ಧಮ್ಮಚಕ್ಕಪವತ್ತನ ಸುತ್ತದಲ್ಲಿ ಭಗವಾನ್ ಬುದ್ಧರು ಹೇಳುವ ಹಾಗೆ ಮೊದಲನೇಯ ಸತ್ಯ ದುಃಖ ಸತ್ಯ, ಇಂದು ನಾವು ಎದುರಿಸುತ್ತಿರುವ ಕೊರೊನಾ ಸಮಸ್ಯೆ ಈ ಸತ್ಯ. ಎರಡನೇಯ ಸತ್ಯ ದುಃಖಕ್ಕೆ ಕಾರಣ, ತೃಷ್ಣೆ ಮತ್ತು ಅಜ್ಞಾನ. ಅಂದರೆ ಜಾಗರೂಕರಾಗಿ ಇಲ್ಲದೆ ಇರುವುದು. ಮೂರನೇಯ ಸತ್ಯ ದುಃಖದ ಅಂತ್ಯ ಅಂದರೆ, ಸುಖ. ಈ ಕೊರೊನಾ ಮಹಾಮಾರಿಗೆ ಪರಿಹಾರವಿದ್ದು, ಜಗತ್ತಿನ ಎಲ್ಲಾ ಜೀವಿಗಳಿಗೆ ಮೈತ್ರಿಯನ್ನು ನೀಡುತ್ತ, ಸಾವಧಾನವಾಗಿ ಇರುವುದು. ನಾಲ್ಕನೇಯ ಸತ್ಯ, ಸುಖಕ್ಕೆ ಮಾರ್ಗ, ಆ ಸುಖದ ಮಾರ್ಗ ಅಷ್ಠಾಂಗಿಕ ಮಾರ್ಗ. ಇಲ್ಲಿ ಸರಿಯಾದ ತಿಳಿವಳಿಕೆ, ಯೋಚನೆ, ಮಾತು, ಪ್ರಯತ್ನ, ಧ್ಯಾನ ಮತ್ತು ಎಲ್ಲ ಕೊರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸುತ್ತ ಪರಿಹಾರ ಪಡೆಯಬೇಕು.