ನಂತರ ಮಾತನಾಡಿದ ಸ್ವಾಮೀಜಿ, ‘ಯಾವುದೇ ಆಕಾರವಿಲ್ಲದ ಆ ಶಿವ ಒಂದು ಲಿಂಗರೂಪಿಯಾಗಿ ಜಗತ್ತಿನಾದ್ಯಾಂತ ಮಹಾಶಿವರಾತ್ರಿಯ ದಿನದಂದು ಸರ್ವಧರ್ಮಿಯರಿಗೂ, ಪ್ರಿಯನಾಗಿ ಪೂಜೆಗೊಳಪಡುತ್ತಿದ್ದಾನೆ. ಮಹಾ ಶಿವರಾತ್ರಿ ಹಬ್ಬ ಸರ್ವಧರ್ಮಿಯರಿಗೂ ಶ್ರೇಷ್ಠವಾಗಿದೆ. ಪ್ರತಿಯೊಬ್ಬರೂ ಶಿವನಾಮಸ್ಮರಣೆ ಮಾಡಿರಿ, ಇರುವ ಕಷ್ಟಗಳೆಲ್ಲವೂ ದೂರವಾಗುತ್ತವೆ’ ಎಂದು ನುಡಿದರು.
‘ಶಿವನ ಪೂಜೆಯಲ್ಲಿ ಶೃದ್ಧೆ ಇರಲಿ. ಮನಸ್ಸಿನಲ್ಲಿ ದೃಢ ಭಕ್ತಿಯಿರಲಿ ಆಗಲೇ ನೀವು ಮಾಡಿದ ಉಪವಾಸ, ಪೂಜೆ ದೇವರಿಗೆ ಅರ್ಪಿತವಾಗುತ್ತದೆ’ ಎಂದರು.