‘ಚಾತುರ್ಮಾಸ್ಯದ ಸಂದರ್ಭದಲ್ಲಿ ಪ್ರತಿವರ್ಷ ಬೇರೆ ಬೇರೆ ಸೀಮೆಯ ಶಿಷ್ಯರಿಂದ ಪ್ರತಿದಿನ ಶ್ರೀಗಳ ಪಾದಪೂಜೆ, ಪುರುಷರು ರುದ್ರಾನುಷ್ಠಾನ, ಗಾಯತ್ರಿ ಅನುಷ್ಠಾನ, ಮಾತೆಯರು ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ ಮಾಡುತ್ತಿದ್ದರು. ಮಧ್ಯಾಹ್ನದ ಅವಧಿಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ಶಿಷ್ಯರಿಗೆ ಹಸಿರು ಮಂತ್ರಾಕ್ಷತೆ (ಪ್ರತಿಯೊಬ್ಬರಿಗೂ ಒಂದು ಸಸಿ) ನೀಡುತ್ತಿದ್ದರು. ಈ ಬಾರಿ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವ ಕಾರಣಕ್ಕೆ, ಸಂಕ್ಷಿಪ್ತವಾಗಿ ಈ ಕಾರ್ಯಕ್ರಮ ನಡೆಯುತ್ತದೆ. ಪರಂಪರೆಗೆ ಚ್ಯುತಿ ಬಾರದಂತೆ, ಒಂದು ಸೀಮೆಯಿಂದ 8–10 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ’ ಎನ್ನುತ್ತಾರೆ, ಮಠದ ಆಡಳಿತ ಮಂಡಳಿ ಪ್ರಮುಖ ಆರ್.ಎಸ್. ಹೆಗಡೆ ಭೈರುಂಬೆ.