗಾದರೆ ಅವನು ಸಂಪತ್ತನ್ನು ಏಕಾದರೂ ಹೀಗೆ ಸಂಗ್ರಹಿಸುತ್ತಾನೆ?</p>.<p>ಉದಾರಿ – ಎಂದರೆ ಯಾರು? ಯಾರು ತನ್ನ ಹಣವನ್ನೂ ಸಂಪತ್ತನ್ನೂ ತನಗಾಗಿ ಖರ್ಚು ಮಾಡುವುದಿಲ್ಲವೋ, ಅವನು ಉದಾರಿ. ಅವನು ತನ್ನ ಸಂಪಾದನೆಯ ಒಂದೇ ಒಂದು ಪೈಸೆಯನ್ನೂ ತನಗಾಗಿ ಬಳಸಿಕೊಳ್ಳಲು ಇಚ್ಛಿಸುವುದಿಲ್ಲ, ಪಾಪ! ಹಾಗಾದರೆ ಅವನು ಸಂಪತ್ತನ್ನು ಏಕಾದರೂ ಹೀಗೆ ಸಂಗ್ರಹಿಸುತ್ತಾನೆ?</p>.<p>ಅಂದರೆ, ಜಿಪುಣ ಮತ್ತು ಉದಾರಿ – ಇವರಿಬ್ಬರ ನಡುವೆ ವ್ಯತ್ಯಾಸವೇ ಇಲ್ಲವೆ? ಈ ಇಬ್ಬರೂ ತಮಗಾಗಿ ತಮ್ಮ ಸಂಪತ್ತನ್ನು ಬಳಸಿಕೊಳ್ಳುವುದಿಲ್ಲ. ಹಾಗಾದರೆ ಹೀಗೆ ಸಂಗ್ರಹಿಸುವುದಾದರೂ ಏಕೆ? ಇಬ್ಬರೂ ಪರರಿಗಾಗಿಯೇ, ಮತ್ತೊಬ್ಬರಿಗಾಗಿಯೇ ಸಂಗ್ರಹಿಸುವುದು. ಇಲ್ಲೂ ಇಬ್ಬರ ನಡುವೆ ವ್ಯತ್ಯಾಸವಿಲ್ಲವಲ್ಲ! ಹೌದು, ಇಲ್ಲಿ ತನಕ ವ್ಯತ್ಯಾಸ ಇಲ್ಲ. ಆದರೆ ಈ ‘ಪರರು‘ ಯಾರು ಎಂದು ನೋಡುವಾಗ ಜಿಪುಣನಿಗೂ ಉದಾರಿಗೂ ಇರುವ ವ್ಯತ್ಯಾಸ ತಿಳಿಯುತ್ತದೆ.</p>.<p>ಜಿಪುಣನ ದೃಷ್ಟಿಯಲ್ಲಿ ’ಪರರು‘ ಎಂದರೆ ಅವನ ಹೆಂಡತಿ, ತಂದೆ, ತಾಯಿ, ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಅವರ ಮೊಮ್ಮಕ್ಕಳು ... ಹೀಗೆ ಅವನ ಕುಟುಂಬದವರೆಲ್ಲರೂ ಸೇರುತ್ತಾರೆ.</p>.<p>ಉದಾರಿಯ ದೃಷ್ಟಿಯಲ್ಲಿ ’ಪರರು‘ ಎಂದರೆ ಸಮಾಜ, ಸಮಾಜ, ಸಮಾಜ... ಇಡಿಯ ಸಮಾಜವೇ ನನ್ನ ಕುಟುಂಬ ಎಂಬಂಥ ನಿಲುವು. ಈ ಶ್ಲೋಕವನ್ನು ನೋಡಿ, ಈ ಭಾವವನ್ನು ಎಷ್ಟು ಚೆನ್ನಾಗಿ ಹೇಳಿದೆ:</p>.<p>ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ ।</p>.<p>ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ।।</p>.<p>’ಇವನು ನನ್ನವನು, ಇವನು ಬೇರೆಯವನು – ಎಂಬ ಎಣಿಕೆ ಹುಲುಮನಸ್ಸಿನವರದ್ದು; ಉದಾರಿಗೆ ಈ ಭೂಮಂಡಲವೇ ತನ್ನ ಕುಟುಂಬವಾಗಿರುತ್ತದೆ‘ – ಎಂಬುದು ಈ ಶ್ಲೋಕದ ತಾತ್ಪರ್ಯ.</p>.<p>ಹೌದು, ಜಿಪುಣನಿಗೂ ಉದಾರಿಗೂ ಹೆಚ್ಚು ವ್ಯತ್ಯಾಸವಿಲ್ಲ; ಇರುವುದೆಲ್ಲವೂ ಒಂದೇ ವ್ಯತ್ಯಾಸ: ಉದಾರಿಗೆ ವಿಶ್ವವೇ ತನ್ನ ಕುಟುಂಬವಾದರೆ, ಜಿಪುಣನಿಗೆ ಅವನ ಕುಟುಂಬವೇ ಅವನ ವಿಶ್ವ ಆಗಿರುತ್ತದೆಯಷ್ಟೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಭಯೋರ್ನಾಸ್ತಿ ಭೋಗೇಚ್ಛಾ ಪರಾರ್ಥಂ ಧನಸಂಚಯಃ ।</strong></p>.<p><strong>ಕೃಪಣೋದಾರಯೋಃ ಪಶ್ಯ ತಥಾಪಿ ಮಹದಂತರಮ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ಜಿಪುಣ ಮತ್ತು ಉದಾರಿ – ಇವರಿಬ್ಬರಿಗೂ ನಾವು ಅನುಭವಿಸಬೇಕೆಂಬ ಇಚ್ಛೆ ಇಲ್ಲ; ಇಬ್ಬರೂ ಮತ್ತೊಬ್ಬರಿಗಾಗಿಯೇ ಹಣವನ್ನು ಕೂಡಿಡುವುದು. ಆದರೂ ಇಬ್ಬರಲ್ಲಿ ಇರುವ ಅಪಾರವಾದ ವ್ಯತ್ಯಾಸವನ್ನು ನೋಡು.‘</p>.<p>ಈ ಸುಭಾಷಿತವನ್ನು ಕೇಳಿದ ತತ್ಕ್ಷಣ ಹೊಳೆದ ಹೋಲಿಕೆ. ಭಯೋತ್ಪಾದಕ ಮತ್ತು ಸೈನಿಕರ ಉದಾಹರಣೆ; ಇವರಿಬ್ಬರೂ ಬಂದೂಕನ್ನು ಹಿಡಿದವರೇ. ಆದರೆ ಇಬ್ಬರು ಅದನ್ನು ಬಳಸುವ ಉದ್ದೇಶದಲ್ಲಿ ಎಷ್ಟು ವ್ಯತ್ಯಾಸ ಇದೆಯಲ್ಲವೆ?</p>.<p>ಇರಲಿ, ಸುಭಾಷಿತದ ವಿವರಣೆಯನ್ನು ನೋಡೋಣ.</p>.<p>ಜಿಪುಣ – ಎಂದರೆ ಯಾರು? ಯಾರು ತನ್ನ ಹಣವನ್ನೂ ಸಂಪತ್ತನ್ನೂ ತನಗಾಗಿ ಖರ್ಚು ಮಾಡುವುದಿಲ್ಲವೋ, ಅವನು ಜಿಪುಣ. ಅವನು ತನ್ನ ಸಂಪಾದನೆಯ ಒಂದೇ ಒಂದು ಪೈಸೆಯನ್ನೂ ತನಗಾಗಿ ಬಳಸಿಕೊಳ್ಳಲು ಇಚ್ಛಿಸಲಾರ, ಪಾಪ! ಹಾಗಾದರೆ ಅವನು ಸಂಪತ್ತನ್ನು ಏಕಾದರೂ ಹೀಗೆ ಸಂಗ್ರಹಿಸುತ್ತಾನೆ?</p>.<p>ಉದಾರಿ – ಎಂದರೆ ಯಾರು? ಯಾರು ತನ್ನ ಹಣವನ್ನೂ ಸಂಪತ್ತನ್ನೂ ತನಗಾಗಿ ಖರ್ಚು ಮಾಡುವುದಿಲ್ಲವೋ, ಅವನು ಉದಾರಿ. ಅವನು ತನ್ನ ಸಂಪಾದನೆಯ ಒಂದೇ ಒಂದು ಪೈಸೆಯನ್ನೂ ತನಗಾಗಿ ಬಳಸಿಕೊಳ್ಳಲು ಇಚ್ಛಿಸುವುದಿಲ್ಲ, ಪಾಪ! ಹಾಗಾದರೆ ಅವನು ಸಂಪತ್ತನ್ನು ಏಕಾದರೂ ಹೀಗೆ ಸಂಗ್ರಹಿಸುತ್ತಾನೆ?</p>.<p>ಅಂದರೆ, ಜಿಪುಣ ಮತ್ತು ಉದಾರಿ – ಇವರಿಬ್ಬರ ನಡುವೆ ವ್ಯತ್ಯಾಸವೇ ಇಲ್ಲವೆ? ಈ ಇಬ್ಬರೂ ತಮಗಾಗಿ ತಮ್ಮ ಸಂಪತ್ತನ್ನು ಬಳಸಿಕೊಳ್ಳುವುದಿಲ್ಲ. ಹಾಗಾದರೆ ಹೀಗೆ ಸಂಗ್ರಹಿಸುವುದಾದರೂ ಏಕೆ? ಇಬ್ಬರೂ ಪರರಿಗಾಗಿಯೇ, ಮತ್ತೊಬ್ಬರಿಗಾಗಿಯೇ ಸಂಗ್ರಹಿಸುವುದು. ಇಲ್ಲೂ ಇಬ್ಬರ ನಡುವೆ ವ್ಯತ್ಯಾಸವಿಲ್ಲವಲ್ಲ! ಹೌದು, ಇಲ್ಲಿ ತನಕ ವ್ಯತ್ಯಾಸ ಇಲ್ಲ. ಆದರೆ ಈ ‘ಪರರು‘ ಯಾರು ಎಂದು ನೋಡುವಾಗ ಜಿಪುಣನಿಗೂ ಉದಾರಿಗೂ ಇರುವ ವ್ಯತ್ಯಾಸ ತಿಳಿಯುತ್ತದೆ.</p>.<p>ಜಿಪುಣನ ದೃಷ್ಟಿಯಲ್ಲಿ ’ಪರರು‘ ಎಂದರೆ ಅವನ ಹೆಂಡತಿ, ತಂದೆ, ತಾಯಿ, ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಅವರ ಮೊಮ್ಮಕ್ಕಳು ... ಹೀಗೆ ಅವನ ಕುಟುಂಬದವರೆಲ್ಲರೂ ಸೇರುತ್ತಾರೆ.</p>.<p>ಉದಾರಿಯ ದೃಷ್ಟಿಯಲ್ಲಿ ’ಪರರು‘ ಎಂದರೆ ಸಮಾಜ, ಸಮಾಜ, ಸಮಾಜ... ಇಡಿಯ ಸಮಾಜವೇ ನನ್ನ ಕುಟುಂಬ ಎಂಬಂಥ ನಿಲುವು. ಈ ಶ್ಲೋಕವನ್ನು ನೋಡಿ, ಈ ಭಾವವನ್ನು ಎಷ್ಟು ಚೆನ್ನಾಗಿ ಹೇಳಿದೆ:</p>.<p>ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ ।</p>.<p>ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್ ।।</p>.<p>’ಇವನು ನನ್ನವನು, ಇವನು ಬೇರೆಯವನು – ಎಂಬ ಎಣಿಕೆ ಹುಲುಮನಸ್ಸಿನವರದ್ದು; ಉದಾರಿಗೆ ಈ ಭೂಮಂಡಲವೇ ತನ್ನ ಕುಟುಂಬವಾಗಿರುತ್ತದೆ‘ – ಎಂಬುದು ಈ ಶ್ಲೋಕದ ತಾತ್ಪರ್ಯ.</p>.<p>ಹೌದು, ಜಿಪುಣನಿಗೂ ಉದಾರಿಗೂ ಹೆಚ್ಚು ವ್ಯತ್ಯಾಸವಿಲ್ಲ; ಇರುವುದೆಲ್ಲವೂ ಒಂದೇ ವ್ಯತ್ಯಾಸ: ಉದಾರಿಗೆ ವಿಶ್ವವೇ ತನ್ನ ಕುಟುಂಬವಾದರೆ, ಜಿಪುಣನಿಗೆ ಅವನ ಕುಟುಂಬವೇ ಅವನ ವಿಶ್ವ ಆಗಿರುತ್ತದೆಯಷ್ಟೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>