<p>ಇಂದು (ಮಂಗಳವಾರ) ಸಂಕಷ್ಟಹರ ಗಣಪತಿಯನ್ನು ವಿಶೇಷವಾಗಿ ಆರಾಧಿಸುವ ಅಂಗಾರಕ ಸಂಕಷ್ಟಿ.</p><p>ಪ್ರತಿ ತಿಂಗಳಲ್ಲಿ ಬರುವ ಎರಡು ಚತುರ್ಥಿಯಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿ ಎಂದು, ಅಮಾವಾಸ್ಯೆಯ ನಂತರ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ</p><p>ಮಂಗಳವಾರ ಚತುರ್ಥಿ ಬಂದರೆ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನಕ್ಕೆ ಬಹಳ ಮಹತ್ವವಿದೆ. </p><p>ಪುರಾಣಗಳ ಪ್ರಕಾರ, ಶಿವನು ತನ್ನ ಪುತ್ರನಾದ ಗಣೇಶನನ್ನು ಎಲ್ಲಾ ದೇವರುಗಳ ಪೂಜೆಗೆ ಮೊದಲು ಪೂಜಿತನೆಂದು ಘೋಷಣೆ ಮಾಡಿದ ದಿನ ಎನ್ನಲಾಗುತ್ತದೆ.</p><p>ಈ ದಿನ ಗಣೇಶನು ಧರೆಗೆ ಇಳಿದು ಬಂದು ಭಕ್ತರ ಸಂಕಷ್ಟಗಳನ್ನು ಆಲಿಸುತ್ತಾರೆ ಎಂದೇ ನಂಬಲಾಗುತ್ತದೆ. </p>.ಅಂಗಾರಕ ಸಂಕಷ್ಟಿ ವಿಶೇಷ ಪೂಜೆ.ಅಂಗಾರಕ ಸಂಕಷ್ಟಿ: ಗಣಪನಿಗೆ ವಿಶೇಷ ಪೂಜೆ.<p><strong>ಅಂಗಾರಕ ಸಂಕಷ್ಟಿಯ ಪೂಜೆಯನ್ನು ಹೀಗೆ ಮಾಡಿ</strong></p><p>ಅಷ್ಟೋತ್ತರ ಮಂತ್ರ ಪಠಣೆ, ದೂರ್ವೆ ಅರ್ಪಣೆ ಮಾಡಿ, ಹೂಗಳನ್ನು ಅರ್ಪಿಸಿ, ಧೂಪ –ದೀಪಗಳಿಂದ ಮಂಗಳಾರತಿ ಮಾಡಿ.</p><p>ಸಾಧ್ಯವಾದರೆ ಉಪವಾಸ ವೃತ ಕೈಗೊಳ್ಳಿ.</p><p>ರಾತ್ರಿ ಚಂದ್ರನ ದರ್ಶನದ ನಂತರ ಉಪವಾಸವನ್ನು ಪೂರ್ಣಗೊಳಿಸಿ. ಒಂದು ವೇಳೆ ಚಂದ್ರ ಗೋಚರಿಸದಿದ್ದರೆ ಶಿವನ ತಲೆಯ ಮೇಲಿರುವ ಅಂದರೆ ಶಿವನ ಫೋಟೊದಲ್ಲಿರುವ ಚಂದ್ರನ ದರ್ಶನ ಮಾಡಿ ಉಪವಾಸವನ್ನು ಮುರಿಯಬಹುದು. ಆಗ ಪೂಜೆ ಪೂರ್ಣವಾಗುತ್ತದೆ.</p><p>ಉಪವಾಸ, ಪೂಜೆಗಳ ಮೂಲಕ ಈ ದಿನದಂದು ಗಣೇಶನನ್ನು ಆರಾಧಿಸಿದರೆ, ಅಷ್ಟಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಧನ, ಧಾನ್ಯ, ವಿದ್ಯೆ, ಆರೋಗ್ಯ, ಸಂತಾನಭಾಗ್ಯ ಸೇರಿ ಹಲವು ಫಲಗಳು ದೊರೆಯುತ್ತದೆ ಎನ್ನುತ್ತದೆ ಶಾಸ್ತ್ರ.</p>.ಸಂಕಷ್ಟಿ: ಕಷ್ಟಗಳ ಪರಿಹಾರಿ.ಚಂದ್ಗುಳಿ ಘಂಟೆ ಗಣಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂದು (ಮಂಗಳವಾರ) ಸಂಕಷ್ಟಹರ ಗಣಪತಿಯನ್ನು ವಿಶೇಷವಾಗಿ ಆರಾಧಿಸುವ ಅಂಗಾರಕ ಸಂಕಷ್ಟಿ.</p><p>ಪ್ರತಿ ತಿಂಗಳಲ್ಲಿ ಬರುವ ಎರಡು ಚತುರ್ಥಿಯಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿ ಎಂದು, ಅಮಾವಾಸ್ಯೆಯ ನಂತರ ಬರುವ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ</p><p>ಮಂಗಳವಾರ ಚತುರ್ಥಿ ಬಂದರೆ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನಕ್ಕೆ ಬಹಳ ಮಹತ್ವವಿದೆ. </p><p>ಪುರಾಣಗಳ ಪ್ರಕಾರ, ಶಿವನು ತನ್ನ ಪುತ್ರನಾದ ಗಣೇಶನನ್ನು ಎಲ್ಲಾ ದೇವರುಗಳ ಪೂಜೆಗೆ ಮೊದಲು ಪೂಜಿತನೆಂದು ಘೋಷಣೆ ಮಾಡಿದ ದಿನ ಎನ್ನಲಾಗುತ್ತದೆ.</p><p>ಈ ದಿನ ಗಣೇಶನು ಧರೆಗೆ ಇಳಿದು ಬಂದು ಭಕ್ತರ ಸಂಕಷ್ಟಗಳನ್ನು ಆಲಿಸುತ್ತಾರೆ ಎಂದೇ ನಂಬಲಾಗುತ್ತದೆ. </p>.ಅಂಗಾರಕ ಸಂಕಷ್ಟಿ ವಿಶೇಷ ಪೂಜೆ.ಅಂಗಾರಕ ಸಂಕಷ್ಟಿ: ಗಣಪನಿಗೆ ವಿಶೇಷ ಪೂಜೆ.<p><strong>ಅಂಗಾರಕ ಸಂಕಷ್ಟಿಯ ಪೂಜೆಯನ್ನು ಹೀಗೆ ಮಾಡಿ</strong></p><p>ಅಷ್ಟೋತ್ತರ ಮಂತ್ರ ಪಠಣೆ, ದೂರ್ವೆ ಅರ್ಪಣೆ ಮಾಡಿ, ಹೂಗಳನ್ನು ಅರ್ಪಿಸಿ, ಧೂಪ –ದೀಪಗಳಿಂದ ಮಂಗಳಾರತಿ ಮಾಡಿ.</p><p>ಸಾಧ್ಯವಾದರೆ ಉಪವಾಸ ವೃತ ಕೈಗೊಳ್ಳಿ.</p><p>ರಾತ್ರಿ ಚಂದ್ರನ ದರ್ಶನದ ನಂತರ ಉಪವಾಸವನ್ನು ಪೂರ್ಣಗೊಳಿಸಿ. ಒಂದು ವೇಳೆ ಚಂದ್ರ ಗೋಚರಿಸದಿದ್ದರೆ ಶಿವನ ತಲೆಯ ಮೇಲಿರುವ ಅಂದರೆ ಶಿವನ ಫೋಟೊದಲ್ಲಿರುವ ಚಂದ್ರನ ದರ್ಶನ ಮಾಡಿ ಉಪವಾಸವನ್ನು ಮುರಿಯಬಹುದು. ಆಗ ಪೂಜೆ ಪೂರ್ಣವಾಗುತ್ತದೆ.</p><p>ಉಪವಾಸ, ಪೂಜೆಗಳ ಮೂಲಕ ಈ ದಿನದಂದು ಗಣೇಶನನ್ನು ಆರಾಧಿಸಿದರೆ, ಅಷ್ಟಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಧನ, ಧಾನ್ಯ, ವಿದ್ಯೆ, ಆರೋಗ್ಯ, ಸಂತಾನಭಾಗ್ಯ ಸೇರಿ ಹಲವು ಫಲಗಳು ದೊರೆಯುತ್ತದೆ ಎನ್ನುತ್ತದೆ ಶಾಸ್ತ್ರ.</p>.ಸಂಕಷ್ಟಿ: ಕಷ್ಟಗಳ ಪರಿಹಾರಿ.ಚಂದ್ಗುಳಿ ಘಂಟೆ ಗಣಪ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>