ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು (1919–74) ಹಲವು ಗ್ರಂಥಗಳನ್ನೂ ಬರೆದವರು. ಅವುಗಳಲ್ಲಿ ತುಂಬ ಪ್ರಮುಖವಾದುದು ‘ದತ್ತಾತ್ರೇಯ – ದಿ ವೇ ಅಂಡ್ ಗೋಲ್ (ದತ್ತಾತ್ರೇಯ – ಸಾಗಬೇಕಾದ ದಾರಿ, ಹೊಂದಬೇಕಾದ ಗುರಿ). ಈ ಇಂಗ್ಲಿಷ್ಕೃತಿಯನ್ನು 1957ರಲ್ಲಿ ಲಂಡನ್ನ ‘ಜಾರ್ಜ್ ಆಲೆನ್ ಅಂಡ್ ಅನ್ವಿನ್ ಲಿಮಿಟೆಡ್’ ಪ್ರಕಾಶನ ಸಂಸ್ಥೆ ಪ್ರಕಟಿಸಿತು. 1982ರಲ್ಲಿ ಇದು ಕನ್ನಡಕ್ಕೂ ಅನುವಾದವಾಯಿತು; ಅನುವಾದಕರು ಸ. ವೆಂಕಟಾಚಲಪತಿ. (ಈಗ ಈ ಅನುವಾದಕೃತಿ ಲಭ್ಯ.)