<p><strong>ಮಮೇತಿ ಬಧ್ಯತೇ ಜಂತುರ್ನ ಮಮೇತಿ ಚ ಮುಚ್ಯತೇ ।</strong></p>.<p><strong>ಬಂಧಾಯ ವಿಷಯಾಸಕ್ತಂ ಮುಕ್ತೌ ನಿರ್ವಿಷಯಂ ಮನಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ನನ್ನದು ಎಂಬುದರಿಂದ ಮನುಷ್ಯನು ಬಂಧನಕ್ಕೊಳಗಾಗುತ್ತಾನೆ. ’ನನ್ನದಲ್ಲ’ ಎಂದು ತಿಳಿದುಕೊಳ್ಳವವನು ಮುಕ್ತನಾಗುತ್ತಾನೆ. ವಿಷಯಗಳಲ್ಲಿ ಆಸಕ್ತಿಯನ್ನು ಹೊಂದುವುದರಿಂದ ಬಂಧನ ಒದಗುತ್ತದೆ; ಆಸಕ್ತಿಯನ್ನು ಬಿಟ್ಟರೆ ಮೋಕ್ಷ ಲಭಿಸುತ್ತದೆ.’</p>.<p><strong>ದಿನದ ಸೂಕ್ತಿ ಕೇಳಿ: <a href="https://anchor.fm/prajavani/episodes/--eklgor/a-a3eeinn" target="_blank">ಬಂಧನ–ಮೋಕ್ಷ</a></strong></p>.<p>ಮನುಷ್ಯನಿಗಿರುವ ದೊಡ್ಡ ಶಕ್ತಿ ಮತ್ತು ಮಿತಿ ಎಂದರೆ ರಾಗ; ಇದನ್ನೇ ಪ್ರೀತಿ ಎಂದೂ ಕರೆಯಬಹುದು. ಇದರಿಂದಲೇ ನಾನು, ನನ್ನದು ಎಂಬ ಭಾವ ಅವನಲ್ಲಿ ಹುಟ್ಟುವುದು. ಈ ಭಾವವೇ ಅವನಲ್ಲಿ ಹುಟ್ಟದಿದ್ದರೆ ಅವನ ಜೀವನಕ್ಕೆ ಸ್ವಾರಸ್ಯವೇ ಇರದು; ಮಾತ್ರವಲ್ಲ, ಅವನ ಜೀವನಯಾನವೇ ನಡೆಯದು. ಏಕೆಂದರೆ ಅವನ ಜೀವನವನ್ನು ಮುಂದಕ್ಕೆ ಎಳೆಯಬಲ್ಲ ಸೆಳೆತವೇ ಇರುವುದಿಲ್ಲ.</p>.<p>ಆದರೆ ಇಲ್ಲೊಂದು ಸಮಸ್ಯೆಯೂ ಇದೇ. ನಮ್ಮಲ್ಲಿ ರಾಗ ಹೆಚ್ಚಾದರೆ ಆಗ ಅದೇ ಬಂಧನವೂ ಆಗುತ್ತದೆ. ನನ್ನದು, ನಾನು ಪ್ರೀತಿಸುವಂಥದ್ದು ಎಂಬುದು ಯಾವಾಗಲೂ ನನ್ನಲ್ಲೇ ಇರಲಿ – ಎಂಬ ಸೆಳೆತವೂ ತೀವ್ರವಾಗಿರುತ್ತದೆ. ಈ ಸೆಳೆತವನ್ನು ಮೀರುವುದು ಸುಲಭವಲ್ಲ. ನನ್ನದು, ನನಗೆ ಬೇಕಾದ್ದು – ಎಂದು ಆರಿಸಿಕೊಂಡಿರುವುದೆಲ್ಲವೂ ನಮ್ಮಲ್ಲಿಯೇ ಉಳಿದರೆ ಆಗ ಸಂತೋಷವಾಗುತ್ತದೆ; ಒಂದು ವೇಳೆ ಅದು ನಮ್ಮಿಂದ ದೂರವಾದರೆ ಆಗ ದುಃಖವೂ ಸಹಜವಾಗಿರುತ್ತದೆ.</p>.<p>ನಾನು, ನನ್ನದು – ಎಂಬ ಮನಸ್ಸು ಮತ್ತು ಬುದ್ಧಿಗಳು ಇನ್ನೂ ಹಲವು ಅಪಾಯಗಳನ್ನು ತಂದೊಡ್ಡಬಹುದು. ಇದೇ ನಮ್ಮಲ್ಲಿಯ ಸ್ವಾರ್ಥಕ್ಕೂ ಮೂಲಕಾರಣವಾಗುತ್ತದೆ. ಈ ರಾಗಬುದ್ಧಿ ಕ್ರಮೇಣ ಮೋಹಕ್ಕೂ ಅನಂತರ ದ್ವೇಷಕ್ಕೂ ಆ ಬಳಿಕ ಕ್ರೋಧಕ್ಕೂ ಹೇತುವಾಗುತ್ತದೆ. ಇದೇ ಬಂಧನ; ಎಂದರೆ ನಾನು, ನನ್ನದು – ಎಂಬ ಚಕ್ರದಲ್ಲಿಯೇ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ. ಸುಭಾಷಿತ ಹೀಗಾಗಿಯೇ ಹೇಳುತ್ತಿರುವುದು, ’ನನ್ನದು‘ ಎಂಬುದರಿಂದ ಬಿಡಿಸಿಕೊಂಡರೆ ಆಗ ನಮಗೆ ಮುಕ್ತಸ್ಥಿತಿ ಒದಗುತ್ತದೆ – ಎಂದು.</p>.<p>ನಮ್ಮ ನಿಜವಾದ ಸ್ವರೂಪವನ್ನು ಅರಿತುಕೊಳ್ಳದಿರುವುದಕ್ಕೂ ಈ ರಾಗ–ದ್ವೇಷ–ಮೋಹಗಳೇ ಕಾರಣ ಎಂದು ನಮ್ಮ ಶಾಸ್ತ್ರಗಳು ಕೂಡ ಹೇಳುತ್ತವೆ. ಈ ಅಜ್ಞಾನದ ವರ್ತುಲದಿಂದ ಬಿಡಿಸಿಕೊಳ್ಳವುದನ್ನೇ ಅವು ಮೋಕ್ಷ ಎಂದು ಕರೆದಿರುವುದು.</p>.<p>ಆದರೆ ಈ ಬಂಧನದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ; ನಿರಂತರ ಸಾಧನೆಯಿಂದಷ್ಟೆ ಇದು ಸಾಧ್ಯವಾದೀತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಮೇತಿ ಬಧ್ಯತೇ ಜಂತುರ್ನ ಮಮೇತಿ ಚ ಮುಚ್ಯತೇ ।</strong></p>.<p><strong>ಬಂಧಾಯ ವಿಷಯಾಸಕ್ತಂ ಮುಕ್ತೌ ನಿರ್ವಿಷಯಂ ಮನಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ನನ್ನದು ಎಂಬುದರಿಂದ ಮನುಷ್ಯನು ಬಂಧನಕ್ಕೊಳಗಾಗುತ್ತಾನೆ. ’ನನ್ನದಲ್ಲ’ ಎಂದು ತಿಳಿದುಕೊಳ್ಳವವನು ಮುಕ್ತನಾಗುತ್ತಾನೆ. ವಿಷಯಗಳಲ್ಲಿ ಆಸಕ್ತಿಯನ್ನು ಹೊಂದುವುದರಿಂದ ಬಂಧನ ಒದಗುತ್ತದೆ; ಆಸಕ್ತಿಯನ್ನು ಬಿಟ್ಟರೆ ಮೋಕ್ಷ ಲಭಿಸುತ್ತದೆ.’</p>.<p><strong>ದಿನದ ಸೂಕ್ತಿ ಕೇಳಿ: <a href="https://anchor.fm/prajavani/episodes/--eklgor/a-a3eeinn" target="_blank">ಬಂಧನ–ಮೋಕ್ಷ</a></strong></p>.<p>ಮನುಷ್ಯನಿಗಿರುವ ದೊಡ್ಡ ಶಕ್ತಿ ಮತ್ತು ಮಿತಿ ಎಂದರೆ ರಾಗ; ಇದನ್ನೇ ಪ್ರೀತಿ ಎಂದೂ ಕರೆಯಬಹುದು. ಇದರಿಂದಲೇ ನಾನು, ನನ್ನದು ಎಂಬ ಭಾವ ಅವನಲ್ಲಿ ಹುಟ್ಟುವುದು. ಈ ಭಾವವೇ ಅವನಲ್ಲಿ ಹುಟ್ಟದಿದ್ದರೆ ಅವನ ಜೀವನಕ್ಕೆ ಸ್ವಾರಸ್ಯವೇ ಇರದು; ಮಾತ್ರವಲ್ಲ, ಅವನ ಜೀವನಯಾನವೇ ನಡೆಯದು. ಏಕೆಂದರೆ ಅವನ ಜೀವನವನ್ನು ಮುಂದಕ್ಕೆ ಎಳೆಯಬಲ್ಲ ಸೆಳೆತವೇ ಇರುವುದಿಲ್ಲ.</p>.<p>ಆದರೆ ಇಲ್ಲೊಂದು ಸಮಸ್ಯೆಯೂ ಇದೇ. ನಮ್ಮಲ್ಲಿ ರಾಗ ಹೆಚ್ಚಾದರೆ ಆಗ ಅದೇ ಬಂಧನವೂ ಆಗುತ್ತದೆ. ನನ್ನದು, ನಾನು ಪ್ರೀತಿಸುವಂಥದ್ದು ಎಂಬುದು ಯಾವಾಗಲೂ ನನ್ನಲ್ಲೇ ಇರಲಿ – ಎಂಬ ಸೆಳೆತವೂ ತೀವ್ರವಾಗಿರುತ್ತದೆ. ಈ ಸೆಳೆತವನ್ನು ಮೀರುವುದು ಸುಲಭವಲ್ಲ. ನನ್ನದು, ನನಗೆ ಬೇಕಾದ್ದು – ಎಂದು ಆರಿಸಿಕೊಂಡಿರುವುದೆಲ್ಲವೂ ನಮ್ಮಲ್ಲಿಯೇ ಉಳಿದರೆ ಆಗ ಸಂತೋಷವಾಗುತ್ತದೆ; ಒಂದು ವೇಳೆ ಅದು ನಮ್ಮಿಂದ ದೂರವಾದರೆ ಆಗ ದುಃಖವೂ ಸಹಜವಾಗಿರುತ್ತದೆ.</p>.<p>ನಾನು, ನನ್ನದು – ಎಂಬ ಮನಸ್ಸು ಮತ್ತು ಬುದ್ಧಿಗಳು ಇನ್ನೂ ಹಲವು ಅಪಾಯಗಳನ್ನು ತಂದೊಡ್ಡಬಹುದು. ಇದೇ ನಮ್ಮಲ್ಲಿಯ ಸ್ವಾರ್ಥಕ್ಕೂ ಮೂಲಕಾರಣವಾಗುತ್ತದೆ. ಈ ರಾಗಬುದ್ಧಿ ಕ್ರಮೇಣ ಮೋಹಕ್ಕೂ ಅನಂತರ ದ್ವೇಷಕ್ಕೂ ಆ ಬಳಿಕ ಕ್ರೋಧಕ್ಕೂ ಹೇತುವಾಗುತ್ತದೆ. ಇದೇ ಬಂಧನ; ಎಂದರೆ ನಾನು, ನನ್ನದು – ಎಂಬ ಚಕ್ರದಲ್ಲಿಯೇ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ. ಸುಭಾಷಿತ ಹೀಗಾಗಿಯೇ ಹೇಳುತ್ತಿರುವುದು, ’ನನ್ನದು‘ ಎಂಬುದರಿಂದ ಬಿಡಿಸಿಕೊಂಡರೆ ಆಗ ನಮಗೆ ಮುಕ್ತಸ್ಥಿತಿ ಒದಗುತ್ತದೆ – ಎಂದು.</p>.<p>ನಮ್ಮ ನಿಜವಾದ ಸ್ವರೂಪವನ್ನು ಅರಿತುಕೊಳ್ಳದಿರುವುದಕ್ಕೂ ಈ ರಾಗ–ದ್ವೇಷ–ಮೋಹಗಳೇ ಕಾರಣ ಎಂದು ನಮ್ಮ ಶಾಸ್ತ್ರಗಳು ಕೂಡ ಹೇಳುತ್ತವೆ. ಈ ಅಜ್ಞಾನದ ವರ್ತುಲದಿಂದ ಬಿಡಿಸಿಕೊಳ್ಳವುದನ್ನೇ ಅವು ಮೋಕ್ಷ ಎಂದು ಕರೆದಿರುವುದು.</p>.<p>ಆದರೆ ಈ ಬಂಧನದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ; ನಿರಂತರ ಸಾಧನೆಯಿಂದಷ್ಟೆ ಇದು ಸಾಧ್ಯವಾದೀತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>