<p><strong>ಕಲಬುರ್ಗಿ: </strong>ಇಲ್ಲಿನ ಬಿದ್ದಾಪುರ ಕಾಲೊನಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ, ಮಹಾಶಿವರಾತ್ರಿ ಅಂಗವಾಗಿ ವೈಭವದಿಂದ ಗಿರಿಜಾ ಕಲ್ಯಾಣೋತ್ಸವ ಜರುಗಿತು.</p>.<p>ಮಠದ ಆದಿಶಂಕರಾಚಾರ್ಯ ಅಷ್ಟೋತ್ತರ ಸೇವಾ ಸಮಿತಿ ವತಿಯಿಂದ ಆಚರಿಸಿದ ಈ ಕಲ್ಯಾಣ ಮಹೋತ್ಸವದಲ್ಲಿ ನಗರದ ಸುತ್ತಲಿನಿಂದ ನೂರಾರು ಗೃಹಿಣಿಯರು, ತರುಣಿಯರು ಪಾಲ್ಗೊಂಡು ತಮ್ಮ ಹರಕೆ ತೀರಿಸಿದರು.</p>.<p>ಪಾರ್ವತಿ ಹಾಗೂ ಪರಮೇಶ್ವರನ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅಭಿಷೇಕ, ಮಹಾರುದ್ರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವೈವಿಧ್ಯಮಯ ಪೂಜೆಗಳನ್ನು ನೆರವೇರಿಸಲಾಯಿತು.</p>.<p>ನಂತರ ಶಾಸ್ತ್ರೋಕ್ತವಾಗಿ ಪುಣ್ಯಾವಚನ ಹಾಗೂ ವಿವಾಹ ವಿಧಾನಗಳನ್ನು ನೆರವೇರಿಸಲಾಯಿತು. ಪುರೋಹಿತರು ವೇದ ಮಂತ್ರ ಪಠಣ ಮಾಡಿದರು. ಕಾರ್ಯಕ್ರಮದಲ್ಲಿ ಸೇರಿದ ವಿವಿಧ ಭಜನಾ ಮಂಡಳಿಗಳ ಮಹಿಳೆಯರು ಭಜನೆಗಳನ್ನು ಹಾಡಿ, ಶಿವನಾಮ ಜಪ ಮಾಡಿದರು.</p>.<p>ನವಲಿ ಕೃಷ್ಣಾಚಾರ್ಯ, ಚಂದ್ರಕಾಂತ ನಾಗೂರ, ನಾನಾಸಾಹೇಬ್ ನೇತೃತ್ವದಲ್ಲಿ ಅಷ್ಟೋತ್ತರ ಸೇವಾ ಸಮಿತಿಯ ಸದಸ್ಯರು ಈ ವಿವಾಹ ಮಹೋತ್ಸವನ್ನು ನೆರವೇರಿಸಿದರು.</p>.<p>ಬೆಳಿಗ್ಗೆಯಿಂದ ಸಂಜೆಯವರೆಗೂ ಅಪಾರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ರಾತ್ರಿ ಸಾಂಸ್ಕೃತಿಕ ಹಾಗೂ ಭಕ್ತಿ ಕಾರ್ಯಕ್ರಮಗಳು ನೆರವೇರಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಇಲ್ಲಿನ ಬಿದ್ದಾಪುರ ಕಾಲೊನಿಯಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ, ಮಹಾಶಿವರಾತ್ರಿ ಅಂಗವಾಗಿ ವೈಭವದಿಂದ ಗಿರಿಜಾ ಕಲ್ಯಾಣೋತ್ಸವ ಜರುಗಿತು.</p>.<p>ಮಠದ ಆದಿಶಂಕರಾಚಾರ್ಯ ಅಷ್ಟೋತ್ತರ ಸೇವಾ ಸಮಿತಿ ವತಿಯಿಂದ ಆಚರಿಸಿದ ಈ ಕಲ್ಯಾಣ ಮಹೋತ್ಸವದಲ್ಲಿ ನಗರದ ಸುತ್ತಲಿನಿಂದ ನೂರಾರು ಗೃಹಿಣಿಯರು, ತರುಣಿಯರು ಪಾಲ್ಗೊಂಡು ತಮ್ಮ ಹರಕೆ ತೀರಿಸಿದರು.</p>.<p>ಪಾರ್ವತಿ ಹಾಗೂ ಪರಮೇಶ್ವರನ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಅಭಿಷೇಕ, ಮಹಾರುದ್ರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವೈವಿಧ್ಯಮಯ ಪೂಜೆಗಳನ್ನು ನೆರವೇರಿಸಲಾಯಿತು.</p>.<p>ನಂತರ ಶಾಸ್ತ್ರೋಕ್ತವಾಗಿ ಪುಣ್ಯಾವಚನ ಹಾಗೂ ವಿವಾಹ ವಿಧಾನಗಳನ್ನು ನೆರವೇರಿಸಲಾಯಿತು. ಪುರೋಹಿತರು ವೇದ ಮಂತ್ರ ಪಠಣ ಮಾಡಿದರು. ಕಾರ್ಯಕ್ರಮದಲ್ಲಿ ಸೇರಿದ ವಿವಿಧ ಭಜನಾ ಮಂಡಳಿಗಳ ಮಹಿಳೆಯರು ಭಜನೆಗಳನ್ನು ಹಾಡಿ, ಶಿವನಾಮ ಜಪ ಮಾಡಿದರು.</p>.<p>ನವಲಿ ಕೃಷ್ಣಾಚಾರ್ಯ, ಚಂದ್ರಕಾಂತ ನಾಗೂರ, ನಾನಾಸಾಹೇಬ್ ನೇತೃತ್ವದಲ್ಲಿ ಅಷ್ಟೋತ್ತರ ಸೇವಾ ಸಮಿತಿಯ ಸದಸ್ಯರು ಈ ವಿವಾಹ ಮಹೋತ್ಸವನ್ನು ನೆರವೇರಿಸಿದರು.</p>.<p>ಬೆಳಿಗ್ಗೆಯಿಂದ ಸಂಜೆಯವರೆಗೂ ಅಪಾರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ರಾತ್ರಿ ಸಾಂಸ್ಕೃತಿಕ ಹಾಗೂ ಭಕ್ತಿ ಕಾರ್ಯಕ್ರಮಗಳು ನೆರವೇರಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>